ಮಾರ್ಲಾಡಿ ಕಲ್ಯಾಣಿ ದುರ್ಗಾಪರಮೇಶ್ವರೀ ವರ್ಧಂತಿ, ರಜತ ಮುಖವಾಡ ಸಮರ್ಪಣೆ
Team Udayavani, Feb 25, 2017, 12:32 PM IST
ಸಿದ್ದಾಪುರ: ನಾಡೋಜ ಡಾ| ಜಿ. ಶಂಕರ್ ಅವರಿಂದ ಪುನರ್ ನಿರ್ಮಾಣಗೊಂಡ ಕಾರೇಬೈಲು ಮಾರ್ಲಾಡಿ ಶ್ರೀ ಸಪರಿವಾರ ಕಲ್ಯಾಣಿ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ವರ್ಧಂತ್ಯುತ್ಸವ, ರಜತ ಮುಖವಾಡ ಸಮರ್ಪಣೆ, ಮಹಾಪೂಜೆ, ವಾರ್ಷಿಕ ಕೆಂಡಸೇವೆ, ಹಾಲು ಹಬ್ಬವು ವೇ|ಮೂ| ವಿಶ್ವನಾಥ ಕೆದ್ಲಾಯ ಕೋಟೆ ಹಾಗೂ ಅರ್ಚಕ ವೃಂದವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತ್ತು.
ವರ್ಧಂತ್ಯುತ್ಸವ ಅಂಗವಾಗಿ ಬೆಳಗ್ಗೆ ದುರ್ಗಾಹೋಮ, ಪಂಚವಿಶಂತಿ ಕಲಶ ಸ್ಥಾಪನೆ, ಅಖೀಲ ಕಲಾತತ್ವ ಪೂರ್ವಕ ಪ್ರಧಾನ ಹೋಮ, ರಜತ ಮುಖವಾಡ ಸಮರ್ಪಣೆ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ರಂಗಪೂಜೆ, ಸೇವಾ ಕಾರ್ಯಕ್ರಮಗಳು, ರಾತ್ರಿ ಮಹಾಪೂಜೆ, ಸಂದರ್ಶನ, ಕೆೆಂಡಸೇವೆ, ಪ್ರಸಾದ ವಿತರಣೆ, ಮಾರಿಸೇವೆ, ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ರಾತ್ರಿ ಸ್ಥಳೀಯ ಕಲಾವಿದರಿಂದ ವಿವಿಧ ವಿನೋದಾವಳಿಗಳು, ತೆಕ್ಕಟ್ಟೆ ಕನ್ನುಕೆರೆ ಓಂಕಾರ ಕಲಾವಿದರ ತಂಡದವರಿಂದ ಎಷ್ಟ್ ಹೇಳೂÅ ಅಸ್ಟೆ ನಾಟಕ ಜರಗಿತು.
ಐರಬೈಲು ಕಿರ್ಲಾಡಿ ವಸಂತಿ ಭುಜಂಗ ಶೆಟ್ಟಿ ಹಾಗೂ ಮನೆಯವರು ರಜತ ಮುಖವಾಡವನ್ನು ದೇವಿಗೆ ಅರ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.