ಇನ್ಮುಂದೆ 5 ನಿಮಿಷದಲ್ಲೇ ಪೊಲೀಸ್ರು ಹಾಜರ್‌


Team Udayavani, Mar 11, 2017, 12:53 PM IST

dvg1.jpg

ದಾವಣಗೆರೆ: ಇನ್ನು ಮುಂದೆ ದಾವಣಗೆರೆ, ಹರಿಹರ ನಗರದ ಯಾವುದೇ ಭಾಗದಲ್ಲಿ ಸಮಸ್ಯೆ ಎದುರಾದಲ್ಲಿ ಪೊಲೀಸರ ಅವಶ್ಯಕತೆ ಬಿದ್ರೆ 5 ನಿಮಿಷಕ್ಕೆ ಅಲ್ಲಿ ಅವರು ಬರ್ತಾರಂತೆ! ಪೂರ್ವ ವಲಯ ಪೊಲೀಸ್‌ ಮಹಾನಿರೀಕ್ಷಕ ಡಾ| ಎಂ.ಎ. ಸಲೀಂ ಶುಕ್ರವಾರ ಸಂಜೆ ಹೈಸ್ಕೂಲ್‌ ಮೈದಾನದಲ್ಲಿ ದೇವನಗರಿ ಗಸ್ತು ವಾಹನ, ಚೀತಾ ಬೈಕ್‌ಗಳಿಗೆ ಹಸಿರು ನಿಶಾನೆ ತೋರಿ, ಸುದ್ದಿಗಾರರೊಂದಿಗೆ ಮಾತನಾಡಿ,

ನಮ್ಮ ಪೊಲೀಸ್‌ ಸೇವೆಗೆ ವೇಗ ಕೊಡುವ ಉದ್ದೇಶದಿಂದ7 ವಾಹನಗಳು, 14 ಚೀತಾ ಬೈಕ್‌ಗಳನ್ನು ಗಸ್ತಿಗೆ ಮೀಸಲಿಡಲಾಗಿದೆ. ನಗರದಲ್ಲಿರುವ 7 ಠಾಣೆಗಳಿಗೆ ತಲಾ ಒಂದು ಗಸ್ತು ವಾಹನ, 2 ಚೀತಾ ನೀಡಲಾಗುತ್ತಿದೆ. ಇದೇ ರೀತಿ ಹರಿಹರದ 2 ಠಾಣೆಗಳಿಗೆ 2 ಗಸ್ತುವಾಹನ, 4 ಚೀತಾ ಬೈಕ್‌ ನೀಡಲಾಗುವುದು.

ಇದರ ಉದ್ದೇಶ ನಮ್ಮ ಠಾಣೆಗೆ ಯಾವುದೇ ದೂರು ಬಂದು, ಪೊಲೀಸರಅವಶ್ಯಕತೆ ಇದ್ದಲ್ಲಿ 5 ನಿಮಿಷದಲ್ಲಿ ನಗರದ ಯಾವುದೇ ಭಾಗವನ್ನು ತಲುಪುವುದಾಗಿದೆ ಎಂದರು. ದಾವಣಗೆರೆಗೆ ಗಸ್ತು ವಾಹನಗಳ ಅವಶ್ಯಕತೆ ಇತ್ತು. ಬೆಂಗಳೂರು, ಮೈಸೂರಿನಂತಹ ನಗರಗಳಲ್ಲಿ ಪ್ರತಿ ಠಾಣೆಗೆ ಎರಡೆರಡು ಗಸ್ತು ವಾಹನ ಇವೆ.

ನಮ್ಮ ನಗರಗಳಲ್ಲಿರಲಿಲ್ಲ. ಇದೇ ಕಾರಣಕ್ಕೆ ಇದೀಗ ಶಿವಮೊಗ್ಗ, ದಾವಣಗೆರೆ ಜಿಲ್ಲೆ ವ್ಯಾಪ್ತಿಯ ನಗರಗಳಿಗೆ ಗಸ್ತು ವಾಹನ ಸವಲತ್ತು ನೀಡಲಾಗಿದೆ. ಶಿವಮೊಗ್ಗಕ್ಕೂ ಸಹ 8 ಗಸ್ತು ವಾಹನ ಬಂದಿವೆ. 5 ಶಿವಮೊಗ್ಗಕ್ಕೆ, 2 ಭದ್ರಾವತಿಗೆ 1 ಸಾಗರ ಠಾಣೆಗೆ ನೀಡಲಾಗಿದೆ ಎಂದು ಅವರು ತಿಳಿಸಿದರು. ದಾವಣಗೆರೆಯಲ್ಲಿ ಈ ಹಿಂದೆ ಕದಂಬ ಎಂಬ ಗಸ್ತು ವಾಹನ ಇತ್ತು.

ಆದರೆ, ವಾಹನಗಳ ಕೊರತೆಯಿಂದಾಗಿ ಗಸ್ತು ವಾಹನ ತೆಗೆಯಲಾಯಿತು. ಇದೀಗ 5 ಹೊಸ ವಾಹನ ಖರೀದಿಸಿ, ಇದ್ದ 2 ವಾಹನಗಳ ಸೇರ್ಪಡೆಯೊಂದಿಗೆ ಹೊಸ ಗಸ್ತುವಾಹನ ಪಡೆ ರಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಸಂಚರಿಸಲುಸುಸಜ್ಜಿತ ವಾಹನ ನೀಡಲಾಗಿದೆ. ಸಿಸಿಟಿವಿ ಅಳವಡಿಸಿದ, ವಾಹನದ ಹಿಂದೆ ಒಂದು ಚಿಕಿತ್ಸಾ ಸೀಟಿನ ವ್ಯವಸ್ಥೆ ಇರುವ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ ಗಸ್ತಿಗೆ ನೀಡಲಾಗಿದೆ ಎಂದು ಅವರು ಹೇಳಿದರು. 

ಗಸ್ತು ವಾಹನ ಸಂಖ್ಯೆ ಹೆಚ್ಚಿಸಿದ್ದರಿಂದ ಸರಗಳ್ಳತನ ಪ್ರಮಾಣ ಕಡಮೆಯಾಗಬಹುದು. ಒಂದೇ ಬಾರಿಗೆ ಅಲ್ಲದಿದ್ದರೂ ನಿಧಾನವಾಗಿ ಇದರ ಪ್ರಮಾಣ ತಗ್ಗಬಹುದು. ಚಿನ್ನದ ಸರ ಅಪಹರಣ ವಿಷಯದಲ್ಲಿ ಅಪರಾಧಿಗಳನ್ನು ಪತ್ತೆ ಮಾಡದೆ ಪ್ರಕರಣ ಕಡಮೆಯಾಗುವುದಿಲ್ಲ. ಇದನ್ನು ನಾವು ಮುಂದಿನ ದಿನಗಳಲ್ಲಿ ಮಾಡಲಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಯಶೋದ ಎಸ್‌. ವಂಟಿಗೋಡಿ, ಡಿವೈಎಸ್‌ಪಿ ಅಶೋಕ್‌, ಸಿಪಿಐ ಉಮೇಶ್‌, ಯು.ಎ. ಸಂಗನಾಥ, ಪಿಎಸ್‌ಐ ರಾಜು, ಶ್ರೀಧರ್‌, ಶಿಲ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು. 

ಟಾಪ್ ನ್ಯೂಸ್

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ

ಸೆ. 30ರಿಂದ ಅ.15:ಡೈಮಂಡ್‌ ಚಿನ್ನಾಭರಣಗಳ ಪ್ರದರ್ಶನ,ಮಾರಾಟ

ಸೆ. 30ರಿಂದ ಅ.15:ಡೈಮಂಡ್‌ ಚಿನ್ನಾಭರಣಗಳ ಪ್ರದರ್ಶನ,ಮಾರಾಟ

Examination: ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆ ಯಶಸ್ವಿ

Examination: ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆ ಯಶಸ್ವಿ

BBK-11: ಬಿಗ್ ಬಾಸ್ ಮನೆಗೆ ಹೋದ ಕೊನೆಯ ಮೂವರು ಸ್ಪರ್ಧಿಗಳು ಇವರೇ…

BBK-11: ಬಿಗ್ ಬಾಸ್ ಮನೆಗೆ ಹೋದ ಕೊನೆಯ ಮೂವರು ಸ್ಪರ್ಧಿಗಳು ಇವರೇ…

CM-Ashokapuram

Mysuru: ನಾನು ಹೆದರುವ, ಜಗ್ಗುವ, ಬಗ್ಗುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; Conspiracy to stop Ganeshotsava is going on: Yatnal

Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್‌ ಆರೋಪ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

ಸಿಎಂ ರಾಜೀನಾಮೆ ಕೊಡಲ್ಲ, ಕಾನೂನು ಹೋರಾಟ ಮಾಡುತ್ತಾರೆ: ಎಸ್.ಎಸ್. ಮಲ್ಲಿಕಾರ್ಜುನ್

Davanagere; ಸಿಎಂ ರಾಜೀನಾಮೆ ಕೊಡಲ್ಲ,ಕಾನೂನು ಹೋರಾಟ ಮಾಡುತ್ತಾರೆ: ಎಸ್.ಎಸ್.ಮಲ್ಲಿಕಾರ್ಜುನ್

Davanagere City Corporation: new Mayor-Deputy Mayor elected

Davanagere City Corporation: ನೂತನ ಮೇಯರ್-ಉಪ ಮೇಯರ್‌ ಆಯ್ಕೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

supreem

Delhi ಪಾಲಿಕೆ ಚುನಾವಣೆ ರಿಸಲ್ಟ್: ಸುಪ್ರೀಂಗೆ ಆಪ್‌ ಮೇಲ್ಮನವಿ

prashanth-Kishore

Prashant Kishore; ನಿವೃತ್ತ ಅಧಿಕಾರಿಗಳಿಂದ ನಿತೀಶ್‌ ಸರಕಾರ ನಿರ್ವಹಣೆ

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

ARMY (2)

Kashmir;ಕಥುವಾದಲ್ಲಿ ಎನ್‌ಕೌಂಟರ್‌: ಉಗ್ರನ ಹತ್ಯೆ

1-addasd

Congress ಪಕ್ಷ ಸಿದ್ಧಾಂತದಲ್ಲಿ ರಾಜಿ ಇಲ್ಲ: ಖರ್ಗೆಗೆ ವಿಕ್ರಮಾದಿತ್ಯ ಸಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.