ಪ್ರೇಮ ಪರೀಕ್ಷೆಯಲ್ಲಿ ತಾಳ್ಮೆ ಎಂಬುದು ಅನಿವಾರ್ಯ


Team Udayavani, Feb 18, 2017, 11:52 AM IST

preethi-premaa.jpg

ಇನ್ಮುಂದೆ ಹುಡುಗಿಯರನ್ನು ಕಣ್ಣೆತ್ತಿಯೂ ನೋಡಲ್ಲ, ಎಲ್ಲರೂ ಮೋಸಗಾತಿಯರು, ಟ್ರೂ ಲವ್‌ ಅನ್ನೋದೇ ಇಲ್ಲ ಎನ್ನುತ್ತಾ ಕೈಯಲ್ಲಿ ಗ್ಲಾಸ್‌ ಹಿಡಿಯುತ್ತಾನೆ. ಇತ್ತ ಕಡೆ ಇವಳು, ಹುಡುಗರ ಜೊತೆ ಫ್ರೆಂಡ್‌ಶಿಪ್‌ ಮಾಡಿ ಒಳ್ಳೆಯ ರೀತಿಯಲ್ಲಿ ಮಾತನಾಡಿದರೆ ಸಾಕು, ಲವ್‌ ಮಾಡು ಎಂದು ಹಿಂದೆ ಸುತ್ತುತ್ತಾರೆ. ಇನ್ನು ಮುಂದೆ ಹುಡುಗರ ಜೊತೆ ಫ್ರೆಂಡ್‌ಶಿಪ್‌ ಮಾಡಲ್ಲ ಎಂದು ಸಿಡಿಮಿಡಿಗೊಂಡಿರುತ್ತಾಳೆ. ಈ ಎರಡು ವಿರುದ್ಧ ಗುಣಗಳ ಪಾತ್ರಗಳನ್ನು ಒಟ್ಟು ಸೇರಿಸುವ ಪ್ರಯತ್ನವಾಗಿ ಮೂಡಿಬಂದಿರೋದೇ “ಪ್ರೀತಿ ಪ್ರೇಮ’. 

ಪ್ರೀತಿ ಯಾವ ರೀತಿ ಬದಲಾಗುತ್ತಿದೆ, ಪ್ರೀತಿ ಹೇಗೆ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿದೆ ಮತ್ತು ಇದರಿಂದಾಗಿ ನಿಷ್ಕಲ್ಮಶ ಪ್ರೀತಿಯ ಮೇಲೂ ಸಂಶಯಪಡುವಂತಹ ಸ್ಥಿತಿ ಬಂದಿರೋದನ್ನು ಈ ಸಿನಿಮಾ ಮೂಲಕ ನಿರ್ದೇಶಕರು ಹೇಳಲು ಹೊರಟಿದ್ದಾರೆ. ನಿರ್ದೇಶಕರ ಗುರಿಯೇನೋ ಸ್ಪಷ್ಟವಾಗಿದೆ. “ಕಮರ್ಷಿಯಲ್‌ ಲವ್‌ಸ್ಟೋರಿ’ಗಳ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತಲೇ ಒಂದು ನಿಷ್ಕಲ್ಮಶ ಪ್ರೀತಿಯನ್ನು ತೋರಿಸಲು ಹೊರಟ ನಿರ್ದೇಶಕರು ಸಾಕಷ್ಟು ಕಷ್ಟಪಟ್ಟಿರೋದು ಎದ್ದು ಕಾಣುತ್ತದೆ.

ಆ ಕಷ್ಟವನ್ನು ಅನಿವಾರ್ಯವಾಗಿ ಪ್ರೇಕ್ಷಕ ಕೂಡಾ ಅನುಭವಿಸಬೇಕಾಗುತ್ತದೆ. ಮುಖ್ಯವಾಗಿ ಈ ಸಿನಿಮಾದ ಸಮಸ್ಯೆ ಎಂದರೆ ಏಕತಾನತೆ ಹಾಗೂ ಗಂಭೀರ ವಿಷಯದ ಕೊರತೆ. ಪ್ರೀತಿಯ ಕಮರ್ಷಿಯಲ್‌ ಅಂಶಗಳನ್ನು ತೋರಿಸುವ ಭರದಲ್ಲಿ ಉಳಿದೆಲ್ಲಾ ಅಂಶಗಳನ್ನು ನಿರ್ದೇಶಕರು ಮರೆತಿದ್ದಾರೆ. ಹಾಗೆ ನೋಡಿದರೆ ಕತೆ ಟ್ರ್ಯಾಕ್‌ಗೆ ಬರೋದು ಇನ್ನೇನು ಸಿನಿಮಾ ಮುಗಿಯಲು ಹತ್ತು ನಿಮಿಷ ಇರುವಾಗ. ಆ ಗ್ಯಾಪಲ್ಲೂ ನಿರ್ದೇಶಕರು ಒಂದು ಮಾಂಟೇಜ್‌ ಸಾಂಗ್‌ ಮೂಲಕ ಮತ್ತೆ ಸಿನಿಮಾವನ್ನು ಎಳೆದಾಡಿದ್ದಾರೆ. 

ಟೈಮ್‌ಪಾಸ್‌ಗೆ ಲವ್‌ ಮಾಡೋ ಹುಡುಗರ ಕಥೆ, ಪಾಕೇಟ್‌ ಮನಿ, ಪಿಕ್‌ಅಪ್‌, ಡ್ರಾಪ್‌ ಸರ್ವೀಸ್‌ಗಾಗಿ ಲವ್‌ ಮಾಡೋ ತರಹ ನಾಟಕವಾಡೋ ಹುಡುಗೀರ ಬಾಯಲ್ಲಿ ಬರೋ “ಕಮರ್ಷಿಯಲ್‌ ಡೈಲಾಗ್‌’ಗಳು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬಂದು ಹೋಗಿವೆ. “ಪ್ರೀತಿ ಪ್ರೇಮ’ದಲ್ಲೂ ಅದೇ ಮುಂದುವರಿದಿದೆ. ಹುಡುಗೀರನ್ನು ಬೈಕೊಂಡು ಓಡಾಡೋ ಹುಡುಗ ಒಂದು ಕಡೆಯಾದರೆ, ಹುಡುಗೀರನ್ನು ಎಟಿಎಂ ಕಾರ್ಡ್‌ ತರಹ ಬಳಸಿ ಕೊನೆಗೆ ಬಿಸಾಕಬೇಕು ಎಂದು ಭಾವಿಸುವ ಹುಡುಗೀರ ಗುಂಪು ಇನ್ನೊಂದು ಕಡೆ.

ಈ ಎರಡನ್ನೂ ಬ್ಯಾಲೆನ್ಸ್‌ ಮಾಡಲು ನಿರ್ದೇಶಕರು ಸಾಕಷ್ಟು ಶ್ರಮಪಟ್ಟಿದ್ದಾರೆ. ಮೊದಲೇ ಹೇಳಿದಂತೆ ಸಿನಿಮಾದಲ್ಲಿ ಏಕತಾನತೆ ಕಾಡುತ್ತದೆ. ದೃಶ್ಯಗಳು ಒಂದು ಸರ್ಕಲ್‌ ಬಿಟ್ಟು ಮುಂದಕ್ಕೆ ಹೋಗೋದೇ ಇಲ್ಲ. ಬ್ಯಾಚುಲರ್‌ ಬಾಯ್ಸನ ತರೆಲ ತಮಾಷೆಗಳನ್ನೇ ಡಿಸೈನ್‌ ಡಿಸೈನ್‌ ಆಗಿ ತೋರಿಸಿದ್ದಾರೆ. ಆದರೆ, ಚಿತ್ರದ ಕೊನೆಯಲ್ಲಿ ಬರುವ ಟ್ವಿಸ್ಟ್‌ ನಿಮಗೆ ಸ್ವಲ್ಪ ಖುಷಿ ಕೊಡಬಹುದು. ಹಾಗಂತ ಅದು ಅನಿರೀಕ್ಷಿತ ಎನ್ನುವಂತಿಲ್ಲ. ಬಹುತೇಕ ದೃಶ್ಯಗಳನ್ನು ಪ್ರೇಕ್ಷಕನೇ ಊಹಿಸಿಕೊಂಡು ಹೋಗುವಂತಿದೆ.

ಚಿತ್ರದಲ್ಲಿ ಸಾಕಷ್ಟು ಅನಾವಶ್ಯಕ ದೃಶ್ಯಗಳು ಬಂದು ಹೋಗುತ್ತವೆ. ನಿರ್ದೇಶಕರು ಅದನ್ನು ಕಾಮಿಡಿ ಎಂದು ಭಾವಿಸಿಕೊಂಡು ಚಿತ್ರದುದ್ದಕ್ಕೂ ಇಟ್ಟಿದ್ದಾರೆ. ಆ ಎಲ್ಲಾ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ತಾಳ್ಮೆ ಪರೀಕ್ಷೆಯ ಅವಧಿಯೂ ಕಡಿಮೆಯಾಗುತ್ತಿತ್ತು. ಚಿತ್ರದ ಪ್ಲಸ್‌ ಪಾಯಿಂಟ್‌ ಎಂದರೆ ಗಾಂಧಿನಗರದ ಸಿದ್ಧಸೂತ್ರಗಳನ್ನು ಬಿಟ್ಟು ಮಾಡಿದ ಸಿನಿಮಾವಿದು. ಹಾಗಾಗಿ, ಹೀರೋಯಿಸಂ, ಬಿಲ್ಡಪ್‌ ಎಂಟ್ರಿ, ಜಬರ್ದಸ್ತ್ ಫೈಟ್‌ಗಳಿಲ್ಲ. ಕೇವಲ ಒಂದು ಲವ್‌ಸ್ಟೋರಿಯನ್ನಷ್ಟೇ ಹೇಳಲು ಪ್ರಯತ್ನಿಸಿದ್ದಾರೆ. 

ನಾಯಕ ಕೃಷ್ಣ ಚೈತನ್ಯ ಲವರ್‌ ಬಾಯ್‌ ಆಗಿ ನಟಿಸಿದ್ದಾರೆ. ಅವರು ಮತ್ತಷ್ಟು ಚೈತನ್ಯದಿಂದ ನಟಿಸಿದ್ದರೆ ಪಾತ್ರದ ತೂಕ ಹೆಚ್ಚುತ್ತಿತ್ತು. ನಾಯಕಿ ನಿಧಿ ಕುಶಾಲಪ್ಪ ನಟಿಸಲು ಪ್ರಯತ್ನಿಸಿದ್ದಾರೆ. ಉಳಿದಂತೆ ಗಿರಿ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರ: ಪ್ರೀತಿ ಪ್ರೇಮ
ನಿರ್ಮಾಣ: ಕೃಷ್ಣ ಚೈತನ್ಯ
ನಿರ್ದೇಶನ: ಕಾಶಿ
ತಾರಾಗಣ: ಕೃಷ್ಣ ಚೈತನ್ಯ, ನಿಧಿ ಕುಶಾಲಪ್ಪ, ಗಿರಿ ಮತ್ತಿತರರು

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ibbani tabbida ileyali movie review

Ibbani Tabbida Ileyali Review; ತಾಜಾ ಪ್ರೀತಿಯ ಭಾವ ಲಹರಿ

My Hero Movie Review

My Hero Movie Review; ಸೂಕ್ಷ್ಮ ಸಂದೇಶದ ಆಪ್ತ ಸಿನಿಮಾ

Taekwondo girl Review

Taekwondo girl Review; ಹಠದಲ್ಲಿ ಅರಳಿದ ಪ್ರತಿಭೆ

Laughing Buddha Review; ಬುದ್ಧನ ಕಾಮಿಡಿ ಪುರಾಣ

Laughing Buddha Review; ಬುದ್ಧನ ಕಾಮಿಡಿ ಪುರಾಣ

pepe movie review

Pepe Movie Review: ತೊರೆಯಲ್ಲಿ ಹರಿದ ನೆತ್ತರ ಕಥೆಯಿದು…

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.