ಜನರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುವ ನೈಜೀರಿಯ ಕಳ್ಳರ ಸೆರೆ


Team Udayavani, Feb 12, 2017, 2:59 PM IST

11.jpg

ಬೆಂಗಳೂರು: ಎಟಿಎಂ ಮಷಿನ್‌ಗಳಲ್ಲಿ ಸ್ಕಿಮ್ಮರ್‌ ಅಳವಡಿಸಿ, ಡೆಬಿಟ್‌ ಕಾರ್ಡ್‌ ನಕಲು ಮಾಡಿ ಆನ್‌ಲೈನ್‌ ವ್ಯವಹಾರ ಮಾಡುವ ಮೂಲಕ ಗ್ರಾಹಕರ ಖಾತೆಯಿಂದ ಹಣ ಲಪಾಟಾಯಿಸುತ್ತಿದ್ದ ನೈಜೀರಿಯಾ ಮತ್ತು ಉಗಾಂಡ ದೇಶದ ಏಳು ಮಂದಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾದ ಎರೆಮ್‌ಹೆನ್‌ ಸ್ಮಾಟ್‌ ì(33), ಉಗಾಂಡಾದ ಮಾರ್ಟಿನ್‌ ಸಾಂಬಾ (25), ನಂಬೋಜ್‌ ಜೊಲಿ(23), ಟೀನಾ (23), ನೈಜೀರಿಯಾದ ಕೆನ್ನಿ (32), ಒಲೊಆಡೆಜಿ ಓಲಾಯೆಮಿ (34) ಹಾಗೂ ವೈಯ್ನಾಲಿಕಾವಲ್‌ ನಿವಾಸಿ ವಿಕ್ರಂರಾವ್‌ ನಿಕ್ಕಂ (40) ಬಂಧಿತರು.

ಬಂಧಿತರು ಬೆಂಗಳೂರಿನ ಥಣಿಸಂದ್ರ, ಭೈರತಿ, ಧಾರವಾಡ ಮತ್ತು ಗೋವಾದಲ್ಲಿ ವಾಸವಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಾದ ಬ್ಲೆಸ್ಸಿಂಗ್‌, ಕಿಂಗ್ಸ್‌ಮ್ಯಾನ್‌, ಟೈಗರ್‌ ಅಲಿಯಾಸ್‌ ಕಿಗೆನ್‌ ಹಿಲೇರಿ, ಮೈಕ್‌ ಮಿಕ್ಕಿ, ಡೇವಿಡ್‌, ಲೀಸಾ, ನೊವೆಲ್ಲಾ ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತರ ಪೈಕಿ ವಿಕ್ರಂರಾವ್‌ ನಿಕ್ಕಂ ಬಿಟ್‌ ಕಾಯಿನ್‌ ದಂಧೆ ನಡೆಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಧಿತರಿಂದ 21 ಲಕ್ಷ ರೂ.ಜಪ್ತಿ ಮಾಡಲಾಗಿದೆ.

ವಂಚನೆ ಹೇಗೆ?
 ಆರೋಪಿಗಳು ಗ್ರಾಹಕರ ಸೋಗಿನಲ್ಲಿ ಎಟಿಎಂ ಕೇಂದ್ರಕ್ಕೆ ತೆರಳಿ ಮಷಿನ್‌ ಗಳಲ್ಲಿ ಸ್ಕಿಮ್ಮರ್‌ ಮಷಿನ್‌ ಅಳಡಿಸುತ್ತಿದ್ದರು. ಆರೋಪಿಗಳ ಪೈಕಿ ಕೆಲವರು ಎಟಿಎಂ ಕೇಂದ್ರದ ಸಿಬ್ಬಂದಿಯನ್ನು ಮಾತನಾಡಿಸುತ್ತಾ ಬೇರೆಡೆ ಗಮನ ಸೆಳೆಯುತ್ತಿದ್ದರು. ಈ ವೇಳೆ ಮತ್ತೂಬ್ಬ ಆರೋಪಿ ಸ್ಕಿಮ್ಮರ್‌ ಮಷಿನ್‌ ಅಳವಡಿಸಿ, ಮ್ಯಾಗೆ¾ಟಿಕ್‌ ಸ್ಟ್ರಿಪ್‌ ಹಾಗೂ ಸಣ್ಣದೊಂದು ಕ್ಯಾಮೆರಾ ಅಳವಡಿಸಿ ಬರುತ್ತಿದ್ದ. ಭದ್ರತಾ ಸಿಬ್ಬಂದಿ ಗ್ರಾಹಕರೆಂದು ಸುಮ್ಮನಾಗುತ್ತಿದ್ದ. ಗ್ರಾಹಕರು ಎಟಿಎಂನಲ್ಲಿ ಹಣ ಪಡೆಯಲು ಎಟಿಎಂ ಮಷಿನ್‌ಗೆ ಕಾರ್ಡ್‌ ಹಾಕಿದಾಗ ಸ್ಕಿಮ್ಮರ್‌ನಲ್ಲಿ ಡೆಬಿಟ್‌ ಕಾರ್ಡ್‌ ಮಾಹಿತಿ ದಾಖಲಾಗುತ್ತಿತ್ತು. ಇವುಗಳಿಂದ ಬಂದ ದತ್ತಾಂಶವನ್ನು ಬೇರೊಂದು ಖಾಲಿ ಕಾರ್ಡ್‌ಗೆ ನಕಲಿ ಮಾಡಿ ಹೊರ ಎಟಿಎಂ ಕಾರ್ಡ್‌ ತಯಾರಿಸಿಕೊಳ್ಳುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಜನವರಿ 7 ರಂದು ಆರೋಪಿಗಳು ಮಾನ್ಯತಾ ಟೆಕ್‌ಪಾರ್ಕ್‌ನ ಕಾಗ್ನಿಜೆಂಟ್‌ ಟೆಕ್ನಾಲಜಿ ಸಂಸ್ಥೆಯೊಂದರ ಉದ್ಯೋಗಿ ಕಮ್ಮನಹಳ್ಳಿ ನಿವಾಸಿ ಪಾಯಲ್‌ ಮಂಡಲ್‌ ಎಂಬುವರ ಎಚ್‌ಡಿಎಫ್ಸಿ ಖಾತೆಯಿಂದ 94 ಸಾವಿರ ರೂ.ಹಣ ಡ್ರಾ ಮಾಡಿದ್ದರು. ಈ ಬಗ್ಗೆ ಪಾಯಲ್‌ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಗಳ ಕೃತ್ಯ ಬಯಲಾಗಿದೆ. ಇವರ ಬಂಧನದಿಂದ ಇದೇ ರೀತಿಯ 11 ಪ್ರಕರಣ ಬಯಲಾಗಿದೆ.

ವೀಸಾ ಮುಗಿದರೂ ಅಕ್ರಮ ವಾಸ
ಆರೋಪಿಗಳು ವಯಾ.ಕಾಂ ಎಂಬ ಆನ್‌ಲೈನ್‌ ನಲ್ಲಿ ಬಾಗಲೂರಿನ ಖಾನ್ಸ್‌ ಟೂರ್ ಅಂಡ್‌ ಟ್ರಾವೆಲ್ಸ್‌ ಮೂಲಕ ವಿಮಾನದ ಟಿಕೆಟ್‌ಗಳನ್ನು ಬುಕ್‌ ಮಾಡುತ್ತಿದ್ದರು. ಇದಕ್ಕೆ ಸ್ವೆ„ಪಿಂಗ್‌ ಮಷಿನ್‌ ಮೂಲಕ ಹಣ ವ್ಯಯಿಸುತ್ತಿದ್ದರು. ಬಳಿಕ ಯಾವುದಾದರೊಂದು ನೆಪವೊಡ್ಡಿ ಟಿಕೆಟ್‌ ರದ್ದುಗೊಳಿಸಿ ನಗದು ವಾಪಸ್‌ ಪಡೆಯುತ್ತಿದ್ದರು. ಬಂಧಿತರು ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದು, ವೀಸಾ ಅವಧಿ ಮುಗಿದ ಬಳಿಕವೂ ನಗರದಲ್ಲಿ ಅಕ್ರಮವಾಗಿ ವಾಸವಿದ್ದಾರೆ. 

ಬಿಟ್‌ಕಾಯಿನ್‌ ವರ್ಗಾವಣೆ ದಂಧೆ
ಗ್ರಾಹರಕರ ಖಾತೆಯಿಂದ ಪಡೆದ ಹಣವನ್ನು ಆರೋಪಿಗಳು ಬಿಟ್‌ ಕಾಯಿನ್‌ ಮೂಲಕ ಇತರ ದೇಶಗಳಿಗೆ ವರ್ಗಾವಣೆ ಮಾಡುತ್ತಿದ್ದರು. ಬಂಧಿತ ವಿಕ್ರಂ ನಿಕ್ಕಂ ಬಿಟ್‌ ಕಾಯಿನ್‌ ಏಜೆಂಟ್‌ ಆಗಿದ್ದು, ಹಣ ಜಮೆ ಮಾಡಿಸಿಕೊಂಡು ಅದನ್ನು ಬಿಟ್‌ ಕಾಯಿನ್‌ ಮೂಲಕ ವರ್ಗಾವಣೆ ಮಾಡಿ ಕಮಿಷನ್‌ ಪಡೆಯುತ್ತಿದ್ದ. ವಿಕ್ರಂ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಮಾಡಿಕೊಂಡು ಬಿಟ್‌ ಕಾಯಿನ್‌ ದಂಧೆಯಲ್ಲಿ ತೊಡಗಿದ್ದ.

ಏನಿದು ಬಿಟ್‌ ಕಾಯಿನ್‌
ಬಿಟ್‌ ಕಾಯಿನ್‌ ಎಂಬುದು ಡಿಜಿಟಲ್‌ ಕರೆನ್ಸಿ. ಜಗತ್ತಿನ ಯಾವುದೇ ಭಾಗದಿಂದಲೂ ಹಣ ಪಡೆಯಲು ಹಾಗೂ ಕಳಿಸಲು ಬಳಸಬಹುದು. ರೂಪಾಯಿಗಳ ಮೇಲೆ ಆರ್‌ಬಿಐ ನಿಯಂತ್ರಣವಿರುವಂತೆ ಬಿಟ್‌ ಕಾಯಿನ್‌ ಮೇಲೆ ಯಾವುದೇ ನಿಯಂತ್ರಣವಿಲ್ಲ. ವಿದೇಶಗಳಲ್ಲಿ ಬಿಟ್‌ ಕಾಯಿನ್‌ ಇದೆಯಾದರೂ ಭಾರತದಲ್ಲಿ ಬಿಟ್‌ ಕಾಯಿನ್‌ ವ್ಯವಸ್ಥೆ ಇಲ್ಲ. 

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

2-bng

Bengaluru: ನಗರದೆಲ್ಲೆಡೆ ಟ್ರಾಫಿಕ್ ಜಾಮ್‌, ಮೆಜೆಸ್ಟಿಕ್‌ ರಷ್‌! ‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.