ಸರಣಿ ಕಳ್ಳತನಕ್ಕೆ ಬೆಚ್ಚಿದ ದೊಡ್ಡಬಳ್ಳಾಪುರ ಜನತೆ


Team Udayavani, Feb 21, 2017, 11:23 AM IST

robbers.jpg

ದೊಡ್ಡಬಳ್ಳಾಪುರ: ನಗರದಲ್ಲಿ ಭಾನುವಾರ ರಾತ್ರಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಒಂಟಿ ಮಹಿಳೆ ಇದ್ದ ಮನೆಯೂ ಸೇರಿದಂತೆ ಆರು ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ನಗದು ಲೂಟಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ.

ಶಾಂತಿನಗರದ ಮಾಂಗಲ್ಯ ಕಲ್ಯಾಣ ಮಂಟಪದ ಮುಖ್ಯ ರಸ್ತೆಯಲ್ಲಿರುವ ಮಂಜುನಾಥ್‌ ಎಂಬುವವರ ಮನೆಯಲ್ಲಿ ಮಹಿಳೆ ಒಂಟಿಯಾಗಿರುವ ಸಮಯ ನೋಡಿ ರಾತ್ರಿ 9 ಗಂಟೆ ಸಮಯದಲ್ಲಿ ಲಗ್ನ ಪತ್ರಿಕೆ ಕೊಡುವ ನೆಪದಲ್ಲಿ ಮನೆ ಪ್ರವೇಶಿದ ಅಪರಿಚಿತ ಮಹಿಳೆ ಹಾಗೂ ಒಬ್ಬ ಪುರುಷ ತಕ್ಷಣ ಮಹಿಳೆಗೆ ಪ್ರಜೆ` ತಪ್ಪಿಸಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಲೂಟಿ ಮಾಡಿದ್ದಾರೆ. 

ಘಟನೆಯ ವಿವರ: ಶಾಂತಿನಗರದ ನಿವಾಸಿಗಳಾದ ಮಂಜುನಾಥ್‌ ಮತ್ತು ವಿಶ್ವನಾಥ್‌ ಎಂಬ ಸಹೋದರರು ನಗರದಲ್ಲಿ ಸೀಮೆಎಣ್ಣೆ ಬಂಕ್‌ ಹಾಗೂ ಎಂ.ಅರ್‌.ಎಫ್.ಟೈರ್‌ ಶೋ ರೂಮ್‌ ಹೊಂದಿದ್ದಾರೆ. ಭಾನುವಾರ ಮಂಜುನಾಥ್‌ ತಮ್ಮ ತಾಯಿ, ಪತ್ನಿಯೊಂದಿಗೆ ಸಿರಾಕ್ಕೆ ತೆರಳಿದ್ದರು. ವಿಶ್ವನಾಥ್‌ ಸಂಜೆ 5 ಗಂಟೆಗೆ ತಿರುಪತಿಗೆ ತೆರಳಿದ್ದರು. ಮನೆಯಲ್ಲಿ ವಿಶ್ವನಾಥ್‌ ಪತ್ನಿ ಕಾವ್ಯ ಹಾಗೂ 5 ವರ್ಷದ ಮಗು ಮಾತ್ರ ಇತ್ತು.

ರಾತ್ರಿ ಸುಮಾರು 9 ಗಂಟೆಯಲ್ಲಿ ಇಬ್ಬರು ಅಪರಿಚಿತರು ಬಾಗಿಲು ಬಡಿದಿದ್ದಾರೆ. ಅವರನ್ನು ಕಾವ್ಯ ವಿಚಾರಿಸಿದ್ದಾರೆ. ಮಂಜುನಾಥ್‌ ಮತ್ತು ವಿಶ್ವನಾಥ್‌ರನ್ನು ಕೇಳಿದ ಅಪರಿಚಿತರು, ಲಗ್ನಪತ್ರಿಕೆ ಕೊಡಬೇಕು ಎಂದಾಗ ಕಾವ್ಯ ಬಾಗಿಲು ತೆರೆದಿದ್ದಾರೆ. ಈ ವೇಳೆ ಕಾವ್ಯಾ ಅವರನ್ನು ಪ್ರಜ್ಞೆ ತಪ್ಪಿಸಿರುವ ಆಗಂತುಕರು ಮನೆ ದೋಚಿದ್ದಾರೆ. ಅಪರಿಚಿತರು ಒಳಗೆ ಬಂದಿದ್ದಷ್ಟೇ ಗೊತ್ತು ಎನ್ನುತ್ತಾರೆ ಕಾವ್ಯ. ರಾತ್ರಿ 9 ಗಂಟೆಯಿಂದಲೂ ಮಂಜುನಾಥ್‌ ಮನೆಗೆ ಕರೆ ಮಾಡಿದರೂ ಕಾವ್ಯ ಕರೆ ಸ್ವೀಕರಿಸಿಲ್ಲ.

ನಂತರ ರಾತ್ರಿ 11.30 ಕ್ಕೆ ಸಿರಾದಿಂದ ವಾಪಸ್ಸು ಬಂದು ನೋಡಿದಾಗ ಹೊರಗಿನಿಂದ ಚಿಲಕ ಹಾಕಿರುವುದು ಕಂಡು ಬಂದಿದೆ. ಒಳಗೆ ಬಂದು ನೋಡಿದಾಗ ರೂಮಿನಲ್ಲಿ ಕಾವ್ಯಾ ಪ್ರಜಾ`ಹೀನಸ್ಥಿತಿಯಲ್ಲಿ ಬಿದ್ದಿದ್ದಾರೆ. ನಂತರ ಮನೆ ಪರಿಶೀಲಿಸಿದಾಗ ಬೆಳ್ಳಿಯ ಒಡವೆಗಳನ್ನು ಬಿಟ್ಟು, 1.5 ಕೆ.ಜಿ.ಚಿನ್ನದ ಹಾಗೂ ವಜ್ರದ ಒಡವೆ, ಒಂದು ಲಕ್ಷ ರೂ ನಗದು ದೋಚಿರುವುದು ಪತ್ತೆಯಾಗಿದೆ. 

ಅಂಗಡಿಗಳಲ್ಲಿ ಸರಣಿ ಕಳ್ಳತನ: ಒಂದೆಡೆ ಮನೆ ಲೂಟಿಯಾಗಿದ್ದರೆ, ಇನ್ನೊಂದು ಕಡೆ ನಗರದ ಮುಖ್ಯರಸ್ತೆಯಲ್ಲಿ ಅದೂ ಪೊಲೀಸ್‌ ಠಾಣೆಯ ಪಕ್ಕದಲ್ಲಿಯೇ 6 ಅಂಗಡಿಗಳಲ್ಲಿ ಕಳ್ಳತನವಾಗಿವೆ. ಈ ಅಂಗಡಿಗಳು ಮರದ ಬಾಗಿಲುಗಳನ್ನು ಹೊಂದಿದ್ದು, ಅಂಗಡಿಯ ಬಾಗಿಲು ಹಾಗೂ ಡೋರ್‌ಲಾಕ್‌ಗಳನ್ನು ಒಡೆದು ಕಳ್ಳತನ ಮಾಡಲಾಗಿದೆ. ಪ್ಲಾಸ್ಟಿಕ್‌ ಅಂಗಡಿ ಟಿಫ‌ನ್‌ ಸೆಂಟರ್‌ಗಳನ್ನೂ ಕಳ್ಳರು ಬಿಟ್ಟಿಲ್ಲ.

ಮುಖ್ಯರಸ್ತೆಯಲ್ಲಿನ ಅನ್ನಪೂರ್ಣೇಶ್ವರಿ ಫ್ಯಾನ್ಸಿ ರೆಡಿಮೇಡ್‌ ಸೆಂಟರ್‌ನಲ್ಲಿ 8 ಸಾವಿರ ನಗದು, ಮಂಜುನಾಥ್‌ ಪ್ಲಾಸ್ಟಿಕ್‌ ಅಂಗಡಿಯಲ್ಲಿ 15 ಸಾವಿರ ನಗದು, ಮಂಜುನಾಥ್‌ ಟಿಫ‌ನ್‌ ಸೆಂಟರ್‌ನಲ್ಲಿ 2 ಸಾವಿರ ನಗದು, ಬಸವೇಶ್ವರ ಸ್ಟೌವ್‌ ಅಂಗಡಿಗಳಲ್ಲಿ 2,500 ನಗದು, ಮಹೇಶ್‌ ಟಿಫ‌ನ್‌ ಸೆಂಟರ್‌ನಲ್ಲಿ 1000 ರೂ ನಗದು ದೋಚಲಾಗಿದೆ. 

ಟಾಪ್ ನ್ಯೂಸ್

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

5-ptr

Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.