ವಚನ ಮಹಾಸಂಪುಟಗಳ ಲೋಕಾರ್ಪಣೆ
Team Udayavani, Feb 24, 2017, 11:38 AM IST
ಬೆಂಗಳೂರು: ವಚನಗಳು ಕನ್ನಡಿಗರು ಜಗತ್ತಿಗೆ ಕೊಟ್ಟಿರುವ ಕೊಡುಗೆ. ಅವುಗಳಲ್ಲಿ ಪ್ರತಿಪಾದಿತವಾಗಿರುವ ಮೌಲ್ಯ ಜಾಗತಿಕವಾದದ್ದು ಎಂದು ಬೆಲ್ದಾಳದ ಶ್ರೀ ಬಸವ ಸಿದ್ದರಾಮ ಶರಣರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರ ಗುರುವಾರ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಾಂಸ್ಕೃತಿಕ ಸಮುತ್ಛಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೈಬಲ್ ಮಾದರಿಯ ವಚನ ಸಂಪುಟಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, “ಕಾಯಕ ಜೀವಿಗಳ ಜೀವನಾನುಭವ ಮೂಡಿಬಂದಿರುವ ವಚನಗಳು ಯಾವುದೇ ಜಾತಿ, ಮತಕ್ಕೆ ಸೀಮಿತವಲ್ಲ. ಇದೊಂದು ಮಹಾಮನೆಯಾಗಿದ್ದು, ಸಕಲ ಜೀವಾತ್ಮರಿಗೂ ಒಳಿತು ಬಯಸುತ್ತವೆ,” ಎಂದು ಹೇಳಿದರು.
ಪುಸ್ತಕ ಪ್ರಾಧಿಕಾರ ಪ್ರಕಟಿತ 23 ವಿವಿಧ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, “ವಚನಗಳು ಕನ್ನಡದ ದುಡಿಮೆ ಸಂಸ್ಕೃತಿಯ ಜನಸಾಹಿತ್ಯಕ್ಕೆ ಕೊಟ್ಟ ಸಾರ್ವಕಾಲಿಕ ಕೊಡುಗೆಯಾಗಿದೆ. ಪ್ರಾಧಿಕಾರ ಅಲೆಮಾರಿ ಸಮುದಾಯಗಳ ಕುರಿತು ಮೂರು ಕೃತಿಗಳನ್ನು ಪ್ರಕಟಿಸಿರುವುದು ಅಪರೂಪದ ವಿದ್ಯಮಾನ.
ಹೇಳಿಕೊಳ್ಳಲು ಒಂದು ಊರು, ತಲೆ ಮೇಲೆ ಒಂದು ಸೂರು ಇಲ್ಲದೆ ಅಲೆದಾಡುವ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸಾಂಸ್ಕೃತಿಕ ಚಹರೆಗಳನ್ನು ಅದೇ ಸಮುದಾಯಕ್ಕೆ ಸೇರಿದ ಬರಹಬಲ್ಲವರು ಬರೆದು ಅಕ್ಷರ ಲೋಕಕ್ಕೆ ಪರಿಚಯಿಸಿದ ಕೃತಿಗಳನ್ನು ಪ್ರಕಟಿಸುವ ಮೂಲಕ ಪ್ರಾಧಿಕಾರ ಸಾರ್ಥಕ ಕೆಲಸ ಮಾಡಿದೆ,” ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್, “ಪ್ರಾಧಿಕಾರದ ನಡಿಗೆ, ಯುವಜನರೆಡೆಗೆ, ಜನ ಸಾಮಾನ್ಯರು ಮತ್ತು ಗ್ರಾಮಾಂತರದೆಡೆಗೆ ಎಂಬ ತನ್ನ ಆಶಯವನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದೇನೆ. ಪಂಡಿತಮಾನ್ಯರಿಗೆ ಮಾತ್ರ ಮೀಸಲಾಗಿದ್ದ ಪ್ರಾಧಿಕಾರವನ್ನು ಜನಸಮೂಹಗಳ ನಡುವೆ ಕೂಡಿಕೊಳ್ಳುವಂತೆ ಸಾರ್ಥಕ ಸೇವೆ ಮಾಡಿದ್ದೇವೆ. ಜತೆಗೆ 54 ಮೌಲಿಕ ಪುಸ್ತಕಗಳನ್ನು ತಮ್ಮ ಅಧ್ಯಕ್ಷತೆಯಲ್ಲಿ ಪ್ರಕಟಿಸಿದ್ದೇವೆ,” ಎಂದು ಹೇಳಿದರು.
ಈ ಮೊದಲು 14 ಸಂಪುಟಗಳಲ್ಲಿ ಪ್ರಕಟಗೊಂಡ ವಚನ ಸಾಹಿತ್ಯ ಸಂಪುಟಗಳನ್ನು ಒಟ್ಟು ಸೇರಿಸಿ ಬೈಬಲ್ ಮಾದರಿಯಲ್ಲಿ ಕೇವಲ 2 ಸಂಪುಟಗಳನ್ನು ಮಾಡಲಾಗಿದೆ. ಮೊದಲ ಸಂಪುಟವು ಬಸವ ಯುಗದ ವಚನ ಮಹಾಸಂಪುಟವಾಗಿದ್ದು, 1952 ಪುಟಗಳನ್ನು ಒಳಗೊಂಡಿದೆ. 2ನೇ ಸಂಪುಟವು ಬಸವೋತ್ತರ ಯುಗದ ವಚನ ಮಹಾಸಂಪುಟವಾಗಿದ್ದು, 1536 ಪುಟಗಳನ್ನು ಒಳಗೊಂಡಿದೆ.
-ಬಂಜಗೆರೆ ಜಯಪ್ರಕಾಶ್, ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Potholes: ಮೆಜೆಸ್ಟಿಕ್ ಬಸ್ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು
Arrested: ವಿದ್ಯಾರ್ಥಿನಿಗೆ ಮುತ್ತು ನೀಡಿದ್ದ ಸೆಕ್ಯುರಿಟಿ ಗಾರ್ಡ್ ಬಂಧನ
Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!
Bengaluru: ದುಷ್ಕರ್ಮಿಗಳಿಂದ ಬಸ್ ಡ್ರೈವರ್, ಕಂಡಕ್ಟರ್ಗೆ ಥಳಿತ!
Bengaluru: ಹಲ್ಲೆ ನಡೆದರೆ ಪೌರ ಕಾರ್ಮಿಕರು ತಕ್ಷಣವೇ ದೂರು ನೀಡಿ: ಕಮಿಷನರ್
MUST WATCH
ಹೊಸ ಸೇರ್ಪಡೆ
Miracle: ವರ್ಷದಲ್ಲಿ 6ರಿಂದ 7 ತಿಂಗಳು ನೀರಿನಲ್ಲಿ ಮುಳುಗಡೆಯಾಗಿರುತ್ತೆ ಈ ದೇವಸ್ಥಾನ
Chewing Gum: ಕ್ರಿಕೆಟಿಗರು ಚೂಯಿಂಗ್ ಗಮ್ ಜಗಿಯುವುದು ಯಾಕೆ ಗೊತ್ತಾ? ಇಲ್ಲಿದೆ ಕಾರಣ
Udupi: ವಿವಿಧ ಬೇಡಿಕೆ ಈಡೇರಿಸುವಂತೆ ಅಂಗವಿಕಲರಿಂದ ಪ್ರತಿಭಟನೆ
Bidar; ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯದ ಸಂರಕ್ಷಣೆಯಾಗಬೇಕು: ಡಾ.ಜೆ.ಎಸ್.ಪಾಟೀಲ
Uttara Pradesh: ವಾರಾಣಸಿಯಲ್ಲಿ 51 ಅಡಿ ಎತ್ತರದ ಬೃಹತ್ ಹನುಮಂತ ಪ್ರತಿಮೆ ಅನಾವರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.