ಇ-ಟೆಂಡರ್ ಮೂಲಕ ನಾಟಾ ಹರಾಜು
Team Udayavani, Feb 11, 2017, 12:09 PM IST
ಹುಣಸೂರು: ದೇಶಾದ್ಯಂತ ತಂತ್ರಜ್ಞಾನ ಬಳಸಿ ವ್ಯವಹಾರ ನಡೆಸುತ್ತಿರುವ ಸಂದರ್ಭದಲ್ಲೇ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗವು ಸಹ ಇ-ಟೆಂಡರ್ ಮೂಲಕ ಮರಗಳ ನಾಟಾ ಹರಾಜು ಮಾಡಲಾರಂಭಿಸಿದೆ.ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಕಲ್ಲಬೆಟ್ಟ ಅರಣ್ಯ ನಾಟಾ ಸಂಗ್ರಹಾಲಯದಲ್ಲಿ ಮರಗಳನ್ನು ಇ-ಟೆಂಡರ್ ಮೂಲಕ ಹರಾಜು ಹಾಕಲಾಯಿತು.
ಹುಣಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲ ಚಂದ್ರ ನೇತೃತ್ವದಲ್ಲಿ ನಡೆದ ಹರಾಜು ಪ್ರಕ್ರಿಯೆ ಯಲ್ಲಿ ತೇಗ, ಅಕೇಶಿಯಾ, ನೀಲಗಿರಿ ಸೇರಿ ವಿವಿಧ ಜಾತಿಯ 1393 ಲಾಟ್ಗಳ ಪೈಕಿ 277 ಲಾಟ್ ಮರಗಳು ಹರಾಜಾಗಿದ್ದು, 39.61 ಲಕ್ಷ ರೂ. ಸಂಗ್ರಹ ವಾಗಿದೆ.ಆರಂಭದಲ್ಲಿ ಖರೀದಿದಾರರಿಗೆ ಇ-ಟೆಂಡರ್ ಪದ್ಧತಿ ಹೊಸ ವ್ಯವಸ್ಥೆಯಾಗಿದ್ದರಿಂದ ತಾಂತ್ರಿಕ ಸಮಸ್ಯೆ ಎದುರಾದರೂ ಬಳಿಕ ಸುಗಮವಾಗಿ ನಡೆಯಿತು.
ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ನಮೂದಿಸಿದ್ದರಿಂದ 1,116 ಲಾಟ್ನ ಮರಗಳು ಹರಾಜಾಗಲಿಲ್ಲ, ಈ ಮರಗಳ ಲಾಟನ್ನು ಬರುವ ಮಾರ್ಚ್ನಲ್ಲಿ ಮತ್ತೆ ಇ-ಟೆಂಡರ್ ಮೂಲಕ ಹರಾಜು ಹಾಕಲಾಗುತ್ತದೆ. ಹರಾಜು ಪ್ರಕ್ರಿಯೆಯಲ್ಲಿ ಸಹಕರಿಸಿದ ರಾಷ್ಟ್ರೀಯ ಇ-ಮಾರುಕಟ್ಟೆಯ ನೋಡೆಲ್ ಅಧಿಕಾರಿ ವಿನಾಯಕ ಕೋಟಿಕರ್ ಮಾತನಾಡಿ, ಹಿಂದೆ ಪ್ರಾಯೋಗಿಕವಾಗಿ ಮರ ಹರಾಜನ್ನು ಬೆಳಗಾವಿ, ದಾಂಡೇಲಿ, ಕುಶಾಲನಗರದಲ್ಲಿ ಇ-ಮಾರುಕಟ್ಟೆ ಮೂಲಕ ನಡೆಸಲಾಗಿತ್ತು.
ಇನ್ನು ಮುಂದೆ ಇ-ಟೆಂಡರ್ ಮೂಲಕವೇ ನಡೆಸಲು ಇಲಾಖೆ ಉದ್ದೇಶಿಸಿದ್ದು, ಪ್ರಥಮ ಬಾರಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಮಾಹಿತಿ ನೀಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೋಮಪ್ಪ, ಕಲ್ಲಬೆಟ್ಟ ಸರಕಾರಿ ನಾಟಾ ಸಂಗ್ರಹಾಲಯದ ವಲಯ ಅರಣ್ಯಾಧಿಕಾರಿ ಧನಲಕ್ಷ್ಮೀ, ರೆವ್ಸ್ನ ಎಲ್ಲಪ್ಪ ಕಾಡಗೋಳ, ರೈತರು, ಮರದ ವ್ಯಾಪಾರಿಗಳು ಹಾಜರಿದ್ದರು.
* ಸಂಪತ್ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ
Mysuru Dasara: ಖಾಸಗಿ ದರ್ಬಾರ್ಗೆ ಸ್ವರ್ಣ ಖಚಿತ ಸಿಂಹಾಸನ ಜೋಡಣೆ
MUDA Case: ನ್ಯಾಯ ನನ್ನ ಪರವಿದೆ, ರಾಜಕೀಯ ಪ್ರೇರಿತ ಕೇಸ್ ಎದುರಿಸಿ ಗೆಲ್ಲುವೆ: ಸಿಎಂ
MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್ ಸಾಧ್ಯತೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mangaluru: ಕೌನ್ ಬನೇಗಾ ಕರೋಡ್ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ
IPL Retentions: ಐಪಿಎಲ್ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.