ಸೆಹ್ವಾಗ್ ಅಶಿಕ್ಷಿತ ಎಂಬ ಹೇಳಿಕೆ ಹಿಂಪಡೆದ ಜಾವೇದ್ ಅಖ್ತರ್
Team Udayavani, Mar 4, 2017, 3:45 AM IST
ಮುಂಬೈ: ಭಾರತ ಕ್ರಿಕೆಟ್ ಮಾಜಿ ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ರನ್ನು ಶಿಕ್ಷಿತನಲ್ಲ ಎಂದು ಜರೆದಿದ್ದ ಗೀತ ಸಾಹಿತಿ ಜಾವೇದ್ ಅಖ್ತರ್ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.
ಸೆಹ್ವಾಗ್ ಬಗ್ಗೆ ತಾನು ತಪ್ಪು ತಿಳಿದಿದ್ದೆ. ಆದ್ದರಿಂದ ತಾನು ಹೇಳಿಕೆ ಹಿಂಪಡೆಯುವುದಾಗಿ ಟ್ವೀಟರ್ನಲ್ಲಿ ಸ್ಪಷ್ಟೀಕರಿಸಿದ್ದಾರೆ.
ಇತ್ತೀಚೆಗೆ ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ನಡೆದ ಎಡ-ಬಲ ವಿದ್ಯಾರ್ಥಿಗಳ ನಡುವಿನ ಸಂಘರ್ಷ ಇಡೀ ಭಾರತದಲ್ಲಿ ಚರ್ಚೆಯಾಗಿತ್ತು. ಈ ಸಂದರ್ಭದಲ್ಲಿ ಮೃತ ಸೇನಾನಿ ಮಂದೀಪ್ ಸಿಂಗ್ ಪುತ್ರಿ ಗುರ್ಮೆಹರ್ ಕೌರ್ ಬಹಳ ಸಮಯದ ಹಿಂದೆ ನೀಡಿದ್ದ ಹೇಳಿಕೆ ದೊಡ್ಡ ಸುದ್ದಿಯಾಗಿತ್ತು. ತನ್ನ ತಂದೆಯನ್ನು ಕೊಂದಿದ್ದು ಪಾಕಿಸ್ತಾನವಲ್ಲ, ಯುದ್ಧ ಎಂದು ವಿದ್ಯಾರ್ಥಿನಿ ಹೇಳಿದ್ದರು. ಅದನ್ನು ಹಾಸ್ಯಮಾಡಿದ್ದ ಸೆಹ್ವಾಗ್, 2 ತ್ರಿಶತಕ ಹೊಡೆದಿದ್ದು ತಾನಲ್ಲ, ತನ್ನ ಬ್ಯಾಟ್ ಎಂದಿದ್ದರು. ಇದರಿಂದ ಆಕ್ರೋಶಗೊಂಡು ಜಾವೇದ್ ಸೆಹ್ವಾಗ್ರನ್ನು ಅಶಿಕ್ಷಿತ ಎಂಬರ್ಥದಲ್ಲಿ ವರ್ಣಿಸಿದ್ದರು.ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಸೆಹ್ವಾಗ್, ತಾನು ಕೇವಲ ಹಾಸ್ಯಕ್ಕಾಗಿ ಮಾತ್ರ ಮೇಲಿನಂತೆ ಹೇಳಿದ್ದಾಗಿ ನುಡಿದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ
Sandalwood: ಪಯಣದಲ್ಲಿ ನೀನಿರು ಸಾಕು..: ಅಭಿಮನ್ಯು ಚಿತ್ರದ ಹಾಡು ಬಂತು
Bishnoi: ಬಿಷ್ಣೋಯಿನ ಕೊಲ್ಲುವ ಪೊಲೀಸ್ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ
ರೈಸ್ ಪುಲ್ಲಿಂಗ್: ಉದ್ಯಮಿಗೆ ಆಸ್ತಿ ವಂಚನೆ… ಹಾಸನದ ಮಹಿಳೆ ಸೇರಿ ಐವರ ಬಂಧನ
Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.