ಡಾ.ಪರಮಶಿವಯ್ಯ ಕನಸು ನನಸಾಗುವವರೆಗೆ ಹೋರಾಟ ನಿಲ್ಲಲ್ಲ


Team Udayavani, Feb 13, 2017, 4:01 PM IST

9_24.jpg

ಚಿಕ್ಕಬಳ್ಳಾಪುರ: ಯಾವುದೇ ಶಾಶ್ವತ ನದಿ ನಾಲೆಗಳು ಇಲ್ಲದ ಬರಪೀಡಿತ ಬಯಲುಸೀಮೆ ಜಿಲ್ಲೆಗಳಿಗೆ ಒಳಿತನ್ನು ಬಯಸಿ ನಿಸ್ವಾರ್ಥದಿಂದ ಸಮಗ್ರ ನೀರಾವರಿ ಯೋಜನೆಯ ಪರಿಕಲ್ಪನೆ ನೀಡಿದ ಖ್ಯಾತ ನೀರಾವರಿ ತಜ್ಞ ಡಾ.ಜಿ.ಎಸ್‌.ಪರಮಶಿವಯ್ಯನವರ ಕನಸು ನನಸಾಗುವವರೆಗೂ ಶಾಶ್ವತ ನೀರಾವರಿ ಹೋರಾಟ ನಿಲ್ಲುವುದಿಲ್ಲ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್‌.ಆಂಜನೇಯರೆಡ್ಡಿ ಘೋಷಿಸಿದರು. ನಗರದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಡಾ.ಜಿ.ಎಸ್‌.ಪರಮಶಿವಯ್ಯನವರ 99ನೇ ಜಯಂತ್ಯುತ್ಸವ ಹಾಗೂ ಗೌರವ ಸಮರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಲಿಷ್ಠ ನೀರಾವರಿ ಆಂದೋಲನ: ಡಾ.ಜಿ.ಎಸ್‌. ಪರಮಶಿವಯ್ಯ ಬಯಲುಸೀಮೆ ಜಿಲ್ಲೆಗಳ ಭವಿಷ್ಯದ ನೀರಾವರಿ ಸಂಕಷ್ಟಗಳ ಕುರಿತು ಸಮಗ್ರವಾದ ವೈಜ್ಞಾನಿಕ ವರದಿಯನ್ನು 1974 ರಲ್ಲಿ ಅಂದಿನ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ವರದಿ 20 ವರ್ಷಗಳ ಕಾಲ ಅಧಿಕಾರಿಗಳ ಮಟ್ಟದಲ್ಲಿಯೇ ಧೂಳು ಹಿಡಿಯಬೇಕಾಯಿತು. ಅಂದಿನ ಸಂಸದರಾದ ಜೆ.ವೆಂಕಟಪ್ಪ, ತುಮಕೂರು ಬಸವರಾಜು, ಕ್ಯಾಲನೂರು ತಿಪ್ಪೇನಹಳ್ಳಿಯ ಡಾ.ಟಿ.ಎನ್‌.ಶ್ರೀನಿವಾಸ್‌ ಮತ್ತಿತರರು ಸರ್ಕಾರದ ಮೇಲೆ ಒತ್ತಡ ಹಾಕಿದ್ದರಿಂದ ಪರಮಶಿವಯ್ಯ ವರದಿಗೆ ಒಂದಿಷ್ಟು ಜೀವ ಬಂದಿದೆ. ಹಿಂದೆ ಬಯಲು ಸೀಮೆ ಜಿಲ್ಲೆಗಳ ನೀರಾವರಿಗಾಗಿ ಹಗಲಿರುಳು ಹೋರಾಡಿದ ನಾಯಕರ ಆಶಯಗಳನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಂದುವರೆಸುತ್ತದೆ. ಸರ್ಕಾರದ ಹುಸಿ ಭರವಸೆಗಳನ್ನು ನಂಬಿ ಕೂರುವುದಿಲ್ಲ. ಬಯಲು ಸೀಮೆ ಜಿಲ್ಲೆಗಳಲ್ಲಿ ಬಲಿಷ್ಠ ನೀರಾವರಿ ಆಂದೋಲನ ರೂಪಿಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.

ಶಾಶ್ವತ ನೀರಾವರಿ ಹೋರಾಟ ನಿಲ್ಲಬಾರದು: ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ರಾಜ್ಯದಲ್ಲಿ ಒಂದೊಂದು ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಾಗ ತಮ್ಮ ಮೂಗಿನ ನೇರಕ್ಕೆ ಹಲವು ನೀರಾವರಿ ಯೋಜನೆಗಳನ್ನು ರೂಪಿಸಿವೆ. ಒಂದು ಸರಕಾರ ಜಾರಿ ಮಾಡಿದ ನೀರಾವರಿ ಯೋಜನೆಗಳನ್ನು ಮತ್ತೂಂದು ಸರ್ಕಾರ ಮಾರ್ಪಾಟು ಮಾಡಿದ ಉದಾಹರಣೆಗಳೇ ಹೆಚ್ಚಾಗಿವೆ. ಕಾಂಗ್ರೆಸ್‌ ಸರಕಾರ ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಿದೆಯೇ ಹೊರತು ಇಚ್ಛಾಶಕ್ತಿಯಿಂದಲ್ಲ. ಇತ್ತೀಚೆಗೆ ಸರಕಾರ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ಹೊರಟಿದೆ. ವೈಜ್ಞಾನಿಕ ಸಂಸ್ಕರಣೆಯನ್ನು ಒಪ್ಪಬಹುದಾದರೂ ನೀರಿನ ಶುದ್ಧತೆ ಬಗ್ಗೆ ಅನುಮಾನವಿದೆ. ಬಯಲುಸೀಮೆ ಜಿಲ್ಲೆಗಳಿಗೆ ಸಮಗ್ರ ಶಾಶ್ವತ ನೀರಾವರಿ ಯೋಜನೆ ಜಾರಿಯಾಗುವವರೆಗೂ ಹೋರಾಟ ನಿಲ್ಲಬಾರದು ಎಂದು ಮನವಿ ಮಾಡಿದರು.

ಹೋರಾಟ ಜೆಡಿಎಸ್‌ ಪ್ರಯೋಜಕತ್ವ ಇಲ್ಲ: ಕೋಚಿಮುಲ್‌ ನಿರ್ದೇಶಕ ಕೆ.ವಿ.ನಾಗರಾಜ್‌ ಮಾತನಾಡಿ, ನೀರಾವರಿ ಹೋರಾಟ, ಪ್ರತಿಭಟನೆ ಪ್ರಶ್ನೆ ಬಂದಾಗ ಪಕ್ಷದ ಬಾವುಟವಿಲ್ಲದೆ ಜೆಡಿಎಸ್‌ ಮುಕ್ತ ಮನಸಿನಿಂದ ಬೆಂಬಲಿಸುತ್ತಾ ಬಂದಿದೆ. ಆದರೆ, ಕೆಲವರು ಕ್ಷುಲ್ಲಕ ರಾಜಕೀಯ ಮತ್ತು ಸ್ವಹಿತಾಸಕ್ತಿಗಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತು ಜೆಡಿಎಸ್‌ ನಡುವೆ ರಾಜಕೀಯ ತಳಕು ಹಾಕಲು ಯತ್ನಿಸುತ್ತಿರುವುದು ಖಂಡನೀಯ ಎಂದರು.

ನೀರಾವರಿ ಹೋರಾಟಗಾರರಿಗೆ ಗೌರವ: ಕಾರ್ಯಕ್ರಮದದ ಆರಂಭದಲ್ಲಿ ದಿ.ಡಾ.ಜಿ.ಎಸ್‌.ಪರಮಶಿವಯ್ಯನವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಶಾಶ್ವತ ನೀರಾವರಿ ಹೋರಾಟಕ್ಕೆ ಶ್ರಮಿಸಿದ ರೈತ ಸಂಘದ ಮುಖಂಡ ದೊಡ್ಡಬಳ್ಳಾಪುರದ ದಿ.ಡಾ.ವೆಂಕಟರೆಡ್ಡಿ ಅವರ ಪತ್ನಿ ಸುಲೋಚನಾ, ರಾಧಾ ಹೈಟೆಕ್‌ ಶ್ರೀನಾಥ್‌, ಗೌತಮ್‌ ಶ್ರೀನಿವಾಸ್‌ ಹಾಗೂ ಶಿಡ್ಲಘಟ್ಟದ ಜೆ.ಸದಾಶಿವ ಅವರನ್ನು ಗೌರವಿಸಲಾಯಿತು. ಡಾ.ಜಿ.ಎಸ್‌.ಪರಮಶಿವಯ್ಯನವರ ಪುತ್ರ ಜಿ.ಜ್ಞಾನೇಶ್ವರ್‌,  ಎಸ್‌.ಲಕ್ಷಯ್ಯ, ಕೊಳವನಹಳ್ಳಿ ಡಿ.ಮಾರಪ್ಪ,  ಭಕ್ತರಹಳ್ಳಿ ಬೈರೇಗೌಡ, ಅಗಲಗುರ್ಕಿ ಚಲಪತಿ,  ಸುಷ್ಮಾ ಶ್ರೀನಿವಾಸ್‌, ಆಯಿಷಾ ಸುಲ್ತಾನ, ಉಷಾರೆಡ್ಡಿ, ಯಲುವಹಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್‌,  ಎಂ.ಜಯರಾಮ್‌, ನಾಗದೇನಹಳ್ಳಿ ನಾರಾಯಣಸ್ವಾಮಿ, ಆನೂರು ದೇವರಾಜ್‌ ಭಾಗವಹಿಸಿದ್ದರು.

ಶಾಶ್ವತ ನೀರಾವರಿ ಹೋರಾಟ ಪûಾತೀತವಾಗಿದ್ದರೂ ಕೆಲವು ಸಂಕುಚಿತ ಮನಸುಗಳು ಹೋರಾಟ ಜೆಡಿಎಸ್‌ ಪ್ರಾಯೋಜಿತ ಎಂದು ಬಿಂಬಿಸಲು ಹೊರಟಿರುವುದು ಸರಿಯಲ್ಲ. ಜೆಡಿಎಸ್‌ ಪಕ್ಷದ ಮುಖಂಡರು ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲದೇ ನೀರಾವರಿ ಹೋರಾಟಕ್ಕೆ ಸಹಕರಿಸುತ್ತಿ¨ªಾರೆ. ಇದರಲ್ಲಿ ವಿನಾಕಾರಣ ರಾಜಕೀಯ ಬೆರೆಸುವುದು ಯಾರಿಗೂ ಒಳಿತಲ್ಲ. ಬಯಲು ಸೀಮೆಯ ಕೃಷಿಗೆ ನೀರಿನ ಭದ್ರತೆ ಹಾಗೂ ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಡಾ.ಜಿ.ಎಸ್‌.ಪರಮಶಿವಯ್ಯ ವರದಿ ಆಧಾರಿತ ಸಮಗ್ರ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಸರ್ಕಾರ ಮುಂದಾಗಬೇಕು.
-ಕೆ.ವಿ.ನಾಗರಾಜ್‌, ಕೋಚಿಮುಲ್‌ ನಿರ್ದೇಶಕರು

ಟಾಪ್ ನ್ಯೂಸ್

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

12

Chikkaballapur: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ!

suicide (2)

Chikkaballapur: ಪೋಕ್ಸೋ ಆರೋಪಿ ಜತೆಗೆ 16 ವರ್ಷದ ಬಾಲಕಿ ಆತ್ಮಹತ್ಯೆ!

1-ffsdf

Chikkaballapur ನಗರಸಭೆ ಕೋಲಾಹಲ; ಡಾ.ಸುಧಾಕರ್ ಮೇಲುಗೈ: ಸವಾಲು ಹಾಕಿದ ಪ್ರದೀಪ್ ಈಶ್ವರ್!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.