ಚೆನ್ನೈ : ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಗೈದು ಕೊಂದ ಕಾಮಾಂಧ ತರುಣ
Team Udayavani, Feb 13, 2017, 4:59 PM IST
ಚೆನ್ನೈ : ತಮಿಳು ನಾಡಿನಲ್ಲಿ ಎಲ್ಲರ ದೃಷ್ಟಿ ರಾಜಕೀಯ ಅಸ್ಥಿರತೆಯ ಮೇಲೆ ನೆಟ್ಟಿರುವ ನಡುವೆಯೇ ಮೂರನೇ ತರಗತಿಯ ಏಳು ವರ್ಷ ಪ್ರಾಯದ ಬಾಲಕಿಯ ಮೇಲೆ ಅತ್ಯಮಾನುಷ ಅತ್ಯಾಚಾರ ನಡೆದು ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿ ಬಳಿಕ ಆಕೆಯ ದೇಹವನ್ನು ಅರೆಸುಟ್ಟು, ಅದನ್ನು ಪೆಟ್ಟಿಗೆಯೊಂದರಲ್ಲಿ ತುರುಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸೆಯಲಾದ ಭೀಭತ್ಸಕರ ಘಟನೆ ನಿನ್ನೆ ಭಾನುವಾರ ನಡೆದಿದೆ.
ಭಾನುವಾರ ಸಂಜೆ ನಗರದ ಮುಗಳಿವಕ್ಕಂ ಎಂಬಲ್ಲಿನ ತನ್ನ ಅಪಾರ್ಟ್ಮೆಂಟ್ ಬಳಿ ಬಾಲಕಿಯು ಒಂಟಿಯಾಗಿ ಆಡುತ್ತಿದ್ದಾಗ ಕಾಮಾಂಧನೋರ್ವ ಆಕೆಯನ್ನು ಅಪಹರಿಸಿದ. ಬಾಲಕಿಯ ತಂದೆ – ತಾಯಿ ಎಲ್ಲೋ ಹೊರಗೆ ಹೋಗಿದ್ದಾಗ ಈ ಅಪಹರಣ ನಡೆಯಿತು.
ಬಾಲಕಿಯ ತಂದೆ – ತಾಯಿ ಮನೆಗೆ ಮರಳಿದಾಗ ಮಗಳು ಇಲ್ಲದಿರುವುದನ್ನು ಕಂಡು ದಿಗಿಲಾಗಿ ಅಕ್ಕಪಕ್ಕದ ಅಪಾರ್ಟ್ಮೆಂಟ್ಗಳಲ್ಲಿ ಆಕೆಗಾಗಿ ಹುಡುಕಾಡಿ ಪ್ರಯೋಜನವಾಗದೆ ಬಳಿಕ ಪೊಲೀಸರಿಗೆ ದೂರು ನೀಡಿದರು.
ಪೊಲೀಸರು ಕೂಡಲೇ ತನಿಖೆಯನ್ನು ಆರಂಭಿಸಿದರು. ಬಾಲಕಿಯನ್ನು ಅಪಹರಿಸಿದ ವ್ಯಕ್ತಿಯನ್ನು ಕೊನೆಗೂ ಅವರು ಪತ್ತೆ ಹಚ್ಚಿದರು. ಆತನ ಹೆಸರು ದುಷ್ಯಂತ್ ಎಂದು ಗೊತ್ತಾಯಿತು.
ಆತನನ್ನು ತೀವ್ರವಾಗಿ ಪ್ರಶ್ನಿಸಿದಾಗ ಆತ ತಾನು ಬಾಲಕಿಯನ್ನು ಅತ್ಯಾಚಾರ ಮಾಡಲೆಂದು ಅಪಹರಿಸಿದ್ದು ಹೌದೆಂದು ಒಪ್ಪಿಕೊಂಡ.
“ಬಾಲಕಿಯ ಮೇಲೆ ಅತ್ಯಾಚಾರ ಎಸಗುವಾಗ ಆಕೆ ಬೊಬ್ಬಿಟ್ಟಳು; ಆಗ ತಾನು ಆಕೆಯ ಬಾಯನ್ನು ವಸ್ತ್ರದಿಂದ ಬಿಗಿಯಾಗಿ ಒತ್ತಿದೆ; ಪರಿಣಾಮವಾಗಿ ಆಕೆ ಉಸಿರುಗಟ್ಟಿ ಸತ್ತಳು; ಬಳಿಕ ನಾನು ಆಕೆಯ ಮೃತ ದೇಹವನ್ನು ಸುಟ್ಟೆನು. ಅರೆ ಸುಟ್ಟ ಬಾಲಕಿಯ ದೇಹವನ್ನು ಪೆಟ್ಟಿಗೆಯೊಂದರಲ್ಲಿ ತುರುಕಿ ಬಳಿಕ ಅದನ್ನು ರಾಷ್ಟ್ರೀಯ ಹೆದ್ದಾರಿಯ ಮೇಲೆ ಎಸೆದು ಹೋದೆನು’ ಎಂದು ಕಾಮಾಂಧ ತರುಣ ದುಷ್ಯಂತ್ ಪೊಲೀಸರಿಗೆ ತನ್ನ ಅಪರಾಧ ಕೃತ್ಯದ ವಿವರಗಳನ್ನು ನೀಡಿದ್ದಾನೆ.
ಈ ಘಟನೆಯಿಂದ ಚೆನ್ನೈ ನಗರದ ಜನರು ತೀವ್ರ ಆತಂಕಿತರಾಗಿ ಆಘಾತಕ್ಕೆ ಗುರಿಯಾಗಿದ್ದಾರೆ. ಅತ್ಯಾಚಾರಿ ಕಾಮಾಂಧ ದುಷ್ಯಂತ್ನನ್ನು ಬಂಧಿಸಿರುವ ಪೊಲೀಸರು ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು
CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.