ತೆಂಗಿನಕಾಯಿ ಬೆಲೆ ಹೆಚ್ಚಳ : ಬೆಳೆಗಾರರಲ್ಲಿ ಮಂದಹಾಸ


Team Udayavani, Feb 5, 2017, 3:45 AM IST

Coconut-growers.jpg

ಉಡುಪಿ: ಅಡಿಕೆ ಬೆಲೆ ಏರಿಕೆಯಿಂದ ಸಂತುಷ್ಟಗೊಂಡಿರುವ ರೈತರ ಮೊಗದಲ್ಲಿ ಮತ್ತೂಮ್ಮೆ ಮಂದಹಾಸ ಮೂಡಿದೆ. ಕನಿಷ್ಠ ಬೆಲೆಗೆ ಇಳಿದಿದ್ದ ತೆಂಗಿನ ದರ ಈಗ ಚೇತೋಹಾರಿ ಏರಿಕೆ ಕಂಡಿದ್ದು, ತೆಂಗು ಬೆಳೆಗಾರರಲ್ಲಿ ಸಂತಸ ತಂದಿದೆ. ಸೆಪ್ಟೆಂಬರ್‌- ಅಕ್ಟೋಬರ್‌ ವೇಳೆಗೆ ಒಂದು ಕೆ.ಜಿ. ತೆಂಗಿಗೆ ಕೇವಲ 6 ರೂ. ಗೆ ಕುಸಿದಿದ್ದ ದರ ಈಗ 27 ರೂ.ವರೆಗೆ ಏರಿಕೆಯಾಗಿದೆ. 

ಕೆಲ ತಿಂಗಳ ಹಿಂದೆ 5-6 ರೂ. ಗೆ ಕೊಟ್ಟರೂ ತೆಂಗನ್ನು ಖರೀದಿಸುವವರೇ ಇರಲಿಲ್ಲ. 20 ವರ್ಷದ ಕೆಳಗಿನ ದರಕ್ಕೆ ಕುಸಿದ ಕಾರಣ ತೆಂಗು ಬೆಳೆಗಾರರು ಕಂಗಾಲಾಗಿದ್ದರು. ಆದರೆ ಕಳೆದ ತಿಂಗಳು 14 ರೂ. ಇದ್ದ 1 ಕೆ.ಜಿ. ತೆಂಗಿನ ಬೆಲೆ ಈಗ ಸರಿ ಸುಮಾರು ಎರಡು ಪಟ್ಟು ಅಂದರೆ 27 ರೂ. ವರೆಗೆ ಏರಿಕೆ ಕಂಡಿದೆ. ಅದಲ್ಲದೆ ಕೊಬ್ಬರಿಯ ದರದಲ್ಲೂ ಪ್ರಗತಿ ಕಂಡಿದ್ದು, 50 ರೂ. ಇದ್ದ ಬೆಲೆ ಈಗ 76 ರೂ. ಗೆ ಏರಿಕೆಯಾಗಿದೆ. ಮೊದಲೆಲ್ಲ ದೀಪಾವಳಿ ಕಳೆದ ಬಳಿಕ ದರದಲ್ಲಿ ಪ್ರಗತಿಯಾಗುತ್ತಿತ್ತು. ಆದರೆ ಈಗ ಅದು ಸಾಮಾನ್ಯವಾಗಿ ಮಕರ ಸಂಕ್ರಮಣದ ಅನಂತರ ತೆಂಗಿಗೆ ಬೇಡಿಕೆ ಹೆಚ್ಚಳದ ಜತೆಗೆ ದರ ಏರಿಕೆಯು ಕಾಣುತ್ತದೆ. 

ಇನ್ನೂ ಹೆಚ್ಚಳ ಸಾಧ್ಯತೆ
ಕೇರಳ ಹೊರತುಪಡಿಸಿ ದೇಶದಲ್ಲೇ ತೆಂಗು ಬೆಳೆಯುವ ಪಟ್ಟಿಯಲ್ಲಿ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದ್ದು, ಅದರಲ್ಲೂ ಕರಾವಳಿ ಭಾಗದಲ್ಲಿ ಅಧಿಕವಾಗಿ ತೆಂಗು ಬೆಳೆಗಾರರಿದ್ದಾರೆ. ಆದರೆ ಇತ್ತೀಚೆಗೆ ತೆಂಗಿನ ಉತ್ಪಾದನೆಯ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ತೆಂಗಿಗೆ ಇನ್ನಷ್ಟು ಬೇಡಿಕೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಬೇಡಿಕೆ ಹೆಚ್ಚಾದಂತೆ ದರದಲ್ಲಿಯೂ ಹೆಚ್ಚಳವಾಗಲಿದೆ. ಒಂದು ಕೆ.ಜಿ. ತೆಂಗಿನಕಾಯಿಗೆ 40 ರೂ. ವರೆಗೆ ದರ ಏರಿಕೆಯಾಗುವ ಸಂಭವವಿದೆ. 

ತೆಂಗಿನ ಪೌಡರ್‌ಗೆ ಭಾರೀ ಬೇಡಿಕೆ
ತೆಂಗಿಗೆ ಒಮ್ಮಿಂದೊಮ್ಮೆಲೆ ದರ ಏರಿಕೆಯಾಗಲು ಕಾರಣ ತೆಂಗಿನ ಕಾಯಿಯ ಹೂವನ್ನು ಯಂತ್ರದ ಮೂಲಕ ಪೌಡರ್‌ ಆಗಿ ಮಾರ್ಪಡಿಸಿ ಅದನ್ನು ಡಬ್ಬದಲ್ಲಿ ಪ್ಯಾಕ್‌ ಮಾಡಿ ದೇಶದ ಬೇರೆ ಬೇರೆ ರಾಜ್ಯಗಳು, ಮಾತ್ರವಲ್ಲದೆ ಗಲ್ಫ್ ದೇಶಗಳಿಗೂ ರಫ್ತು ಮಾಡಲಾಗುತ್ತದೆ. ಅದಕ್ಕೀಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಉಡುಪಿಯ ಹೆಬ್ರಿಯಲ್ಲಿ ಈ ರೀತಿಯ ತಂತ್ರಜ್ಞಾನವಿದ್ದು, ದಿನವೊಂದಕ್ಕೆ 10ರಿಂದ 20 ಸಾವಿರ ತೆಂಗಿನಕಾಯಿಯ ಹೂವನ್ನು ಸಂಗ್ರಹಿಸಲಾಗುತ್ತದೆ. 

ಮೌಲ್ಯವರ್ಧನೆ ಅಗತ್ಯ
ತೆಂಗಿಗೆ ಇರುವ ಮೌಲ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕಾರ್ಯ ಆಗಬೇಕು. ಆಗ ಮಾತ್ರ ತೆಂಗಿನ ಉತ್ಪಾದನೆ ಹೆಚ್ಚಳವಾಗಲು ಸಾಧ್ಯ. ತೆಂಗಿನ ಹೂವಿನಿಂದ ಮಾಡುವ ಪೌಡರ್‌ ಮಾಡುವ ಬಗ್ಗೆ ಮಾಹಿತಿ, ಕೊಬ್ಬರಿಯ ಶೇಖರಣೆ, ತೆಂಗಿನ ಸಿಪ್ಪೆಗೂ ಬೇಡಿಕೆ ಇದೆ. ಆ ಬಗ್ಗೆ ತಿಳಿಸಿಕೊಡುವ ಕೆಲಸ ಆಗಬೇಕು. ನಾರು, ನಾರಿನ ಬಳಿಕ ಉಳಿಯುವ ಸ್ಪಂಜಿನಂತೆ ಇರುವ ವಸ್ತುಗಳಿಗೂ ಭಾರೀ ಬೇಡಿಕೆ ಇದೆ. 

ತೆಂಗಿನ ಕಾಯಿಗೆ 20 ವರ್ಷಗಳ ಹಿಂದೆ 7-8 ರೂ. ದರ ಇತ್ತು. ಆಗ ಗೊಬ್ಬರ, ವಿದ್ಯುತ್‌ ದರ ಎಲ್ಲವೂ ಕಡಿಮೆ ಇತ್ತು. ಈಗ ಗೊಬ್ಬರದಿಂದ ಹಿಡಿದು ಎಲ್ಲದರ ಬೆಲೆಯಲ್ಲಿಯೂ ಹತ್ತು ಪಟ್ಟು ಹೆಚ್ಚಳವಾಗಿದ್ದು, ಆ ನಿಟ್ಟಿನಲ್ಲಿ ಕನಿಷ್ಠ ಅಂದರೂ 40 ರೂ. ಸಿಗವಂತೆ ಆಗಬೇಕು.

ಉತ್ಸಾಹದಾಯಕ ಬೆಳವಣಿಗೆ
ಬೆಲೆ ಏರಿಕೆಯಲ್ಲಿ ಪ್ರಗತಿ ಕಂಡಿದ್ದು, ತೆಂಗು ಬೆಳೆಗೆ ಪ್ರೋತ್ಸಾಹ ಸಿಗಲು ಸಹಾಕಾರಿ. ಇದೊಂದು ಉತ್ಸಾಹದಾಯಕ ಬೆಳವಣಿಗೆ. ತೆಂಗಿಗೆ ಕನಿಷ್ಠ 40 ರೂ. ದರ ಆದರೂ ಇರಬೇಕು. ಆಗ ಮಾತ್ರ ಬೆಳೆಗಾರರು ಲಾಭ ಗಳಿಸಲು ಸಾಧ್ಯ. ಆಗಾಗ ಬೆಲೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದ್ದು, ಆಗ ತೆಂಗು ಬೆಲೆಯ ಇಳುವರಿ ಇಳಿಮುಖವಾಗಲಿದೆ. ಆಗ ದರ ಏರಿಕೆಯಾದರೆ ಏನೂ ಪ್ರಯೋಜನವಾಗದು. 
 -ಬಂಟಕಲ್ಲು ರಾಮಕೃಷ್ಣ ಶರ್ಮ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ

ಕರಾವಳಿಗೆ ಮಾತ್ರ ತಲುಪಲ್ಲ
ಸರಕಾರ ಕಾಟಚಾರಕ್ಕೆ ತೆಂಗಿಗೆ ಬೆಂಬಲ ಬೆಲೆ ಘೋಷಣೆ ಮಾಡಿದರೂ, ಅದು ಕರಾವಳಿ ಭಾಗದ ರೈತರಿಗೆ ತಲುಪುವುದೇ ಇಲ್ಲ. ದರ ಕನಿಷ್ಠ ಮಟ್ಟಕ್ಕೆ ಇಳಿಕೆಯಾದಾಗ ಖರೀದಿ ಮಾರುಕಟ್ಟೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಅಲ್ಲಿ ತೆಂಗನ್ನು ಖರೀದಿ ಮಾಡಲೇ ಇಲ್ಲ. ಅಲ್ಲಿಗೆ ಅದು ಮುಚ್ಚಿ ಹೋಯಿತು. ಉತ್ಪಾದನೆ ವೆಚ್ಚಕ್ಕೆ ಅನುಗುಣವಾಗಿ ಬೆಳೆಯು ಸ್ವಲ್ಪ ಜಾಸ್ತಿಯಿದ್ದರೆ ತೆಂಗು ಬೆಳೆಗಾರರು ನೆಮ್ಮದಿಯ ಜೀವನ ನಡೆಸಬಹುದು. 
 – ಕುದಿ ಶ್ರೀನಿವಾಸ್‌ ಭಟ್‌, ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ 

ಕೇರಳ ಸರಕಾರ ಮಾದರಿ
ತೆಂಗು ಬೆಳೆಗಾರರಿಗೆ ಕೇರಳ ಸರಕಾರ ನೀಡುವಷ್ಟು ಉತ್ತೇಜನ ನಮ್ಮ ಸರಕಾರ ನೀಡುವುದಿಲ್ಲ. ಅಲ್ಲಿ ಮಾತ್ರ ಬೆಳೆ ಹೆಚ್ಚಳ ಸಂಬಂಧ ಕೇಂದ್ರ ಸರಕಾರಕ್ಕೆ ಒತ್ತಡ ಹಾಕುತ್ತಾರೆ. ನಮ್ಮಲ್ಲೂ ಆ ರೀತಿಯ ಬೆಳವಣಿಗೆ ನಡೆದರೆ ಒಳ್ಳೆಯದು. ರೈತರ ಹಿತದೃಷ್ಟಿಯಿಂದ ಮಂಗನ ಸಮಸ್ಯೆಯಿಂದ ಮುಕ್ತಿ ಕೊಡಿಸುವ ಕಾರ್ಯ ಆಗಬೇಕಿದೆ. ನೀರಾ ತೆಗೆಯಲು ಸರಕಾರ ಅನುಮತಿ ನೀಡಿದರೆ ತೆಂಗು ಬೆಳೆಗೆ ಮತ್ತಷ್ಟು ಉತ್ತೇಜನ ಸಿಗಲು ಸಾಧ್ಯ.
 – ಜಯಶೀಲ ಶೆಟ್ಟಿ, ತೆಂಗು ಬೆಳೆಗಾರ

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

1

ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ

ಭೀಕರ ರಸ್ತೆ ಅಪಘಾತ… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

Bus Overturns… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

Laapataa Ladies

Laapataa Ladies: ಕಾಣೆಯಾದ ಮಹಿಳೆಯರ ಆಸ್ಕರ್‌ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ

Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ

Udupi: ತಾಯಿ ಮರಣ ಪ್ರಮಾಣ ಶೂನ್ಯಗೊಳಿಸಲು ಒತ್ತು ನೀಡಿ

Udupi: ತಾಯಿ ಮರಣ ಪ್ರಮಾಣ ಶೂನ್ಯಗೊಳಿಸಲು ಒತ್ತು ನೀಡಿ

Udupi: ಗೀತಾರ್ಥ ಚಿಂತನೆ-48: ಕರ್ಮ ಬಿಡುವಂತಿಲ್ಲ, ಫ‌ಲ ಬಿಡಬಹುದು

Udupi: ಗೀತಾರ್ಥ ಚಿಂತನೆ-48: ಕರ್ಮ ಬಿಡುವಂತಿಲ್ಲ, ಫ‌ಲ ಬಿಡಬಹುದು

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

12-bng

Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್‌ ಬಸ್‌’

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.