ಲಸಿಕಾ ತಂಡಕ್ಕೆ ಪಾಲಕರ ಘೇರಾವ್
Team Udayavani, Feb 11, 2017, 3:00 PM IST
ವಾಡಿ: ದಡಾರ-ರುಬೆಲ್ಲಾ ಲಸಿಕೆ ಹಾಕಲು ನಿಗದಿತ ಸಮಯಕ್ಕೆ ಶಾಲೆಗೆ ಬಾರದ ವೈದ್ಯಕೀಯ ತಂಡದ ವಿರುದ್ಧ ಆಕ್ರೋಶಗೊಂಡ ಪಾಲಕರು, ಶಾಲೆ ಆವರಣದಲ್ಲಿಯೇ ಪ್ರತಿಭಟನೆಗೆ ಮುಂದಾದ ಪ್ರಸಂಗ ಶುಕ್ರವಾರ ಪಟ್ಟಣದಲ್ಲಿ ನಡೆಯಿತು.
ಪಟ್ಟಣದ ಎಸಿಸಿ ಕಾಲೋನಿಯ ಡಿಎವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳಗ್ಗೆ 8:30 ಗಂಟೆಗೆ ನಿಗದಿಯಾಗಿದ್ದ ದಡಾರ-ರುಬೆಲ್ಲಾ ಲಸಿಕಾ ಕಾರ್ಯಕ್ರಮ, ಶಾಲಾ ಆಡಳಿತ ಮಂಡಳಿ ಹಾಗೂ ವೈದ್ಯಕೀಯ ತಂಡದ ಸಮಯ ಪಾಲನೆ ಕೊರತೆಯಿಂದ ರದ್ದುಗೊಂಡಿತು.
ಶಾಲೆಯ ಪ್ರಾಂಶುಪಾಲರ ಆದೇಶದಂತೆ ಬೆಳಗ್ಗೆಯೇ ಸ್ಥಳದಲ್ಲಿದ್ದ ನೂರಾರು ಜನ ಪಾಲಕರು, ಮದ್ಯಾಹ್ನ 11:30 ಗಂಟೆ ವರೆಗೂ ವೈದ್ಯರನ್ನು ಕಾಯ್ದು ಗೋಳಾಡಿದರು. ಹಸಿದ ಹೊಟ್ಟೆಯಲ್ಲಿ ನಿಂತಿದ್ದ ಮಕ್ಕಳು, ತೊಂದರೆ ಅನುಭವಿಸಿದರು.
ತಡವಾಗಿ ಅಂದರೆ 11:30 ಗಂಟೆಗೆ ಬಂದ ವೈದ್ಯ ಸಿಬ್ಬಂದಿಯನ್ನು ಶಾಲಾ ದ್ವಾರದಲ್ಲಿಯೇ ತಡೆದ ಪಾಲಕರು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ 8:30 ಗಂಟೆಗೆ ಶಾಲೆ ಆರಂಭಗೊಳ್ಳುತ್ತದೆ. ಇಷ್ಟೊಂದು ತಡವಾಗಿ ಬಂದರೆ ಮಕ್ಕಳ ಗತಿಯೇನು? ತಿಂಡಿ ತಿಂದು ಬಂದಿರುವ ಮಕ್ಕಳು ಮಧ್ಯಾಹ್ನದ ಊಟದ ಡಬ್ಬಿಯನ್ನು ತಂದಿಲ್ಲ.
ಸರಕಾರಿ ಸಿಬ್ಬಂದಿಯಾಗಿರುವ ತಮಗೆ ಸಮಯದ ಅರಿವಿಲ್ಲವೇ ಎಂದು ಪಾಲಕರಾದ ಶಂಕರ ಜಾಧವ, ವೀರಣ್ಣ ಯಾರಿ, ನಾಗೇಂದ್ರ ಬೊಮ್ಮನಳ್ಳಿ, ಸೋಮಲಾ ಚವ್ಹಾಣ, ಗೌತಮ ಬೇಡೆಕರ, ಕಾಶೀನಾಥ ಶೆಟಗಾರ ಮತ್ತಿತರರು ತೀವ್ರ ತರಾಟೆ ತೆಗೆದುಕೊಂಡರು.
ನಿರ್ಲಕ್ಷ ವಹಿಸಿದ ದಡಾರ ಲಸಿಕಾ ತಂಡದ ವಿರುದ್ಧ ಕ್ರಮಕೈಗೊಳ್ಳಬೇಕು. ಲಸಿಕೆ ಹಾಕಲು ಮತ್ತೂಂದು ದಿನಾಂಕ ನಿಗದಿಪಡಿಸಬೇಕು ಎಂದು ಜಿಲ್ಲಾ ವೈದ್ಯಾಧಿಧಿಕಾರಿಯನ್ನು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್
Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್ಪಿಗೆ ಕರೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
INDvsBAN: ಟೆಸ್ಟ್ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ
Labanon: ಲೆಬನಾನ್ ಪ್ರಯಾಣಿಕರು ಪೇಜರ್ಸ್, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್ ಏರ್ ವೇಸ್
Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ
Bengaluru: ಜೈಲಲ್ಲಿ ವಿಶೇಷ ಆತಿಥ್ಯ: ನಾಗ, ವೇಲು 2 ದಿನ ಕಸ್ಟಡಿಗೆ
Anandpura: ಗಾಂಜಾ ತಡೆಗೆ ಪೊಲೀಸ್ ಇಲಾಖೆ ಮುಂದಾಗಬೇಕು: ಮೋಹನ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.