ಭೋವಿ ಸಮುದಾಯ ಕಡೆಗಣಿಸದಿರಿ: ವಲ್ಯಾಪುರೆ
Team Udayavani, Feb 11, 2017, 3:02 PM IST
ಅಫಜಲಪುರ: ರಾಜ್ಯದಲ್ಲಿ 60 ಲಕ್ಷದಷ್ಟಿರುವ ಭೋವಿ ಸಮುದಾಯವನ್ನು ಪರಿಶಿಷ್ಟ ಜಾತಿ ಮಿಸಲಾತಿಯಿಂದ ವಂಚಿಸುವ ಸದಾಶಿವ ವರದಿ ಜಾರಿ ಗೊಳಿಸುವ ನಿಟ್ಟಿನಲ್ಲಿ ಕೆಲವರು ಪ್ರಯತ್ನಿಸುತ್ತಿದ್ದಾರೆ. ಭೋವಿ ಸಮುದಾಯ ಕಡೆಗಣಿಸಿದರೆ ಸರ್ಕಾರದ ವಿರುದ್ಧ ಜನಾಂದೋಲನ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಸುನೀಲ ವಲ್ಯಾಪುರೆ ಹೇಳಿದರು.
ತಾಲೂಕಿನ ಚವಡಾಪುರದಲ್ಲಿ ನಡೆದ ಶರಣ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮೇಶ್ವರರು ಮಹಾನ್ ಕಾಯಕ ಯೋಗಿಯಾಗಿದ್ದಾರೆ. ಅವರು ತಮ್ಮ ಕಾಯಕದ ಮೂಲಕವೇ ಜನರ ಮನ ಪರಿರ್ತನೆ ಮಾಡಿದ್ದಾರೆ. ಎಲ್ಲ ಶರಣರಿಗಿಂತ ಹೆಚ್ಚು ವಚನಗಳನ್ನು ಬರೆದಿರುವ ಖ್ಯಾತಿಯೂ ಸಿದ್ದರಾಮೇಶ್ವರರಿಗೆ ಇದೆ.
ಆದರೆ ಕೇವಲ 2 ಸಾವಿರ ವಚನಗಳಷ್ಟೆ ಸಿಕ್ಕಿವೆ. ಉಳಿದ ವಚನಗಳನ್ನು ಕಂಡು ಹಿಡಿಯುವ ಕೆಲಸವನ್ನು ಸರ್ಕಾರಗಳು ಮಾಡಬೇಕಾಗಿದೆ ಎಂದು ಹೇಳಿದರು. ಭೋವಿ ಸಮುದಾಯ ತುಳಿಯುವ ಕೆಲಸ ಮಾಡಿದರೆ ಖಂಡಿತವಾಗಿಯೂ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಭೋವಿ ಸಮಾಜದ ಕಾಂತು ಒಡೆಯರ್ ಮಾತನಾಡಿ, 12ನೇ ಶತಮಾನದಲ್ಲಿ ಎಲ್ಲ ಬಸವಾದಿ ಶರಣರಲ್ಲಿ ಸಿದ್ದರಾಮೇಶ್ವರರು ವಿಶಿಷ್ಟವಾಗಿ ಕಾಣುತ್ತಾರೆ. ಕೇವಲ ವಚನಗಳನ್ನು ಬರೆಯದೆ ಕೆರೆ, ಬಾವಿಗಳನ್ನು ಕಟ್ಟಿಸುವ ಮೂಲಕ ನೀರಿನ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಅಂದಿನ ಸೊನ್ನಲಗಿಯಲ್ಲಿ ಕೆರೆ ಕುಂಟೆಗಳನ್ನು ಕಟ್ಟಿಸಿದ್ದಾರೆ.
ಸೊನ್ನಲಗಿ ಎನ್ನುವುದು ಈಗ ಸೊಲ್ಲಾಪುರವಾಗಿದ್ದು ಮಹಾರಾಷ್ಟ್ರ ರಾಜ್ಯದಲ್ಲಿದೆ ಎಂದರು. ಮಹಾರಾಷ್ಟ್ರ ಸರ್ಕಾರ ಸಿದ್ದರಾಮೇಶ್ವರರ ಕುರಿತು ಅಧ್ಯಯನ ಮತ್ತು ಅನ್ವೇಷಣಾ ಪ್ರಾಧಿಧಿಕಾರ ತೆರೆದು ಕೂಡಲ ಸಂಗಮದಂತೆ ಸೊಲ್ಲಾಪುರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ರಾಜ್ಯದ ಯಾವುದಾದರೂ ಒಂದು ವಿ.ವಿ. ಗೆ ಸಿದ್ದರಾಮೇಶ್ವರರ ಹೆಸರಿಡಬೇಕು, ರಾಜ್ಯ ಸರ್ಕಾರ ಕಲ್ಲು ಒಡೆಯುವುದನ್ನು ನಿರ್ಬಂಧಿಧಿಸಿದ್ದರಿಂದ ಭೋವಿ ಸಮುದಾಯ ಬೀದಿಗೆ ಬಿದ್ದಂತಾಗಿದೆ. ಹೀಗಾಗಿ ಪುನಃ ಕಲ್ಲು ಒಡೆಯವುದನ್ನು ಪ್ರಾರಂಭಿಸಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಚಿನ್ಮಯಗಿರಿಯ ಸಿದ್ದರಾಮ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಕುಸ್ತಿ ಅಧ್ಯಕ್ಷತೆ ವಹಿಸಿದ್ದರು. ಅಣ್ಣಯ್ಯ ಮರಿದೇವರು, ಜಿ.ಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ, ಸದಸ್ಯ ಅರುಣಗೌಡ ಪಾಟೀಲ, ತಾಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ,
ಗ್ರಾಪಂ ಅಧ್ಯಕ್ಷೆ ಮಹಾದೇವಿ ಜಮಾದಾರ, ಮುಖಂಡರಾದ ರಾಮಯ್ಯ ಪೂಜಾರಿ, ರಾಜು ಎಂಪುರೆ, ತಿಮ್ಮಯ್ಯ ಶಾಬಾದಕರ, ಕಲ್ಯಾಣಿ ಜಾಧವ, ನಾಗಪ್ಪ ಮಂಜುಳಕರ, ವಿಠಲ್ ನೇಲೋಗಿ, ಹಣಮಂತ ದೇವಕರ, ಹರೀಶ ಸಾಸನೇಕರ ಹಾಗೂ ಸಮಾಜ ಬಾಂಧವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್
Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್ಪಿಗೆ ಕರೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.