ಕುಟುಂಬ ಕಲಹಕ್ಕೆ ನೊಂದ ದಂಪತಿ ಆತ್ಮಹತ್ಯೆ: 2 ವರ್ಷದ ಮಗು ಅನಾಥ
Team Udayavani, Mar 14, 2017, 12:09 PM IST
ಮಹದೇವಪುರ: ಮನೆ ಬಾಡಿಗೆ ಪಾವತಿಸುವ ವಿಚಾರದಲ್ಲಿ ದಂಪತಿಯ ನಡುವೆ ಮನಸ್ಥಾಪ ಉಂಟಾಗಿ ಇಬ್ಬರೂ ಆತ್ಮಹತ್ಯಗೆ ಶರಣಾಗಿರುವ ದಾರುಣ ಘಟನೆ ಕಾಡುಗುಡಿ ಠಾಣೆ ವ್ಯಾಪ್ತಿಯ ಬೆಳತೂರಿನಲ್ಲಿ ಭಾನುವಾರ ನಡೆದಿದೆ. ದಂಪತಿ ಆತ್ಮಹತ್ಯೆಯಿಂದಾಗಿ ಅವರಿಬ್ಬರ ಎರಡು ವರ್ಷದ ಮಗು ಈಗ ತಬ್ಬಲಿಯಾಗಿದೆ.
ಮಂಜುನಾಥ್ ರೆಡ್ಡಿ(27), ನಾಗವೇಣಿ(23) ಆತ್ಮಹತ್ಯೆಗೆ ಶರಣಾದ ದಂಪತಿ. ಚಿಕ್ಕಬಳ್ಳಾಪುರ ಮೂಲದ ದಂಪತಿ, ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು ಕಾಡುಗುಡಿಯ ಬೆಳತೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಮಂಜುನಾಥ್ ರೆಡ್ಡಿ ಎಲೆಕ್ಟ್ರಿಶಿಯನ್ ಆಗಿದ್ದ. ಆತನ ಪತ್ನಿ ಸೂಪರ್ ಮಾರ್ಕೆಟ್ನಲ್ಲಿ ಕೆಲಸ ಮಾಡುತ್ತಿದ್ದರು.
ಮಂಜುನಾಥ್ ರೆಡ್ಡಿ ದುಡಿಮೆಯನ್ನೆಲ್ಲ ಕುಡಿತಕ್ಕೆ ಬಳಸುತ್ತಿದ್ದ. ಇದೆ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಆಗಾಗ ಜಗಳವೂ ಆಗುತ್ತಿತ್ತು. 10ನೇ ತಾರೀಖು ನೀಡಬೇಕಿದ್ದ ಮನೆ ಬಾಡಿಗೆ ವಿಚಾರದಲ್ಲಿ ಭಾನುವಾರ ದಂಪತಿ ನಡುವೆ ಜಗಳವಾಗಿದೆ. ಪತ್ನಿಯೊಂದಿಗೆ ಜಗಳವಾಡಿದ ಮಜುನಾಥ್ ನಂತರ ಮನೆಯಿಂದ ಹೊರಗಡೆ ತೆರಳಿದ್ದ.
ಈ ವೇಳೆ ನಾಗವೇಣಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಗೆ ಬಂದ ಮಂಜುನಾಥ್ ಪತ್ನಿ ಸಾವಿಗೀಡಾಗಿರುವುದನ್ನು ಕಂಡು ತಾನೂ ನೇಣಿಗೆ ಶರಣಾಗಿದ್ದಾನೆ. ಕೆಲ ಹೊತ್ತಿನ ಬಳಿಕ ಹತ್ತಿರದಲ್ಲೀ ಇದ್ದ ನಾಗವೇಣಿ ಸಹೋದರಿ, ರೆಡ್ಡಿ ಮನೆಯವರ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ದಂಪತಿಯ 2ವರ್ಷದ ಹೆಣ್ಣು ಮಗು ಅನಾಥವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅಪಾರ್ಟ್ಮೆಂಟ್ನಿಂದ ಜಾರಿ ಬಿದ್ದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು!
Road Mishap: ಲಾರಿ ಚಕ್ರ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣ
Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ
Arrested: ದೇವರಾಜ ಅರಸು ಟ್ರಕ್ ಟರ್ಮಿನಲ್ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ
Bengaluru: ಮಲ್ಲೇಶ್ವರ ಮೈದಾನದಲ್ಲಿ ಮಗು ಸಾವಿಗೆ ಗೇಟ್ ವೆಲ್ಡಿಂಗ್ ದೋಷ ಕಾರಣ; ಸಮಿತಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.