ಇರಾಕ್ ಯಾತ್ರೆಗೆ ತೆರಳಿದ್ದ ಮುಂಬಯಿಯ ಈರ್ವರು ಯುವಕರು ನಾಪತ್ತೆ
Team Udayavani, Feb 22, 2017, 4:56 PM IST
ಮುಂಬಯಿ: ಕಳೆದ ತಿಂಗಳು ಇರಾಕ್ಗೆ ಯಾತ್ರೆಗೆಂದು ತೆರಳಿದ್ದ ಈರ್ವರು ಯುವಕರು ಇರಾಕ್ ತಲುಪಿದ ಬಳಿಕ ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ.
ಇದೀಗ ನಾಪತ್ತೆಯಾಗಿರುವರೆನ್ನಲಾಗಿರುವ ಈ ಈರ್ವರು ಯುವಕರಿಗಾಗಿ ರಾಜ್ಯದ ಭಯೋತ್ಪಾದನ ನಿಗ್ರಹ ದಳ ಶೋಧ ಕಾರ್ಯ ಆರಂಭಿಸಿದೆ.
ಇರಾಕ್ ರಾಜಧಾನಿ ಬಗ್ಧಾದ್ನಲ್ಲಿರುವ ಸೂಫಿ ಸಂತ ಅಬ್ದುಲ್ ಖಾದಿರ್ ಜಿಲಾನಿ ಅವರ ಸಮಾಧಿಗೆ ಪ್ರಾರ್ಥನೆ ಸಲ್ಲಿಸಲೆಂದು ನಗರದ ಟೂರ್ ಕಂಪನಿಯೊಂದರ ಆಶ್ರಯದಲ್ಲಿ ಜನವರಿಯಲ್ಲಿ ತೆರಳಿದ್ದ ಎರಡು ತಂಡಗಳಲ್ಲಿ ಈ ಯುವಕರಿದ್ದರು. ಆದರೆ ಇರಾಕ್ಗೆ ತಲುಪಿದ ಬಳಿಕ ಇವರೀರ್ವರು ಟೂರ್ ಕಂಪನಿ ಮತ್ತು ಕುಟುಂಬದವರ ಸಂಪರ್ಕವನ್ನು ಕಡಿದುಕೊಂಡಿದ್ದರು.
ಪ್ರಕರಣದ ಸಂಬಂಧ ತನಿಖೆಯನ್ನು ಕೈಗೆತ್ತಿಕೊಂಡಿರುವ ಎಟಿಎಸ್ ದಕ್ಷಿಣ ಮುಂಬಯಿನಲ್ಲಿರುವ ಟೂರ್ ಕಂಪನಿ ಮತ್ತು ಮುಂಬಯಿ ವಿಮಾನ ನಿಲ್ದಾಣದಿಂದ ಈ ಯುವಕರ ಬಗೆಗೆ ಮಾಹಿತಿಗಳನ್ನು ಪಡೆದುಕೊಂಡಿದೆ.
ಮೂಲತಃ ಈ ಯುವಕರು ಪಶ್ಚಿಮಬಂಗಾಳದವರೆನ್ನಲಾಗಿದ್ದು ನಗರದಲ್ಲಿ ವಾಸವಾಗಿದ್ದರೇ? ಎಂಬ ಬಗೆಗೆ ಖಚಿತ ಮಾಹಿತಿ ಲಭಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.