ಶತ್ರುನಾಶಕ್ಕೆ ಬರಲಿದೆ ಮಾನವ ರಹಿತ ಸೋಲಾರ್‌ ವಿಮಾನ


Team Udayavani, Feb 17, 2017, 3:45 AM IST

solar.jpg

ಬೆಂಗಳೂರು: ಪರಿಸರ ಸ್ನೇಹಿ ವಿಮಾನಗಳ ತಯಾರಿಕೆಗೆ ಮುಂದಾಗಿರುವ ಪ್ರತಿಷ್ಠಿತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ವಿಜ್ಞಾನಿಗಳು, ಈ ನಿಟ್ಟಿನಲ್ಲಿ ಮಾನವರಹಿತ ಸೌರವಿದ್ಯುತ್‌ ಚಾಲಿತ ವಿಮಾನ
ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದಾರೆ. ಡ್ರೋಣ್‌ ಸೇರಿ ಶತ್ರುಗಳ ಮೇಲೆ ಕಣ್ಗಾವ ಲಿಡಲು ಇತ್ತೀಚಿನ ದಿನಗಳಲ್ಲಿ ಮಾನವರಹಿತ ವಿಮಾನಗಳ ಹಾರಾಟ ಹೆಚ್ಚು ಪ್ರಚಲಿತದಲ್ಲಿದೆ. ಈ ದಿಸೆಯಲ್ಲಿ ಡಿಆರ್‌ಡಿಒ ವಿಜ್ಞಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಾನವರಹಿತ ಹಾಗೂ ಸೌರವಿದ್ಯುತ್‌ ಚಾಲಿತ ವಿಮಾನಗಳನ್ನು ಆಗಸಕ್ಕೆ ಬಿಡಲು ನಿರ್ಧರಿಸಿದ್ದಾರೆ.

ಡಿಆರ್‌ಡಿಒ ಬಳಿ ಈಗಿರುವ ಮಾನವರಹಿತ ವಿಮಾನಗಳು 24ರಿಂದ 36 ಗಂಟೆಗಳ ಕಾಲ ನಿರಂತರ ಹಾರಾಟ ನಡೆಸುತ್ತಿವೆ. ಅವುಗಳಲ್ಲಿರುವ ಇಂಧನದ ಟ್ಯಾಂಕ್‌ ಸಾಮರ್ಥ್ಯವೇ ಅಷ್ಟು. ಹೀಗಾಗಿ, ವಿಮಾನಗಳ ರೆಕ್ಕೆಗಳ ಮೇಲೆಯೇ
ಸೋಲಾರ್‌ ಪ್ಯಾನೆಲ್‌ ಅಳವಡಿಸಿ, ಅವುಗಳ ಸಹಾಯದಿಂದ ಸೂರ್ಯನ ಕಿರಣಗಳನ್ನು ಇಂಧನವಾಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ವಿಮಾನಗಳಲ್ಲಿ ಸುಮಾರು 2 ಕಿ.ವ್ಯಾ.ಸಾಮರ್ಥ್ಯದ ಬ್ಯಾಟರಿಗಳನ್ನು ಅಳವಡಿಸಲಾಗಿರುತ್ತದೆ. ಇದರಿಂದ ತಿಂಗಳುಗಟ್ಟಲೆ ನಿರಂತರವಾಗಿ ಈ ವಿಮಾನ ಕಣ್ಗಾವಲು ಇಡಲಿದೆ ಎಂದು ಡಿಆರ್‌ಡಿಒ ವಿಜ್ಞಾನಿ ಎಂ.ಹರಿಪ್ರಸಾದ್‌ “ಉದಯವಾಣಿ’ಗೆ ತಿಳಿಸಿದರು.

ಪರಿಸರ ರಕ್ಷಣೆ: ವಿಮಾನಗಳ ಹಾರಾಟ ದಿಂದ ಸಾಕಷ್ಟು ಪ್ರಮಾಣದ ಇಂಧನ ವ್ಯಯವಾಗುತ್ತಿದೆ. ಮತ್ತೂಂದು ರೀತಿಯಲ್ಲಿ ವಾಯು ಮಾಲಿನ್ಯವೂ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿ ಸರ ರಕ್ಷಣೆ ಜತೆಗೇ ದೇಶದ ಗಡಿ ರಕ್ಷಣೆ ಮಾಡುವ ಪರಿಸರ ಸ್ನೇಹಿ ವಿಮಾನಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. 25 ರಿಂದ 30 ಕೆಜಿಯಷ್ಟು ಭಾರದ ಉಪಕರಣಗಳನ್ನು ಹೊತ್ತು ಮೇಲೆ ಹೋಗುವ ಈ ಚಾಲಕ ರಹಿತ ವಿಮಾನಗಳು, ಆಗಸದಲ್ಲಿ ಸಾಕಷ್ಟು ಎತ್ತರಕ್ಕೆ ಹಾರಬಲ್ಲವು. ಅಷ್ಟೇ ಅಲ್ಲ, ಎಲ್ಲ ಪ್ರಕಾರದ ವಾತಾವರಣದಲ್ಲೂ ಈ ವಿಮಾನಗಳು ಕಾರ್ಯಾಚರಣೆ ನಡೆಸಬಲ್ಲವು. ಹಗಲು ಸೂರ್ಯನ ಕಿರಣಗಳನ್ನು ಇಂಧನವಾಗಿ ಪರಿವರ್ತಿಸಿ, ಬ್ಯಾಟರಿ ಚಾರ್ಜ್‌ ಮಾಡಿಕೊಳ್ಳುತ್ತವೆ. ರಾತ್ರಿ ಅವುಗಳ ಸಹಾಯದಿಂದ ಹಾರಾಟ ನಡೆಸುತ್ತವೆ ಎಂದು ತಿಳಿಸಿದರು. ಈ ಪ್ರಾಜೆಕ್ಟ್ಗಾಗಿ ಕೇಂದ್ರ ಸರ್ಕಾರದಿಂದ ಯಾವುದೇ ಹಣ
ಮಂಜೂರಾಗಿಲ್ಲ. ಈ ಸಂಶೋಧನೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಸರ್ಕಾರಕ್ಕೆ ಈಗಷ್ಟೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

5 ವರ್ಷ ಆಗಸದಲ್ಲಿ ಹಾರಾಟ: ಗೂಗಲ್‌ ಮತ್ತು ಫೇಸ್‌ಬುಕ್‌ ಕಂಪನಿಗಳು ಐದು ವರ್ಷ ಗಟ್ಟಲೆ ಆಗಸದಲ್ಲಿ ನಿರಂತರವಾಗಿ ಹಾರಾಟ ನಡೆಸುವಂತಹ ಮಾನವರಹಿತ ವಿಮಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ. ಈ
ಮಟ್ಟಿಗೆ ಡಿಆರ್‌ಡಿಒದಿಂದ ಸಾಧ್ಯವಾಗದಿದ್ದರೂ, ತಿಂಗಳುಗಟ್ಟಲೆ ಆಗಸದಲ್ಲಿ ಕಣ್ಗಾವಲಿಡುವ ಸೌರವಿದ್ಯುತ್‌ ಚಾಲಿತ ವಿಮಾನ ತಯಾರಿಸಲು ಉದ್ದೇಶಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.

ಚಿತ್ರದುರ್ಗದಲ್ಲಿ ಪರೀಕ್ಷೆ: ಈಗಾಗಲೇ ಮುಂದುವರಿದ ದೇಶಗಳಲ್ಲಿ ಮಾನವರಹಿತ ವಿಮಾನಗಳ ಹಾರಾಟ ಇದೆ. ಆದರೆ, ನಮ್ಮ ಉದ್ದೇಶ ದೇಶೀಯ ಮಾನವರಹಿತ ವಿಮಾನ ಗಳನ್ನು ಅಭಿವೃದ್ಧಿಪಡಿಸಿ, ಸಣ್ಣ-ಪುಟ್ಟ ದೇಶಗಳಿಗೆ
ಪರಿಚಯಿಸುವುದಾಗಿದೆ. ಸಣ್ಣ ದೇಶಗಳ ಬೇಡಿಕೆಗಳಿಗೆ ತಕ್ಕಂತೆ ಸಾವಿರಾರು ಅಡಿ ಎತ್ತರದವರೆಗೆ ಹಾರಾಟ ನಡೆಸುವ, ಮತ್ತಷ್ಟು ಮುಂದುವರಿದ ತಂತ್ರಜ್ಞಾನಗಳನ್ನು ಒಳಗೊಂಡ ವಿಮಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಈಗಾಗಲೇ ಇಂತಹ ವಿಮಾನಗಳನ್ನು ಚಿತ್ರ ದುರ್ಗದ ಡಿಆರ್‌ಡಿಒ ಪ್ರದೇಶದಲ್ಲಿ ಪರೀಕ್ಷಿಸಿ ಯಶಸ್ವಿ ಕೂಡ ಆಗಿದ್ದೇವೆ ಎಂದು ಡಿಆರ್‌ಡಿಒ ವಿಜ್ಞಾನಿ ಎಂ.ಹರಿಪ್ರಸಾದ್‌ ಹೇಳಿದರು.

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Chikkamagaluru: ಸಾವಿನಲ್ಲೂ ಸಾರ್ಥಕತೆ; ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

9

Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.