ಇನ್ಫೋಸಿಸ್ ಮಂಡಳಿಯೊಂದಿಗಿನ ಸಮರ ಅಂತ್ಯ: ನಾರಾಯಣ ಮೂರ್ತಿ
Team Udayavani, Feb 13, 2017, 12:08 PM IST
ಬೆಂಗಳೂರು : ಇನ್ಫೋಸಿಸ್ ನಿರ್ದೇಶಕರ ಮಂಡಳಿಯೊಂದಿಗಿನ ಸಮರವನ್ನು ಕೊನೆಗೊಳಿಸಿರುವುದಾಗಿ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ. ಇದರೊಂದಿಗೆ, ಐಟಿ ದಿಗ್ಗಜ ಇನ್ಫೋಸಿಸ್ ಲಿಮಿಟೆಡ್ನ ಶೇರು ಧಾರಣೆ ಇಂದು ಮುಂಬಯಿ ಶೇರು ಪೇಟೆಯಲ್ಲಿ ಶೇ.0.75ರಷ್ಟು ಏರಿ 975 ರೂ.ಗಳಲ್ಲಿ ಸ್ಥಿರತೆಯನ್ನು ಕಂಡಿದೆ.
ದೇಶದ ಎರಡನೇ ಅತೀ ದೊಡ್ಡ ಐಟಿ ಕಂಪೆನಿ ಎನಿಸಿರುವ ಇನ್ಫೋಸಿಸ್ ನ ಸಂಸ್ಥಾಪಕ ನಾರಾಯಣ ಮೂರ್ತಿ ಅವರಿಂದು ಕಂಪೆನಿಯ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿರುವ ಆರ್ ಶೇಷಸಾಯಿ ಅವರ ಮೇಲೆ ತನಗೆ ಸಂಪೂರ್ಣ ವಿಶ್ವಾಸ, ನಂಬಿಕೆ ಇದೆ ಎಂಬುದನ್ನು ಪುನರಚ್ಚುರಿಸಿದರು.
ಅಂತೆಯೇ ಕೆಲವೊಂದು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದ ವಿವಾದ ಕುರಿತಂತೆ ಇನ್ಫೋಸಿಸ್ ಆಡಳಿತ ನಿರ್ದೇಶಕರ ಮಂಡಳಿಯ ವಿರುದ್ಧದ ಸಮರವು ಕೊನೆಗೊಂಡಿರುವುದಾಗಿ ನಾರಾಯಣ ಮೂರ್ತಿ ಹೇಳಿದರು. ಅಧ್ಯಕ್ಷ ಶೇಷಸಾಯಿ ಅವರ ಮೇಲೆ ಕಂಪೆನಿಯು ದೃಢವಾದ ವಿಶ್ವಾಸವನ್ನು ಇರಿಸಿದ್ದು ಅದು ಪ್ರಶ್ನಾತೀತವಾಗಿದೆ ಎಂದು ಮೂರ್ತಿ ಸ್ಪಷ್ಟಪಡಿಸಿದರು.
ಕಳೆದ ತಿಂಗಳಲ್ಲಿ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ, ಕ್ರಿಸ್ ಗೋಪಾಲಕೃಷ್ಣನ್ ಮತ್ತು ನಂದನ್ ನಿಲೇಕಣಿ ಅವರು ಕಂಪೆನಿಯ ಆಡಳಿತ ವೈಖರಿಯ ಬಗ್ಗೆ ಕೆಲವೊಂದು ವಿಷಯಗಳಲ್ಲಿ ತಮ್ಮ ಅಸಮಾಧಾನವನ್ನು ತೋರ್ಪಡಿಸಿ ನಿರ್ದೇಶಕರ ಮಂಡಳಿಗೆ ಪತ್ರ ಬರೆದಿದ್ದು ಅದು ಕಾರ್ಪೊರೇಟ್ ವಲಯದಲ್ಲಿ , ಟಾಟಾ ಸನ್ಸ್ ವಿವಾದದ ಬಳಿಕದ ಎರಡನೇ ದೊಡ್ಡ ವಿವಾದವಾಗಿ ಸುದ್ದಿ ಮಾಡಿತ್ತು.
ಇನ್ಫೋಸಿಸ್ ಆಡಳಿತ ನಿರ್ದೇಶಕರ ಮಂಡಳಿಯೊಂದಿಗಗಿನ ಸಮರ ಕೊನೆಗೊಳಿಸಿರುವುದಾಗಿ ಹೇಳಿರುವ ನಾರಾಯಣ ಮೂರ್ತಿ ಅವರಿಂದು, ಇನ್ಫೋಸಿಸ್ ಮಂಡಳಿಯು ಸಭ್ಯ ಹಾಗೂ ಪ್ರಾಮಾಣಿಕ ವ್ಯಕ್ತಿಗಳಿಂದ ಕೂಡಿರುವುದಾಗಿ ಹೇಳಿರುವರೆಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಷೇರುಪೇಟೆ ಸೂಚ್ಯಂಕ ಜಿಗಿತ-83,000 ಅಂಕಗಳ ದಾಖಲೆ ಮಟ್ಟದ ಏರಿಕೆ
Festival Season: ಟಾಟಾ ಇವಿ ಕಾರುಗಳ ಮೇಲೆ ಭಾರೀ ರಿಯಾಯಿತಿ
Ford Motor: ಭಾರತಕ್ಕೆ ಮತ್ತೆ ಮರಳಿದ ಫೋರ್ಡ್ ಮೋಟಾರ್- ಚೆನ್ನೈ ಘಟಕ ಪುನರಾರಂಭ
BSE ಸೆನ್ಸೆಕ್ಸ್ 83,000 ಮತ್ತೊಂದು ಮೈಲುಗಲ್ಲು
Good News: ಶೀಘ್ರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ? ಪಂಕಜ್ ಜೈನ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.