ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಿತ್ರನಟಿ ಶುಭಾ ಪೂಂಜ
Team Udayavani, Feb 25, 2017, 2:22 PM IST
ಶಿರ್ವ: ಶಿರ್ವ ಸಮೀಪದ ಪ್ರಕೃತಿದತ್ತ ಕಾಡಿನ ಮಧ್ಯೆ ಇರುವ ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಮಹಾಶಿವರಾತ್ರಿ ಮಹೋತ್ಸವದಲ್ಲಿ ಕನ್ನಡ,ತಮಿಳು ಚಿತ್ರನಟಿ ಶುಭಾ ಪೂಂಜ ಪಾಲ್ಗೊಂಡಿದ್ದರು.
ಕನ್ನಡ ಚಿತ್ರಗಳಾದ ಮಗಳೇ ಐ ಲವ್ ಯೂ, ನವೆಂಬರ್ 19, ತಾತನ ತಿಥಿ, ವಿಜಯ ರಾಘವೇಂದ್ರ ಜೊತೆ ಇನ್ನೂ ಹೆಸರಿಡದ ಚಿತ್ರ ಹಾಗೂ ಮಾತಂಗಿ ತಮಿಳು ಚಿತ್ರ ಸೇರಿ 5 ಚಿತ್ರಗಳ ಚಿತ್ರೀಕರಣದಲ್ಲಿ ಬಿಡುವಿಲ್ಲದ ನಟಿ ಶುಭಾ ಪೂಂಜಾ. ಈಕೆಯ ಮಾತಂಗಿ ತಮಿಳು ಚಿತ್ರ ಮುಂದಿನ ತಿಂಗಳು ತೆರೆ ಕಾಣಲಿದೆ.
ಉದಯ ಟಿ.ವಿ.ಯಲ್ಲಿ ಪ್ರಸಾರ ವಾಗುವ ಸೂಪರ್ ಕಬಡ್ಡಿಯಲ್ಲಿ ಸೆಮಿಫೈನಲ್ ಹಂತದಲ್ಲಿರುವ ರೆಬೆಲ್ ತಂಡದ ಮಾಲಕಿಯಾಗಿರುವ ಈಕೆ ಬಿಡುವಿಲ್ಲದಿದ್ದರೂ ಪ್ರತಿವರ್ಷದಂತೆ ಈ ಬಾರಿಯೂ ತನ್ನ ತಾಯಿಮನೆ ಪಿಲಾರು ಮಜಲಬೆಟ್ಟು ಬೀಡುವಿನ ಮನೆತನದ ಆಡಳಿತಕ್ಕೊಳಪಟ್ಟ ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಶಿವರಾತ್ರಿ ಮಹೋತ್ಸವದ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಬೆಂಗಳೂರಿನ ಉದ್ಯಮಿ ತಂದೆ ಭವಾನಿ ಶಂಕರ ಪೂಂಜಾ, ತಾಯಿ ಯೋಗಿನಿ ಪೂಂಜಾ ಹಾಗೂ ಸಹೋದರ ರಂಜಿತ್ ಪೂಂಜಾ ಹಾಗೂ ಕುಟುಂಬಿಕರೊಂದಿಗೆ ಭಾಗವಹಿಸಿ ಪ್ರಸಾದ ಸೀÌಕರಿಸಿ, ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಶುಭಾ ಪೂಂಜಾ ಅವರ ಸೋದರ ಮಾವ ಶ್ರೀ ದೇಗುಲದ ಆಡಳಿತ ಮೊಕೇ¤ಸರ ನ್ಯಾಯವಾದಿ ರಾಮಕೃಷ್ಣ ಶೆಟ್ಟಿ, ಜೀವಂಧರ ಬಲ್ಲಾಳ್, ಅರ್ಚಕ ಶ್ರೀನಿವಾಸ ಭಟ್, ಶರತ್ ಶೆಟ್ಟಿ, ಕರುಣಾಕರ ಶೆಟ್ಟಿ, ರಾಮದಾಸ್ ಶೆಣೈ, ಅರುಣ್ ಡಿ’ಸೋಜಾ, ಉಪನ್ಯಾಸಕ ಅನಂತ ಮೂಡಿತ್ತಾಯ ಉಪಸ್ಥಿತರಿದ್ದರು.ಬಳಿಕ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.