ಬೆಳ್ತಂಗಡಿ ಬರಪೀಡಿತ ಘೋಷಣೆಗೆ ತಾ.ಪಂ. ನಿರ್ಣಯ


Team Udayavani, Feb 24, 2017, 10:37 AM IST

zax.jpg

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕನ್ನು ಬರಪೀಡಿತ ತಾಲೂಕಾಗಿ ಘೋಷಣೆ ಮಾಡಬೇಕೆಂದು ಇಲ್ಲಿನ ತಾಲೂಕು ಪಂಚಾಯತ್‌ ಗುರುವಾರ ಸರ್ವಾನುಮತದ ನಿರ್ಣಯ ಮಾಡಿದೆ.

ದಿಡುಪೆಯಲ್ಲಿ ಕೃಷಿಕ ಕುಟುಂಬಗಳು ಗದ್ದೆಗೆ ನೀರಿಲ್ಲದೇ ಭತ್ತದ ಕೃಷಿಯನ್ನು ಸ್ವಯಂ ನಾಶ ಮಾಡುತ್ತಿರುವ ಕುರಿತು ಉದಯವಾಣಿ ಫೆ. 23ರಂದು ವರದಿ ಮಾಡಿತ್ತು. ಇದರ ಗಂಭೀರತೆ ಅರಿತ ತಾ.ಪಂ. ಸದಸ್ಯರಾದ ಗೋಪಿನಾಥ ನಾಯಕ್‌, ಜಯರಾಮ್‌, ಕೇಶವತಿ,ವಿಜಯ ಗೌಡ, ಶಶಿಧರ್‌, ಸುಧಾಕರ್‌, ಸೆಬಾಸ್ಟಿಯನ್‌, ಜಾಯೆಲ್‌, ನೆರಿಯ ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌, ಮಾಲಾಡಿ ಪಂಚಾಯತ್‌ ಅಧ್ಯಕ್ಷ ಬೇಬಿ ಸುವರ್ಣ ಮೊದಲಾದವರು ನಿರ್ಣಯಕ್ಕೆ ಆಗ್ರಹಿಸಿದರು. 

ಪಶ್ಚಿಮಘಟ್ಟದ ತಪ್ಪಲಿನಲ್ಲಿಯೇ ಇಂತಹ ಸ್ಥಿತಿಯಾದರೆ ಇತರೆಡೆ ಹೇಗೆ ಇರಬಹುದು ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿದರು. ತಹಶೀಲ್ದಾರ್‌ ತಿಪ್ಪೆಸ್ವಾಮಿ ಕೂಡ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಿಕೊಡಬಹುದು ಎಂದು ಸಹಮತ ವ್ಯಕ್ತಪಡಿಸಿದರು. ಇದರಂತೆ ನಿರ್ಣಯ ಮಂಡಿಸಲಾಯಿತು.

ಪರಿಹಾರ ಭರವಸೆ
ನೀರಿಲ್ಲದೇ ದಿಡುಪೆಯಲ್ಲಿ ಭತ್ತದ ಬೆಳೆ ನಾಶ ಮಾಡುತ್ತಿರುವ ಕುರಿತು ಉದಯವಾಣಿ ವರದಿ ಗಮನಿಸಿದ್ದು, ಅವರಿಗೆ ಪರಿಹಾರ ಪಡೆಯಲು ಅವಕಾಶ ಇದೆ ಎಂದು ತಹಶೀಲ್ದಾರ್‌ ತಿಪ್ಪೆಸ್ವಾಮಿ ಉದಯವಾಣಿಗೆ ಪ್ರತಿಕ್ರಿಯಿಸಿದ್ದಾರೆ. ಬೆಳೆ ನಾಶ ಮಾಡಬೇಡಿ. ಬದಲಾಗಿ ಬೆಳೆ ಬಂದಿಲ್ಲ ಎಂದು ಕೃಷಿ ಇಲಾಖೆ ಗಮನಕ್ಕೆ ತಂದು ಅವರಿಂದ ಸೂಕ್ತ ಮೌಲ್ಯಮಾಪನ ಮಾಡಿಸಿ ಕಂದಾಯ ಇಲಾಖೆಗೆ ನೀಡಿದರೆ ಅದಕ್ಕೆ ಸರಕಾರದಿಂದ ಪರಿಹಾರಧನ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಬರಪೀಡಿತ ತಾಲೂಕು ಎಂದು ಏಕಾಏಕಿ ಘೋಷಣೆ ಸಾಧ್ಯವಿಲ್ಲ. ಎಲ್ಲ ಪಂಚಾಯತ್‌ನವರು ನಿರ್ಣಯ ಮಾಡಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕುಡಿಯುವ ನೀರಿನ ಎಂಜಿನಿಯರಿಂಗ್‌ ಇಲಾಖೆಯವರು ವರದಿ ಸಿದ್ಧಪಡಿಸಿ ಶಾಸಕರು, ಸಂಸದರ ಮೂಲಕ ಸರಕಾರಕ್ಕೆ ನೀಡಿದರೆ ಸರಕಾರ ಪರಿಶೀಲಿಸಬಹುದು ಎಂದು ತಹಶೀಲ್ದಾರ್‌ ಹೇಳಿದ್ದಾರೆ.

ಭತ್ತದ ಕೊರತೆ: ಈ ಮಧ್ಯೆ ರಾಜ್ಯದಲ್ಲಿ ಭತ್ತದ ಕೊರತೆ ಉಂಟಾಗಿದೆ. ಕೇರಳದ ಅಕ್ಕಿಮಿಲ್ಲಿನವರು ಒಡಿಶಾ ಹಾಗೂ ಗುಜರಾತ್‌ ಕಡೆಗೆ ಮುಖ ಮಾಡಿದ್ದರೆ ಕರ್ನಾಟಕದ ಅಕ್ಕಿಮಿಲ್ಲಿನವರು ಒಡಿಶಾ, ಉತ್ತರಪ್ರದೇಶ, ಮಧ್ಯಪ್ರದೇಶಕ್ಕೆ ಜನ ಕಳುಹಿಸಿ ಭತ್ತ ತರಿಸುತ್ತಿದ್ದಾರೆ ಎಂದು ರೈತಬಂಧು ಆಹಾರೋದ್ಯಮ್‌ ಸಂಸ್ಥೆ ಪಾಲುದಾರ ಶಿವಶಂಕರ ನಾಯಕ್‌ ಹೇಳಿದ್ದಾರೆ. ಈ ಮಧ್ಯೆ ಅಕ್ಕಿ ಬೆಲೆ ಗಗನಕ್ಕೆ ಏರುತ್ತಿದ್ದು, ಕರ್ನಾಟಕ ಹಾಗೂ ಮಧ್ಯಪ್ರದೇಶ ಸರಕಾರದ ಬಳಿ ಅಕ್ಕಿ, ಭತ್ತದ ದಾಸ್ತಾನೇ ಇಲ್ಲ ಎಂಬ ಆಘಾತಕಾರಿ ಮಾಹಿತಿ ಕೂಡ ಮೂಲಗಳಿಂದ ತಿಳಿದುಬಂದಿದೆ. ಹೀಗೊಂದು ವೇಳೆ ಆಗಿದ್ದಲ್ಲಿ ಅಕ್ಕಿಯ ದರದ ನಿಯಂತ್ರಣ ಕಾಳಸಂತೆಕೋರರಿಂದ ನಡೆಯುವ ಸಂಭವವಿದೆ. ಸರಕಾರದ ಬಳಿ ದಾಸ್ತಾನಿಲ್ಲದೇ ನಿಯಂತ್ರಣವೂ ಕಷ್ಟ.

ಬಂಗೇರ ಆಗ್ರಹ 
ಶಾಸಕ, ರಾಜ್ಯ ಸಣ್ಣ ಕೈಗಾರಿಕಾ ನಿಗಮ ಅಧ್ಯಕ್ಷ ಕೆ. ವಸಂತ ಬಂಗೇರ ಅವರು ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಬೆಳ್ತಂಗಡಿಯನ್ನು ಬರಪೀಡಿತ ಘೋಷಣೆಗೆ ಪತ್ರ ಬರೆದಿದ್ದೇನೆ. ಸರಕಾರ ಸ್ಪಂದಿಸಿಲ್ಲ. ಈಗ ಪತ್ರಿಕಾ ವರದಿ ತುಣುಕು, ತಾ.ಪಂ. ನಿರ್ಣಯ ಸಹಿತ ಇನ್ನೊಮ್ಮೆ ಸರಕಾರಕ್ಕೆ ಪತ್ರ ಬರೆದು ಬರಪೀಡಿತ ಘೋಷಣೆಗೆ ಆಗ್ರಹಿಸುತ್ತೇನೆ. ರೈತರು ಆತಂಕಕ್ಕೆ ಒಳಗಾಗಬೇಡಿ. ಬೆಳೆ ನಾಶ ಮಾಡಬೇಡಿ. ತಹಶೀಲ್ದಾರ್‌ ಮೂಲಕ ಪರಿಹಾರ ಪಡೆಯಿರಿ ಎಂದಿದ್ದಾರೆ.

ಟಾಪ್ ನ್ಯೂಸ್

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!

“Koragajja” Movie producer gifted a car to the director

Kannada Film; ʼಕೊರಗಜ್ಜʼ ನಿರ್ದೇಶಕರಿಗೆ ಕಾರ್‌ ಗಿಫ್ಟ್ ಮಾಡಿದ ನಿರ್ಮಾಪಕ

3-sedam

Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಉಲ್ಲೇಖೀಸಿದ ಪೋಸ್ಟ್‌: ದೂರು

Sullia: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಉಲ್ಲೇಖೀಸಿದ ಪೋಸ್ಟ್‌: ದೂರು

085

Puttur: ಕಾಂಗ್ರೆಸ್‌ ಕಾರ್ಯಕರ್ತನದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್‌

Puttur: ತಿರುಪತಿ ಲಡ್ಡು ಅಪವಿತ್ರಗೊಳಿಸಿದವರ ವಿರುದ್ಧ ದೂರು ದಾಖಲು

Puttur: ತಿರುಪತಿ ಲಡ್ಡು ಅಪವಿತ್ರಗೊಳಿಸಿದವರ ವಿರುದ್ಧ ದೂರು ದಾಖಲು

05856

Sullia: ಮರ್ಕಂಜ; ಕಾಣೆಯಾಗಿದ್ದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆ

Sullia: ಅಂಗಡಿ, ಹೊಟೇಲ್‌ನಿಂದ ನಗದು ಕಳವು

Sullia: ಅಂಗಡಿ, ಹೊಟೇಲ್‌ನಿಂದ ನಗದು ಕಳವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!

5-

Mangaluru: ಸೆನ್‌ ಪೊಲೀಸ್‌ ಠಾಣೆಗಳು ಮೇಲ್ದರ್ಜೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.