ತೋಟಗಾರಿಕಾ ಇಲಾಖೆಯ ಸೌಲಭ್ಯ ಬಳಸಿಕೊಳ್ಳಿ
Team Udayavani, Feb 14, 2017, 12:42 PM IST
ಪಿರಿಯಾಪಟ್ಟಣ: ರೈತರು ಪ್ರಸ್ತುತ ಪರಿಸ್ಥಿತಿಯಲ್ಲಿ ತೋಟಗಾರಿಕಾ ಇಲಾಖೆಯಿಂದ ದೊರೆಯುವ ಸಹಾಯ ಧನ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಮಣಿ ಡಿ.ಟಿ.ಸ್ವಾಮಿ ಕರೆ ನೀಡಿದರು. ತಾಲೂಕಿನ ಹಿಟೆ°ಹೆಬ್ಟಾಗಿಲು ಗ್ರಾಮದಲ್ಲಿ ಸಮಗ್ರ ತೋಟಗಾರಿಕೆ ಬೆಳೆಗಳ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕ ಸುದರ್ಶನ್ ಮಾತನಾಡಿ, ರೈತರು ಇಲಾಖಾ ವತಿಯಿಂದ ಬಾಳೆ, ಕಲ್ಲಂಗಡಿ, ಟೊಮಟೊ, ತೆಂಗು, ತರಕಾರಿ ಬೆಳೆಗಳಿಗೆ ಸಹಾಯ ಧನವಿದೆ. ರೈತರು ಸಮಗ್ರ ಮಾಹಿತಿ ಒದಗಿಸಿ ಕೊಟ್ಟು ಸರ್ಕಾರದ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಿವೃತ್ತ ಕೃಷಿ ವಿಜಾnನಿ ಹೊಂಬಯ್ಯ ಮಾತನಾಡಿ, ರೈತರು ಬಾಳೆಯಲ್ಲಿ ಕಂಡು ಬರುವ ಕೀಟ ಮತ್ತು ರೋಗಗಳ ಹತೋಟಿಗೆ ರೈತರು ಅನುಸರಿಸಬೇಕಾದ ಕ್ರಮಗಳು ಹಾಗೂ ನಿರ್ವಹಣೆಯ ಕ್ರಮಗಳು ಮತ್ತು ನಾಟಿ ಮಾಡುವ ಬಗ್ಗೆ ವಿವರಣೆ ನೀಡಿದರು. ನಾಟಿ ಮಾಡಿದ ನಂತರ ಕೀಟ ಬಾಧೆ ಕಂಡುಬಂದ ಕೂಡಲೇ ತೆಗೆದು ಕೊಳ್ಳಬಹುದಾದ ಕ್ರಮ, ಸಿಂಪಡಿಕೆಯಿಂದ ಬಾಳೆ ಬೇಸಾಯದಲ್ಲಿ ಹೆಚ್ಚಿನ ಇಳುವರಿ ಹೊಂದಬಹುದು ಎಂದರು.
ಕಾರ್ಯಕ್ರಮದಲ್ಲಿ ತಾಪಂ ಸದಸ್ಯರಾದ ಪ್ರೀತಿ ವಸಂತ, ಗ್ರಾಪಂ ಸದಸ್ಯರಾದ ಮೀನಾಕ್ಷಮ್ಮ, ಅನಿಲ್ಕುಮಾರ್, ಕಾಂತರಾಜು, ವಕೀಲ ಕೆ.ಶಂಕರ್, ತೋಟಗಾರಿಕೆ ಸಹಾಯಕ ಅಧಿಕಾರಿ ಮಲ್ಲಿಕಾರ್ಜುನ್, ತೋಟಗಾರಿಕೆ ಸಹಾಯಕ ಶ್ರೀಧರ್, ಸಿಬ್ಬಂದಿಗಳಾದ ಚೈತ್ರ, ಮಲ್ಲೇಶ್, ಹರೀಶ್, ಪಿಡಿಒ ಶ್ರೀನಿವಾಸ್, ಗಣೇಶ್ ಆಯಿತನಹಳ್ಳಿ ಹಾಗೂ ರೈತ ಬಾಂಧವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.