ಬಂದಿದ್ದು ದರೋಡೆಗೆ, ಮಾಡಿದ್ದು ಕೊಲೆ


Team Udayavani, Feb 24, 2017, 11:26 AM IST

murder.jpg

ಬೆಂಗಳೂರು: ಕಳೆದ ಎರಡು ವರ್ಷಗಳ ಹಿಂದೆ ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭಾರತೀಯ ನಿವೃತ್ತ ವಾಯುಸೇನೆ ಅಧಿಕಾರಿ ಕೊಲೆ ಪ್ರಕರಣ ಭೇದಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಸೂರ್ಯ ನಗರ ಠಾಣೆ ಪೊಲೀಸರು ಐವರು ಆರೋಪಿಗಳು ಸೇರಿದಂತೆ 12 ಮಂದಿ ತಂಡವನ್ನು ಬಂಧಿಸಿದ್ದಾರೆ.

2014ರ ನವೆಂಬರ್‌ 23 ರಂದು ನಿವೃತ್ತ ವಾಯು ಸೇನೆ ಅಧಿಕಾರಿ ಪರ್ವೇಜ್‌ ಕೋಕರ್‌ ಅವರ ಮನೆಗೆ ದರೋಡೆಗೆ ಬಂದಿದ್ದ ತಂಡ ಅವರನ್ನು ಕೊಲೆ ಮಾಡಿತ್ತು. ಬೇರೊಂದು ಪ್ರಕರಣದ ವಿಚಾರಣೆ ವೇಳೆ ಹಂತರಕರ ಅಧಿಕಾರಿ ಹತ್ಯೆಯ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. 

ಹುಸ್ಕೂರಿನ ಲಕ್ಷ್ಮೀನಾರಾಯಣಪುರದ ಶ್ರೀನಿವಾಸ್‌ ಅಲಿಯಾಸ್‌ ಸೀನ(21), ಕಾಚನಾಯಕನಹಳ್ಳಿಯ ಗಿರೀಶ್‌(33), ತಿರುಮಗೊಂಡನಹಳ್ಳಿಯ ಸುಬ್ರಮಣಿ(32), ಗೂಳಿಮಂಗಲದ ನಾಗರಾಜು, ಮಡಿವಾಳದ ಸತ್ಯನಾರಾಯಣ ಅಲಿಯಾಸ್‌ ನ್ಯಾನೋ ಸತ್ಯ(28) ಬಂಧಿತ ಆರೋಪಿಗಳು ಎಂದು ಗ್ರಾಮಾಂತರ ಎಸ್ಪಿ ಅಮಿತ್‌ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಬಂಧಿತರಿಂದ 1.25 ಕೋಟಿ ರೂ.ಮೌಲ್ಯದ ಚಿನ್ನಾಭರಣ, ಬೆಳ್ಳಿ, ಒಂದು ಪಿಸ್ತೂಲ್‌, ಬೆಲೆಬಾಳುವ ವಸ್ತುಗಳು ಹಾಗೂ 60 ಕೋಟಿ ಬೆಲೆಯ ಭೂ ದಾಖಲೆ ವಶಪಡಿಸಿಕೊಳ್ಳಲಾಗಿದೆ.

ದರೋಡೆ ಬಂದು ಭಯದಿಂದ ಕೊಲೆ ಮಾಡಿದ್ರು: 2014ರ ನವೆಂಬರ್‌ 23 ರಂದು ರಾತ್ರಿ ಹಂತಕರು ನಗರದ ಹೊರವಲಯದಲ್ಲಿರುವ ನಿವೃತ್ತ ವಾಯುಸೇನೆ ಅಧಿಕಾರಿ  ಪರ್ವೇಜ್‌ ಕೋಕರ್‌ ಇದ್ದ “ಎಸ್ಟೇಟ್‌ ಕ್ಲಬ್‌ನ ಸೆಲಿ ಗ್ರೀನ್‌ ಪ್ಲಾಂಟೇಷನ್‌’ನಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದರು. ದುಷ್ಕರ್ಮಿಗಳು ಕಾರಿನಲ್ಲಿ ಬಂದಿದ್ದರು. ಸತ್ಯನಾರಾಯಣ ಕಾರಿನಲ್ಲೆ ಇದ್ದರೆ, ನಾಗರಾಜು ಮನೆ ಹೊರಗಡೆ ಕಾವಲಿದ್ದ. ಉಳಿದ ಮೂವರು ಮನೆ ಪ್ರವೇಶಿಸಿದ್ದರು.

ಈ ವೇಳೆ ಎಚ್ಚರಗೊಂಡ ಪರ್ವೇಜ್‌ ಕೋಕರ್‌ ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. ಸಿಕ್ಕಿ ಬೀಳುತ್ತೇವೆ ಎಂಬ ಆತಂಕದಿಂದ ದುಷ್ಕರ್ಮಿಗಳು ಫ‌ವೇಜ್‌ ಅವರ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು  ಘಟನೆ ನಡೆದ ವೇಳೆ ಮೃತ ವಾಯುಸೇನೆ ಅಧಿಕಾರಿ ಪತ್ನಿ ಮತ್ತೂಂದು ಕೊಠಡಿಯಲ್ಲಿ ಮಲಗಿದ್ದರು.

ಅಲ್ಲದೆ, ಕೃತ್ಯವೆಸಗಲು ಬಂದಿದ್ದ ದುಷ್ಕರ್ಮಿಗಳು ಅವರ ಕೊಠಡಿಯ ಬಾಗಿಲನ್ನು ಲಾಕ್‌ ಮಾಡಿದ್ದರು. ಹೀಗಾಗಿ ಹೊರಗಿನ ಯಾವುದೇ ಘಟನೆ ಅವರಿಗೆ ಗೊತ್ತಾಗಿರಲಿಲ್ಲ. ತನಿಖೆ ಕೈಗೊಂಡಿದ್ದ ಪೊಲೀಸರು ಮೊದಲಿಗೆ ಅಧಿಕಾರಿಯ ಪತ್ನಿಯ ಮೇಲೆಯೇ ಶಂಕೆ ವ್ಯಕ್ತಪಡಿಸಿದ್ದರು. 

ಮೂಲತಃ ಪಂಜಾಬ್‌ನವರಾದ ಮೃತ ಪರ್ವೇಜ್‌ ಭಾರತೀಯ ವಾಯುಸೇನೆಯಲ್ಲಿ ಡೆಕೋರೇಟೆಡ್‌ ಅಧಿಕಾರಿಕಾರಿಯಾಗಿ 1968ರಿಂದ 2003ರ ತನಕ 35 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. 1997ರಲ್ಲಿ ನಡೆದ ಭಾರತ -ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪರ್ವೇಜ್‌ ಉನ್ನತ ಹುದ್ದೆಯಲ್ಲಿದ್ದರು. 

60 ಕೋಟಿ ಮೌಲ್ಯದ ಆಸ್ತಿ ಪತ್ರ ಕದ್ದಿದ್ದರು
 ಆರೋಪಿಗಳು 2016ರ ಜುಲೈ 20ಕ್ಕೆ ಹುಸ್ಕೂರಿನ ಲಕ್ಷ್ಮೀನಾರಾಣಪುರದಲ್ಲಿರುವ  ರಿಯಲ್‌ ಎಸ್ಟೇಟ್‌ ಉದ್ಯಮಿ ಜುಬೇರ್‌ ಅಹ್ಮದ್‌ ಮನೆಯಲ್ಲಿ ದರೋಡೆ ಮಾಡಿದ್ದರು. ಈ ವೇಳೆ ಬೆಲೆಬಾಳುವ ವಸ್ತುಗಳು ಹಾಗೂ 60 ಕೋಟಿ ಮೌಲ್ಯದ ಭೂ ದಾಖಲೆಗಳನ್ನು ಕದಿದ್ದರು. 

ಫಾರ್ಮ್ಹೌಸ್‌ಗಳೇ ಟಾರ್ಗೆಟ್‌!
ಆರೋಪಿಗಳು ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಫಾರ್ಮ್ಹೌಸ್‌ ಮತ್ತು ಬಂಗಲೆಗಳನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದರು. ಈ ವರೆಗೆ ಸುಮಾರು 21 ಅಪರಾಧ ಕೃತ್ಯಗಳನ್ನು ನಡೆಸಿರುವ ತಂಡ, ತಮಿಳುನಾಡಿನ ವ್ಯಾಪ್ತಿಯಲ್ಲೂ ಕೃತ್ಯವೆಸಗಿದ್ದಾರೆ. ಆರೋಪಿಗಳು 35 ಲಕ್ಷ ರೂಮೌಲ್ಯದ ಚಿನ್ನಾಭರಣವನ್ನು ಹಟ್ಟಿಕಾ ಗೋಲ್ಡ್‌ ಕಂಪನಿಯಲ್ಲಿ ಅಡವಿಟ್ಟು 10 ಲಕ್ಷ ಪಡೆದಿದ್ದಾರೆ. ಹಣವನ್ನು ಹಂಚಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ತನಿಖಾಧಿಕಾರಿ ತಿಳಿಸಿದರು.   

ಟಾಪ್ ನ್ಯೂಸ್

BBK11: ಯಾರದೋ ಮನೆಯಲ್ಲಿ ಪಾತ್ರೆ ತಿಕ್ಕುತ್ತಿದ್ದೆ.. ದೊಡ್ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ

BBK11: ಯಾರದೋ ಮನೆಯಲ್ಲಿ ಪಾತ್ರೆ ತಿಕ್ಕುತ್ತಿದ್ದೆ.. ದೊಡ್ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ

AUSvsPAK: Australia announces squad for Pak series: Team has no captain!

AUSvsPAK: ಪಾಕ್‌ ಸರಣಿಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ: ತಂಡಕ್ಕೆ ನಾಯಕನೇ ಇಲ್ಲ!

Shimoga: ಹೆಚ್ಚಾಯ್ತು ಕಾಟ; ಕಾಡಾನೆಗಳ ಸೆರೆಗೆ ಮುಂದಾದ ಅರಣ್ಯ ಇಲಾಖೆ

Shimoga: ಹೆಚ್ಚಾಯ್ತು ಕಾಟ; ಕಾಡಾನೆಗಳ ಸೆರೆಗೆ ಮುಂದಾದ ಅರಣ್ಯ ಇಲಾಖೆ

Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್‌ ಅರ್ಜುನ್‌ʼ

Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್‌ ಅರ್ಜುನ್‌ʼ

ramesh

BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Explainer: ವಯನಾಡ್‌ ಲೋಕಸಮರ- ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Explainer: ವಯನಾಡ್‌ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Potholes: ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು

Potholes: ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು

7

Arrested: ವಿದ್ಯಾರ್ಥಿನಿಗೆ ಮುತ್ತು ನೀಡಿದ್ದ ಸೆಕ್ಯುರಿಟಿ ಗಾರ್ಡ್‌ ಬಂಧನ

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Bengaluru: ದುಷ್ಕರ್ಮಿಗಳಿಂದ ಬಸ್‌ ಡ್ರೈವರ್‌, ಕಂಡಕ್ಟರ್‌ಗೆ ಥಳಿತ!

Bengaluru: ದುಷ್ಕರ್ಮಿಗಳಿಂದ ಬಸ್‌ ಡ್ರೈವರ್‌, ಕಂಡಕ್ಟರ್‌ಗೆ ಥಳಿತ!

6

Bengaluru: ಹಲ್ಲೆ ನಡೆದರೆ ಪೌರ ಕಾರ್ಮಿಕರು ತಕ್ಷಣವೇ ದೂರು ನೀಡಿ: ಕಮಿಷನರ್‌

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

3

Mallikatte: ಸಿಟಿ ಆಸ್ಪತ್ರೆ ಜಂಕ್ಷನ್‌; ರಸ್ತೆ ಕಾಂಕ್ರೀಟ್‌ ಕಾಮಗಾರಿ ಆರಂಭ

Pranam devaraj starrer Son of muthanna movie

Son of Muthanna; ಮುತ್ತಣ್ಣನಿಗೆ ಶಿವಣ್ಣ ಸಾಥ್‌: ತಂದೆ-ಮಗನ ಬಾಂಧವ್ಯದ ಸುತ ಸಿನಿಮಾ

BBK11: ಯಾರದೋ ಮನೆಯಲ್ಲಿ ಪಾತ್ರೆ ತಿಕ್ಕುತ್ತಿದ್ದೆ.. ದೊಡ್ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ

BBK11: ಯಾರದೋ ಮನೆಯಲ್ಲಿ ಪಾತ್ರೆ ತಿಕ್ಕುತ್ತಿದ್ದೆ.. ದೊಡ್ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ

2

Mangaluru: ನಾಳೆಯಿಂದ ನೀತಿ ಸಂಹಿತೆ ಸಡಿಲಿಕೆ; ನೂತನ ಮೇಯರ್‌ ಆಡಳಿತ ಶುರು

AUSvsPAK: Australia announces squad for Pak series: Team has no captain!

AUSvsPAK: ಪಾಕ್‌ ಸರಣಿಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ: ತಂಡಕ್ಕೆ ನಾಯಕನೇ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.