ಜಾತೀಯತೆಗೆ ಮದ್ದು ನೀಡಿದ್ದು ವಚನ ಸಾಹಿತ್ಯ
Team Udayavani, Feb 13, 2017, 1:20 PM IST
ಹರಪನಹಳ್ಳಿ: ಶತಶತಮಾನಗಳಿಂದ ಮನಸ್ಸಿಗೆ ಅಂಟಿದ ಜಾತೀಯತೆ ಎಂಬ ಮೌಡ್ಯಕ್ಕೆ ಮದ್ದು ನೀಡಿದ ವಚನ ಸಾಹಿತ್ಯ ಸಾರ್ವಕಾಲಕ್ಕೂ ಶ್ರೇಷ್ಠವಾದ ಸಾಹಿತ್ಯವಾಗಿದೆ ಎಂದು ಉಪನ್ಯಾಸಕ, ಸಾಹಿತಿ ಪೂಜಾರ್ ದುರುಗೇಶ್ ಹೇಳಿದರು.
ತಾಲೂಕಿನ ಗೊವೇರಹಳ್ಳಿ ಗ್ರಾಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ವಿಭಾಗ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶ್ವವಿದ್ಯಾಲಯ ಮಟ್ಟದ 2ನೇ ಅಂತರ್ ಕಾಲೇಜು ಶಿಬಿರದಲ್ಲಿ ವಚನದಲ್ಲಿ ವೈಚಾರಿಕತೆ ಕುರಿತು ಅವರು ಉಪನ್ಯಾಸ ನೀಡಿದರು.
ಭಾರತೀಯ ಸಂಸ್ಕೃತಿ ಜೀವಂತವಾಗಿರುವುದು ಹಳ್ಳಿಗಳಲ್ಲಿ. ಬಹುಮುಖ ಸಂಸ್ಕೃತಿಯಲ್ಲಿ ಏಕತೆ ಹೊಂದಿರುವ ನಾಡಿನಲ್ಲಿ ಹಿಂದಿಗಿಂತಲೂ ಈಚೇಗೆ ಜಾತೀಯತೆ ಹೆಚ್ಚು ಪ್ರಖರವಾಗುತ್ತಿದೆ. ಅಧುನಿಕ ಯುಗದಲ್ಲಿಯೂ ಜಾತಿ ಪದ್ಧತಿ ವಿವಿಧ ಆಯಾಮಗಳಲ್ಲಿ ವಿನೂತನ ರೂಪ ಪಡೆದುಕೊಂಡು ಜೀವಂತಿಕೆ ಪಡೆದಿರುವುದು ವಿಷಾದನೀಯ ಎಂದರು.
ಮನುಷ್ಯನನ್ನು ಜಾತಿಯಿಂದ ಗುರುತಿಸಲ್ಪಡುವ ರಾಷ್ಟ್ರವೆಂದರೆ ಆದು ಭಾರತ ದೇಶ ಮಾತ್ರ. ಜಾತಿಯಿಂದ ಗುರುತಿಸುವ ಬದಲಾಗಿ ನೀತಿಯಿಂದ ಮನುಷ್ಯನನ್ನು ಗುರುತಿಸಬೇಕಾಗುತ್ತದೆ. ಜಾತಿ ವಿನಾಶಕ್ಕಾಗಿ ಶ್ರಮಿಸಿದ ಚಿಂತಕರನ್ನು ಇಂದು ಜಾತಿಯ ಸಂಕೋಲೆಯಲ್ಲಿ ಬಂಧಿಸಲ್ಪಟ್ಟಿರುವುದು ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ಬುದ್ಧ, ಬಸವ, ಅಂಬೇಡ್ಕರ್ ಅಂತಹ ದಾರ್ಶನಿಕರು ಆದರ್ಶವಾಗಬೇಕಿದೆ. ಪ್ರಗತಿಪರ ಚಿಂತನೆಗಳು ಮಕ್ಕಳಲ್ಲಿ ಬೆಳೆಯಬೇಕಾಗಿದೆ. ಮಕ್ಕಳಿಗೆ ಅಂಕ ಆಧಾರಿತ ಶಿಕ್ಷಣದ ಬದಲಾಗಿ ಜೀವನ ಪಾಠ ಕಲಿಸುವಂತಹ ಶಿಕ್ಷಣ ದೊರೆಯಬೇಕು. ಬುದ್ದ, ಬಸವ, ಅಂಬೇಡ್ಕರ್ ಅಂತಹ ಅನೇಕ ದಾರ್ಶನಿಕರು ಜಾತಿ ವಿನಾಶಕ್ಕಾಗಿ ತಮ್ಮ ಜೀವನುದ್ದಕ್ಕೂ ಹೋರಾಟ ನಡೆಸಿದ್ದಾರೆ.
ಇಂತವರ ಆದರ್ಶಗಳನ್ನು ಮಕ್ಕಳು ಮೈಗೂಡಿಸಿಕೊಂಡು ಸಮಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆಯಬೇಕು ಎಂದರು. ಪ್ರಗತಿಪರ ಸಂಘಟನೆ ಮುಖಂಡ ಎನ್.ಸಿ. ಈಶ್ವರನಾಯ್ಕ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಗೆದ್ದವರು ಬರೆದ ಇತಿಹಾಸವನ್ನು ಅಧ್ಯಯನ ಮಾಡುತ್ತಿದ್ದಾರೆ. ನಾವುಗಳು ಸೋತವರ ಇತಿಹಾಸ ಅಧ್ಯಯನ ಮಾಡಿದಾಗ ಮಾತ್ರ ವಾಸ್ತವ ಸ್ಥಿತಿ ತಿಳಿದುಕೊಳ್ಳಬಹುದು.
ಸಾವಿತ್ರಿ ಬಾಫುಲೆ, ಜ್ಯೋತಿ ಬಾಫುಲೆ, ಸಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್ ಇಂತಹ ಅನೇಕರು ದೇಶದ ಶೋಷಿತ ಸಮುದಾಯಗಳ ಪರ ತಮ್ಮ ಜೀವನವನ್ನೆ ಮುಡಿಪಾಗಿಟ್ಟು ಹೋರಾಡಿದವರಿಗೆ ಇಂದಿನ ಪುಸ್ತಕಗಳಲ್ಲಿ ಜಾಗವಿಲ್ಲ. ಹಿಂದಿನ ಪುರಾಣ ಕಥೆಗಳ ಬದಲಾಗಿ ಸಮಾಜ ಸುಧಾರಕರ ಇತಿಹಾಸ ಪರಿಚಯಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಗ್ರಾಪಂ ಅಧ್ಯಕ್ಷೆ ಪುಷ್ಪಾ ಬಸಪ್ಪ ಅಧ್ಯಕ್ಷತೆ ವಹಿಸಿದ್ದರು.
ಟಿ. ಜಗದೀಶ್, ಎಂ. ಹುಚ್ಚಪ್ಪ, ಬಸವರಾಜಪ್ಪ, ರೇಣುಕಮ್ಮ, ಚಂದ್ರಪ್ಪ, ಎಚ್. ದುರುಗಪ್ಪ, ಪ್ರಾಚಾರ್ಯ ನಾಗರಾಜ ಸಣ್ಣಕ್ಕಿ, ಪ್ರಾಧ್ಯಾಪಕರಾದ ಎಂ. ವಿಜಯಕುಮಾರ್, ಎಚ್. ಕೊಟ್ರೇಶ್, ಎಂ. ಮಂಜುನಾಥ್, ಎನ್ನೆಸ್ಸೆಸ್ ಅಧಿಧಿಕಾರಿ ಎಂ. ಭೀಮಪ್ಪ, ಡಿ.ಟಿ. ರಜತಗಿರಿ, ಸತೀಶ್, ಎಚ್.ಎಸ್. ವೆಂಕಟೇಶ್, ಎ.ಡಿ. ಬಸವರಾಜ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Government ಪತನ ಸಂಚು ಹೇಳಿಕೆ; ದಾವಣಗೆರೆಯಲ್ಲಿ ಯತ್ನಾಳ್ ವಿರುದ್ಧ ಪ್ರಕರಣ ದಾಖಲು
Davanagere; ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃ*ತ್ಯು
Davanagere: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ಹರಿಹರ- ಹರಪನಹಳ್ಳಿ ಸಂಚಾರ ಬಂದ್
Davanagere: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 48 ಮಂದಿ ಆರೋಪಿಗಳಿಗೆ ಜಾಮೀನು
ವಾಲ್ಮೀಕಿ ನಿಗಮದಲ್ಲಿ ಆಗಿರುವ ಅವ್ಯವಹಾರ ಸರಿಪಡಿಸಬೇಕು: ಪ್ರಸನ್ನಾನಂದಪುರಿ ಸ್ವಾಮೀಜಿ
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.