ಬೆಂಗಳೂರಲ್ಲಿಂದು ಲೋಹದ ಹಕ್ಕಿಗಳ ಜಾತ್ರೆ


Team Udayavani, Feb 14, 2017, 12:12 PM IST

airforce.jpg

ಬೆಂಗಳೂರು: ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ-2017’ಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಯಲಹಂಕ ವಾಯುನೆಲೆಯಲ್ಲಿ ಈಗಾಗಲೇ ದೇಶಿ ನಿರ್ಮಿತ ಮತ್ತು ವಿದೇಶಿ ವಿಮಾನಗಳು, ಬಂಡವಾಳ ಹೂಡಿಕೆದಾರರು ಬೀಡುಬಿಟ್ಟಿದ್ದು, ಮುಂದಿನ ಐದು ದಿನಗಳ ಕಾಲ ನಗರದಲ್ಲಿ “ಲೋಹದ ಹಕ್ಕಿಗಳ ‘ ಜಾತ್ರೆ ನಡೆಯಲಿದೆ.
  
ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ದೇಶೀಯ ತೇಜಸ್‌, ಸಾರಂಗ್‌, ಸೂರ್ಯಕಿರಣ್‌ ಸೇರಿದಂತೆ ಸ್ವಿಡನ್‌ನ ಸ್ಕ್ಯಾಂಡಿನೇವಿಯನ್‌, ಇಂಗ್ಲೆಂಡ್‌ನ‌ ಯಾಕೊವ್‌ಲೇವ್ಸ್‌, ರಫೇಲ್‌ ಯುದ್ಧವಿಮಾನಗಳು ಬಾನಲ್ಲಿ ಕಸರತ್ತು ತೋರಲಿವೆ.  ಸೋಮವಾರ ಸಂಜೆವರೆಗೂ ಶೋ ಗೂ ಮುನ್ನ ಅಂತಿಮ ತಾಲೀಮು ನಡೆಸಿದ ಲೋಹದ ಹಕ್ಕಿಗಳು ತಮ್ಮ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯನ್ನು ಸ್ವಯಂ ಪರೀಕ್ಷೆಗೆ ಒಡ್ಡಿದ್ದವು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು. 

ಹೀಗಾಗಿ, ವಾಯುನೆಲೆ ಸುತ್ತಲಿನ ನಿವಾಸಿಗಳು ಸೋಮವಾರವೇ ವೈಮಾನಿಕ ಪ್ರದರ್ಶನವನ್ನು ಕಣ್ತುಂಬಿಕೊಂಡರು.  ಸುಮಾರು 270 ದೇಶೀಯ ಮತ್ತು 279 ವಿದೇಶಿ ಸೇರಿದಂತೆ 51 ರಾಷ್ಟ್ರಗಳ 549 ಕಂಪೆನಿಗಳು ಮಳಿಗೆಗಳನ್ನು ತೆರೆಯಲಿವೆ. 72 ವಿಮಾನಗಳು  ಭಾಗವಹಿಸಲಿವೆ. ಬ್ರೆಜಿಲ್‌, ಜಪಾನ್‌, ಮಲೇಷಿಯಾ, ಇಂಡೋನೇಷಿಯಾ, ಫ್ರಾನ್ಸ್‌ ಒಳಗೊಂಡಂತೆ ನಾನಾ ದೇಶಗಳ ರಕ್ಷಣಾ ಸಚಿವರು, ಸೇವಾ ಮುಖ್ಯಸ್ಥರು ಸೇರಿದಂತೆ 65 ಪ್ರತಿನಿಧಿಗಳು ಈಗಾಗಲೇ ವಾಯುನೆಲೆಗೆ ಬಂದಿಳಿದಿದ್ದಾರೆ.

ಈ ಬಾರಿ ವೈಮಾನಿಕ ಪ್ರದರ್ಶನದ ವ್ಯಾಪ್ತಿಯು 24,403 ಚದರ ಕಿ.ಮೀ.ನಿಂದ 27,678 ಚದರ ಕಿ.ಮೀ.ಗೆ ವಿಸ್ತಾರಗೊಂಡಿದ್ದು, ಎರಡು ಲಕ್ಷ ಜನ ಭೇಟಿ ನೀಡುವ ಸಾಧ್ಯತೆ ಇದೆ. ಡಿಆರ್‌ಡಿಒ ಪ್ರದರ್ಶನ ಡಿಆರ್‌ಡಿಒ ತಯಾರಿಸಿದ ರುಸ್ತುಂ-1 ಮತ್ತು 2, ತೇಜಸ್‌ ವಿಮಾನಗಳನ್ನು ಪ್ರದರ್ಶಿಸಲಾಗುತ್ತಿದೆ. ಏರ್‌ಬೋರ್ನ್ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆ (ಅವಾಕ್ಸ್‌) ತಂತ್ರಜ್ಞಾನ ಸೇನೆಗೆ ಸೇರ್ಪಡೆ. 25 ಪ್ರಯೋಗಾಲಯಗಳಲ್ಲಿ ವಿವಿಧ ಸಂಶೋಧನಾ ಉಪಕರಣಗಳ ಅನಾವರಣವಾಗಲಿದೆ.  

ಪ್ರದರ್ಶನಕ್ಕೆ ಮಾರ್ಗ ಹೀಗಿರಲಿದೆ
ಬೆಂಗಳೂರು ನಗರದಿಂದ ಮೇಕ್ರಿ ಸಕ‌ìಲ್‌-ಸಿಬಿಐ ವೃತ್ತ-ಆನಂದನಗರ ಕ್ರಾಸ್‌-ಹೆಬ್ಟಾಳ ಫ್ಲೈಓವರ್‌- ಕೊಡಿಗೇಹಳ್ಳಿ ಜಂಕ್ಷನ್‌- ಅಮೃತಹಳ್ಳಿ ಕ್ರಾಸ್‌-ಯಲಹಂಕ ಬೈಪಾಸ್‌- ಕೋಗಿಲು ಕ್ರಾಸ್‌-ಬಾಗಲೂರು ಕ್ರಾಸ್‌- ವಾಯುನೆಲೆ- ಹುಣಸಮಾರನಹಳ್ಳಿ- ಬೆಟ್ಟಹಲಸೂರು- ವಿದ್ಯಾನಗರ-ಚಿಕ್ಕಜಾಲ-ಸಾದೇನಹಳ್ಳಿ-ಏರ್‌ಪೋರ್ಟ್‌ ಫ್ಲೈಓವರ್‌- ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.

ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಾಗುವ ವಾಹನಗಳಿಗೆ ಹೆಣ್ಣೂರು ಮತ್ತು ಬಾಗಲೂರು ಮೂಲಕ ಸಂಚರಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಅತಿಹೆಚ್ಚು ವಾಹನದಟ್ಟಣೆಯಾಗುವ ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಗುರುತಿನ ಚೀಟಿ ಕಡ್ಡಾಯ
ಪ್ರದರ್ಶನಕ್ಕೆ ಭೇಟಿ ನೀಡುವವರು  ಪಾಸ್‌ಪೋರ್ಟ್‌, ಮತದಾರರ ಚೀಟಿ, ಚಾಲನಾ ಪರವಾನಗಿಯಂತಹ ಅಧಿಕೃತ ಗುರುತಿನ ಚೀಟಿಗಳನ್ನು ತರುವುದು ಕಡ್ಡಾಯ. ಪ್ರದರ್ಶನ ಆರಂಭಕ್ಕೆ ಒಂದು ಗಂಟೆ ಮೊದಲೇ ಯಲಹಂಕ ವಾಯು ನೆಲೆಯ ಪ್ರವೇಶ ದ್ವಾರಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆ. 

ಇವುಗಳನ್ನು ಕೊಂಡೊಯ್ಯುವಂತಿಲ್ಲ
ಆಹಾರ ಪದಾರ್ಥಗಳು, ಆಯುಧಗಳು, ಆಟಿಕೆ ಗನ್‌, ಲೇಸರ್‌ ಪಾಯಿಂಟರ್ಸ್‌, ಪಟಾಕಿ ಮತ್ತಿತರ ಸಾಮಗ್ರಿಗಳನ್ನು ತರುವಂತಿಲ್ಲ. ಐದು ವರ್ಷದೊಳಗಿನ ಮಕ್ಕಳಿಗೆ ನೋಂದಣಿ ಅಗತ್ಯವಿಲ್ಲ. 16 ವರ್ಷದ ಒಳಗಿನ ಮಕ್ಕಳು ಶಾಲಾ ಗುರುತಿನ ಚೀಟಿ ತರಬೇಕು. 

ಟಿಕೆಟ್‌ ಪಡೆಯುವುದು ಹೇಗೆ?
ಸಾರ್ವಜನಿಕರು ಟಿಕೆಟ್‌ಗಳನ್ನು ಅಂತರ್ಜಾಲದಲ್ಲೂ ಪಡೆಯಬಹುದು. ಜತೆಗೆ ನಗರದ ವಿವಿಧ ಕೆಫೆ ಕಾಫಿ ಡೇ ಮಳಿಗೆಗಳಲ್ಲಿಯೂ ಪಡೆಯಬಹುದು. ಯಲಹಂಕದ ವಾಯುನೆಲೆ, ಫಿಕ್ಕಿ (FICCI) ಕಚೇರಿ, ಕೋರಮಂಗಲ, ಜೆ.ಪಿ. ನಗರ, ಮಲ್ಲೇಶ್ವರ, ವೈಟ್‌ಫೀಲ್ಡ್‌, ಎಂ.ಜಿ. ರಸ್ತೆಯಲ್ಲಿರುವ ಕೆಫೆ ಕಾಫಿ ಡೇ ಶಾಪ್‌ಗ್ಳಲ್ಲಿಯೂ ಟಿಕೆಟ್‌ ಲಭ್ಯ. ವೆಬ್‌ಸೈಟ್‌ www.aeroindia.in ಮೂಲಕವೂ ಸಾರ್ವಜನಿಕರು ಟಿಕೆಟ್‌ ಪಡೆಯಬಬಹುದು.

ಟಿಕೆಟ್‌ ದರ 600 ರೂ. ನಿಗದಿಪಡಿಸಲಾಗಿದೆ. ಇದು ವೈಮಾನಿಕ ಪ್ರದರ್ಶನದ ವೀಕ್ಷಣಾ ಪ್ರದೇಶ (ಎಡಿವಿಎ)ಕ್ಕೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯೋದ್ಯಮಿಗಳ ವೀಕ್ಷಣೆಗೆ ಎರಡೂವರೆ ಸಾವಿರ ರೂ. ಟಿಕೆಟ್‌ ದರ ನಿಗದಿಪಡಿಸಿದ್ದು, ಈ ಟಿಕೆಟ್‌ ಪಡೆದವರು ವೈಮಾನಿಕ ಪ್ರದರ್ಶನ ಮತ್ತು ವೈಮಾನಿಕ ಉತ್ಪನ್ನಗಳ ಪ್ರದರ್ಶನವನ್ನೂ ವೀಕ್ಷಿಸಬಹುದು.  ಫೆ. 14ರಂದು ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ, ಫೆ. 15ರಿಂದ 18ರವರೆಗೆ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಭೇಟಿ ನೀಡಬಹುದು. 

ವೈಮಾನಿಕ ಪ್ರದರ್ಶನದಲ್ಲಿ ಇಂದು
ಬೆಳಿಗ್ಗೆ 9.30ಕ್ಕೆ 11ನೇ “ಏರೋ ಇಂಡಿಯಾ-2017’ಕ್ಕೆ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಅವರಿಂದ ಚಾಲನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ. ಬೆಳಿಗ್ಗೆ 10.10ಕ್ಕೆ ವೈಮಾನಿಕ ಪ್ರದರ್ಶನ. ಮಧ್ಯಾಹ್ನ 2ಕ್ಕೆ ವೈಮಾನಿಕ ಮತ್ತು ರಕ್ಷಣಾ ಸಾಮಗ್ರಿಗಳ ತಯಾರಿಕೆಗೆ ಆಂಧ್ರಪ್ರದೇಶದಲ್ಲಿರುವ ಅವಕಾಶಗಳು ಕುರಿತು ಜಾಗತಿಕ ಸಿಇಒಗಳ ಸಭೆ. ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಉಪನ್ಯಾಸ. ನಾಗರಿಕ ವಿಮಾನಯಾನ ಸಚಿವ ಪಿ. ಅಶೋಕ ಗಜಪತಿ ರಾಜು ಭಾಗಿ. 

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ರಾಜಕಾಲುವೆ ಒತ್ತುವರಿಯೇ ಅವಾಂತರಕ್ಕೆ ಕಾರಣ; ಆಯುಕ್ತ

Bengaluru: ರಾಜಕಾಲುವೆ ಒತ್ತುವರಿಯೇ ಅವಾಂತರಕ್ಕೆ ಕಾರಣ; ಆಯುಕ್ತ

Bengalruru Rain: ಬಿಬಿಎಂಪಿ ಕಳಪೆ ಕಾಮಗಾರಿ ಬಿಚ್ಚಿಟ್ಟ ಮಳೆ

Bengalruru Rain: ಬಿಬಿಎಂಪಿ ಕಳಪೆ ಕಾಮಗಾರಿ ಬಿಚ್ಚಿಟ್ಟ ಮಳೆ

5

Bengaluru Rain: ಮಳೆಗೆ 4 ಬಡಾವಣೆ ನಿವಾಸಿಗಳ ಗುಳೆ!

3

Bengaluru Airport: ನಗರದಲ್ಲಿ ಶೀಘ್ರವೇ ಏರ್‌ಟ್ಯಾಕ್ಸಿ ಸೇವೆ

Renukaswamy Case: 5 ಆರೋಪಿಗಳ ಜಾಮೀನು ಅರ್ಜಿ ವಜಾ

Renukaswamy Case: 5 ಆರೋಪಿಗಳ ಜಾಮೀನು ಅರ್ಜಿ ವಜಾ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.