ಬಾಳ ಹಾದಿಯ ಆಕಸ್ಮಿಕ ತಿರುವಿನಲ್ಲಿ ನೀನು ಸಿಕ್ಕೇ ಸಿಕ್ತೀಯ!


Team Udayavani, Mar 14, 2017, 3:50 AM IST

14-JOSH-9.jpg

ಹಾಯ್‌ ..
ಗೆಲುವು ಸಿಗುವ ಮುಂಚೆಯೇ ಆ ಗೆಲುವು ನನದಲ್ಲವೇನೋ ಎಂದು ಹಿಂಜರಿಯುತ್ತಿದ್ದೆ. ಅದೇ ಕಾರಣಕ್ಕೆ ಆಟವಾಡದೇ ಸೋಲೊಪ್ಪಿಕೊಳ್ಳುತ್ತಿದ್ದೆ.

ಕೈಗೆ ಸಿಕ್ಕ ವಜ್ರವನ್ನು ನನ್ನ ಕೈಗೆ ಹಾಕಿಕೊಳ್ಳುವ ಯೋಗ್ಯತೆ ನನಗಿಲ್ಲವೇನೋ ಎಂದು ಅನುಮಾನಿಸಿ ಸಿಕ್ಕಲ್ಲಿಯೇ ಉಳಿಸಿ ಬಂದೆ. ದಾರಿಯಲಿ ನಡೆವಾಗ ಕಾಲ್ಗೆ ತೊಡಕಿದ ರತ್ನಗಂಬಳಿಯ ಮೇಲೆ ಕಾಲಿರಿಸಲು ಸಂಕೋಚಪಟ್ಟು ರಾಜಮಾರ್ಗವನ್ನೇ ಬಿಟ್ಟುಬಂದೆ. ಮಾಡಿಕೊಂಡ ಎಡವಟ್ಟುಗಳನ್ನೇ ಕತೆಯೆಂದು ಹೇಳಿ ಎಲ್ಲರನ್ನೂ ನಗಿಸುತ್ತಿದ್ದೆ. ಮನಸಾರೆ ನಗುತ್ತಿದ್ದೆ. ಒಳಗೊಳಗೇ ನಗೆಪಾಟಲಾಗುತ್ತಿದ್ದೆ. ನನ್ನ ಹುಂಬತನವನ್ನೇ ವ್ಯಕ್ತಿತ್ವವೆಂದು ಹೇಳಿಕೊಂಡು ವಿನಾಕಾರಣ ತಿರುಗುತ್ತಿದ್ದೆ. ಆದರೆ ಇಂದು ಮನಸು ತಿಳಿಯಾಗಿದೆ, ನನಗೆ ತಿಳಿದಿದೆ, ಹುಂಬತನವೇ ಜೀವಮಾನದ ಬದುಕಲ್ಲ. ದಡ್ಡತನವೇ ಒಬ್ಬ ವ್ಯಕ್ತಿಯ ಗುಣವಲ್ಲ, ಯಾವುದೇ ಕಾರಣವಿಲ್ಲದೆ ಸುಖಾಸುಮ್ಮನೆ ಎಡವಟ್ಟುಗಳು ಸೃಷ್ಟಿಯಾಗುವುದಿಲ್ಲ. ಗುರಿಯಿಲ್ಲದೆ, ಕನಸಿಲ್ಲದೆ, ಕೆಲಸವಿಲ್ಲದೆ ಸುಮ್ಮನೆ ಹೇಗೋ ಇದ್ದರೆ ಆ ಬದುಕು ಬದುಕಲ್ಲ, ಹೀಗೇ ಇರಬೇಕೆಂದು ಸಾಧಿಸಿ ತೋರಿಸುವುದು ಬದುಕು.

ತಪ್ಪುಗಳಾಗದಂತೆ ಎಚ್ಚರ ವಹಿಸುವುದು ಬದುಕು. ನಾನು ಕಟ್ಟಿದ ಕನಸನ್ನು ಸಾಕಾರಗೊಳಿಸಲು ನನ್ನ ಮನಸನ್ನು ನಾನೇ ಅಡವಿಟ್ಟು ಮೈಯೆಲ್ಲಾ ಕಣ್ಣಾಗಿ ದುಡಿಯುವುದೇ ಬದುಕು. ಹೀಗೆ ದುಡಿಯುತ್ತಾ ಸಾಗಿದಂತೆಲ್ಲಾ, ದಾರಿಗಳೇ ಇಲ್ಲದ ಈ ಕಲ್ಲು ಮುಳ್ಳುಗಳ ನೆಲದಲ್ಲಿ ನನ್ನದೇ ಕಾಲುದಾರಿಯೊಂದನ್ನು ನಿರ್ಮಿಸುತ್ತೇನೆ. ದಾರಿಯಲ್ಲಿ ಸಿಗುವ ನಿರ್ಮಾನುಷ ಕಾಡುಗಳ ಹಾಡು ಕಲಿತು ಮುಂದೆ 
ಸಾಗುತ್ತೇನೆ, ಭಾವದ ಎದೆ ತಾಳದ ಈ ಶೃತಿಯನ್ನು ಅಪ್ಪಿತಪ್ಪಿಯೂ ಎಲ್ಲಿಯೂ ತಪ್ಪುವುದಿಲ್ಲ.

ಭೂಮಿ ದುಂಡಗಿದೆ ಎಂಬ ಮಾತನ್ನು ನಂಬಿದವನು ನಾನು. ಈ ಜೀವನ ಹಾದಿಯ ಯಾವುದೋ ತಿರುವಿನಲ್ಲಿ ನೀನು ಸಿಕ್ಕೇ ಸಿಗುತ್ತೀಯಾ ಎಂದು ಗೊತ್ತಿದೆ, ಹಾಗೆ ಒಮ್ಮೆ ಸಿಕ್ಕಾಗ, ಯಾವುದೋ ಜನ್ಮದ ಏನೋ ಒಂದು ನೆನಪಾದವಳಂತೆ ನನ್ನ ನೀ ಗುರುತಿಸಿದಾಗ, ಆ ಹೊಳಪು ಕಣ್ಣಿನ ಬೆಳಕಿನಲ್ಲಿ ನಿನ್ನ ಒಂದೇ ಒಂದು ಮುಗುಳ್ನಗೆ ನನಗೆ ಸಿಕ್ಕರೆ ನನಗಷ್ಟೇ ಸಾಕು. ಈ ಜೀವನದಲ್ಲಿ
ಆ ಗಳಿಗೆ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯೊಂದಿಗೆ… 

ಕಾಳಿಂಗ ಹೆಗಡೆ ಡಿ. ಎನ್‌. ಶಿವಮೊಗ್ಗ

ಟಾಪ್ ನ್ಯೂಸ್

JDS

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್‌ ಪಟ್ಟು, ಪ್ರತಿಭಟನೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

DK-Shivakumar

MUDA Case: ಸಿಎಂ ತಪ್ಪು ಮಾಡಿಲ್ಲ, ಅಧಿಕಾರಿಗಳು ಮಾಡಿರಬಹುದು: ಡಿ.ಕೆ.ಶಿವಕುಮಾರ್‌

Parameshwar

MUDA Case: ಅಭಿಯೋಜನೆಗೆ ಅನುಮತಿ ಎಲ್ಲರಿಗೂ ಅನ್ವಯ ಆಗಲಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್‌

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

ಬ್ಯಾಂಕ್‌ಗಳಲ್ಲಿ ಕನ್ನಡ ಕಡ್ಡಾಯ ಮಾಡಿ: ಜಿಪಂ ಸಿಇಒ ಪ್ರತೀಕ್‌ ಬಾಯಲ್‌

Manipal: ಬ್ಯಾಂಕ್‌ಗಳಲ್ಲಿ ಕನ್ನಡ ಕಡ್ಡಾಯ ಮಾಡಿ: ಜಿಪಂ ಸಿಇಒ ಪ್ರತೀಕ್‌ ಬಾಯಲ್‌

Arrest

Ajjampura: ಪತ್ನಿಯ ಶೀಲ ಶಂಕಿಸಿ 5 ವರ್ಷದ ಮಗಳನ್ನೇ ಕೊಂದ ತಂದೆ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

JDS

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್‌ ಪಟ್ಟು, ಪ್ರತಿಭಟನೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

DK-Shivakumar

MUDA Case: ಸಿಎಂ ತಪ್ಪು ಮಾಡಿಲ್ಲ, ಅಧಿಕಾರಿಗಳು ಮಾಡಿರಬಹುದು: ಡಿ.ಕೆ.ಶಿವಕುಮಾರ್‌

Parameshwar

MUDA Case: ಅಭಿಯೋಜನೆಗೆ ಅನುಮತಿ ಎಲ್ಲರಿಗೂ ಅನ್ವಯ ಆಗಲಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್‌

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.