ಈ ಬಾರಿಯಾದರೂ ಈಡೇರಿತೇ ನಿರೀಕ್ಷೆ?


Team Udayavani, Mar 14, 2017, 1:30 PM IST

dvg4.jpg

ದಾವಣಗೆರೆ: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2016ರ ಮಾರ್ಚ್‌ 18ರಂದು ಮಂಡಿಸಿದ ಕಳೆದ ಸಾಲಿನ ಬಜೆಟ್‌ನಲ್ಲಿ ದಾವಣಗೆರೆ ಜಿಲ್ಲೆಗೆ ಘೋಷಿಸಿದ್ದ ನಾಲ್ಕು ಯೋಜನೆಯಲ್ಲಿ ಕೆಲವು ಮುಗಿಯುವ ಹಂತಕ್ಕೆ ಬಂದಿದ್ದರೆ, ಇನ್ನು ಕೆಲವು ಅರೆಬರೆ ಸ್ಥಿತಿಯಲ್ಲಿವೆ. ಕೆಲವಕ್ಕಂತೂ ಇನ್ನೂ ಚಾಲನೆಯೇ ದೊರೆತಿಲ್ಲ.  

ಕಳೆದ ಬಜೆಟ್‌ನಲ್ಲಿ ದಾವಣಗೆರೆಯಲ್ಲಿ 30 ಕೋಟಿ ಅನುದಾನದಲ್ಲಿ 50 ಹಾಸಿಗೆ ಸಾಮರ್ಥ್ಯದ ಸಂಯುಕ್ತ ಆಯುಷ್‌ ಆಸ್ಪತ್ರೆ (ಆಯುಷ್‌ ಇಂಟಗ್ರೇಟೆಡ್‌ ಆಸ್ಪತ್ರೆ), ಐಟಿ ಪಾರ್ಕ್‌ ಸ್ಥಾಪನೆ, ತ್ಯಾಜ್ಯ ನೀರು ಸಂಸ್ಕರಣ ಘಟಕ, ಹರಪನಹಳ್ಳಿ ಹಾಗೂ ಹೊನ್ನಾಳಿಯಲ್ಲಿ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಕುಡಿಯುವ ನೀರು ಸರಬರಾಜು, ಒಳ ಚರಂಡಿ ಸೌಲಭ್ಯ, ಕೆಆರ್‌ಡಿಸಿಎಲ್‌ನಿಂದ 130 ಕೋಟಿ ಅನುದಾನದ ಹೊನ್ನಾಳಿ- ಸವಳಂಗ ರಸ್ತೆ ಅಭಿವೃದ್ಧಿ ಯೋಜನೆ ಘೋಷಿಸಲಾಗಿತ್ತು. 

ಆಯುಷ್‌ ಇಂಟಗ್ರೇಟೆಡ್‌ ಆಸ್ಪತ್ರೆ (ಸಂಯುಕ್ತ ಆಯುಷ್‌ ಆಸ್ಪತ್ರೆ)ಗೆ ದಾವಣಗೆರೆ ಹೊರ ವಲಯದ ನಾಗನೂರು ಗ್ರಾಮದ ಸರ್ವೇ ನಂಬರ್‌ 117ರಲ್ಲಿ ಒಟ್ಟಾರೆ 1 ಎಕರೆ 38 ಗುಂಟೆ ಜಮೀನು ಮಂಜೂರಾಗಿದೆ. ಕೆಎಸ್‌ಎಸ್‌ಆರ್‌ಡಿಪಿ ನೀಲನಕ್ಷೆ ಸಿದ್ಧಪಡಿಸುತ್ತಿದೆ. ನೀಲನಕ್ಷೆ ಆಯುಷ್‌ ಇಲಾಖೆ ನಿರ್ದೇಶಕರ ಕಚೇರಿಗೆ ಸಲ್ಲಿಸಿದ ನಂತರ ಆಸ್ಪತ್ರೆ ನಿರ್ಮಾಣದ ಪ್ರಕ್ರಿಯೆ ಪ್ರಾರಂಭವಾಗಲಿದೆ ಎನ್ನುತ್ತವೆ ಜಿಲ್ಲಾ ಆಯುಷ್‌ ಇಲಾಖೆ ಮೂಲಗಳು. 

ಆ್ಯಕ್ಸ್‌ಫರ್ಡ್‌ ಸಿಟಿ ಎಂದೇ ಗುರುತಿಸಲ್ಪಡುತ್ತಿರುವ ದಾವಣಗೆರೆಯಲ್ಲಿ ಒಂದು ಸರ್ಕಾರಿ ಒಳಗೊಂಡಂತೆ ಒಟ್ಟಾರೆ 4 ಇಂಜಿನಿಯರಿಂಗ್‌, ಎರಡು ವೈದ್ಯಕೀಯ ಹಾಗೂ ಎರಡು ದಂತ ವೈದ್ಯಕೀಯ ಕಾಲೇಜುಗಳಿವೆ. ದಾವಣಗೆರೆ ಕರ್ನಾಟಕದ ಮಧ್ಯದಲ್ಲಿರುವುದರಿಂದ ಇತರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಮುಖ ಸಂಪರ್ಕ ಕೇಂದ್ರವೂ ಹೌದು.

ಕಳೆದ ಸಾಲಿನ ಬಜೆಟ್‌ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಐಟಿ ಪಾರ್ಕ್‌ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದಾಗ ಸಹಜವಾಗಿಯೇ ಎಲ್ಲರಲ್ಲೂ ಭಾರೀ ನಿರೀಕ್ಷೆ ಇತ್ತು. ಆದರೆ, ಈವರೆಗೆ ಐಟಿ ಪಾರ್ಕ್‌ ಪ್ರಾರಂಭದ ಲಕ್ಷಣವೇ ಕಾಣುತ್ತಿಲ್ಲ. ಬಜೆಟ್‌ನಲ್ಲಿ ಘೋಷಣೆಯಾಗಿ ಒಂದು ವರ್ಷ ಕಳೆದರೂ ಐಟಿ ಪಾರ್ಕ್‌ ಬಗ್ಗೆ ಸಂಬಂಧಿತ ಎಸ್‌ಟಿಪಿ ಸಂಸ್ಥೆಯ ಜೊತೆಗೆ ಇನ್ನೂ ಮಾತುಕತೆ ನಡೆಯುತ್ತಿದೆ.

ದಾವಣಗೆರೆಯ ಶಿವನಗರದ ಬಳಿ 32 ಕೋಟಿ ವೆಚ್ಚದ ತ್ಯಾಜ್ಯ ನೀರು ಸಂಸ್ಕರಣ ಘಟಕದ ಕಾರ್ಯ ಪ್ರಗತಿಯಲ್ಲಿದೆ. ತ್ಯಾಜ್ಯ ನೀರು ಸಂಸ್ಕರಣ ಘಟಕ ಮುಂದುವರೆದ ಕಾಮಗಾರಿ ರೂಪದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಅಂತಿಮ ಹಂತದಲ್ಲಿದೆ.

ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಹರಪನಹಳ್ಳಿ ಹಾಗೂ ಹೊನ್ನಾಳಿಯಲ್ಲಿ ಪ್ರಾರಂಭಿಸಿರುವ ಒಳ ಚರಂಡಿ ಕಾಮಗಾರಿ ಅರೆಬರೆಯಾಗಿದೆ. ಹೊನ್ನಾಳಿ ಪಟ್ಟಣದಲ್ಲಿ ಪ್ರಾರಂಭಿಕ ಹಂತದಲ್ಲಿ ಬಿರುಸಿನಿಂದ ನಡೆದ ಕಾಮಗಾರಿ ಬಹುತೇಕ ಸ್ಥಗಿತಗೊಂಡು ತಿಂಗಳುಗಳೇ ಉರುಳಿವೆ. ಕಾಮಗಾರಿ ಮುಂದುವರೆಯುವ ಲಕ್ಷಣಗಳೇ ಇಲ್ಲ. 

ಟಾಪ್ ನ್ಯೂಸ್

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರ್‌ 45 ಬಗ್ಗೆ ಶಿವಣ್ಣ ಮಾತು

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರರ್‌ 45 ಬಗ್ಗೆ ಶಿವಣ್ಣ ಮಾತು

Transportation agency issue; Minister Ramalinga Reddy challenged BJP

Koppala: ಸಾರಿಗೆ ಸಂಸ್ಥೆ ವಿಚಾರ; ಬಿಜೆಪಿಗೆ ಸವಾಲು ಹಾಕಿದ ಸಚಿವ ರಾಮಲಿಂಗಾ ರೆಡ್ಡಿ

Temple Priest: ದೇವಾಲಯದ ಅರ್ಚಕನನ್ನೇ ಹೊತ್ತೊಯ್ದ ಚಿರತೆ… 11 ದಿನದಲ್ಲಿ 7ನೇ ಪ್ರಕರಣ

Temple Priest: ದೇವಾಲಯದ ಅರ್ಚಕನನ್ನೇ ಹೊತ್ತೊಯ್ದ ಚಿರತೆ… 11 ದಿನದಲ್ಲಿ 7ನೇ ಪ್ರಕರಣ

9

Kerala Kannadigas: ಕೇರಳಿಗರಿಗೆ ಕನ್ನಡ ಕಲಿಸಲು ವಿಶೇಷ ತರಗತಿ

Pakistanಕ್ಕೆ ದೊಡ್ಡ‌ ಮೊತ್ತದ ಆರ್ಥಿಕ ನೆರವು … ರಾಜನಾಥ್‌ ಸಿಂಗ್‌ ಭರ್ಜರಿ ಆಫರ್‌, ಆದರೆ…

Pakistanಕ್ಕೆ ದೊಡ್ಡ‌ ಮೊತ್ತದ ಆರ್ಥಿಕ ನೆರವು …ರಾಜನಾಥ್‌ ಸಿಂಗ್‌ ಭರ್ಜರಿ ಆಫರ್‌, ಆದರೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

pratp

MUDA Case: ಸಿಎಂ ಸಿದ್ದರಾಮಯ್ಯ 45 ವರ್ಷದ ರಾಜಕೀಯ ಜೀವನ ಅಂತ್ಯ: ಪ್ರತಾಪ್‌ ಸಿಂಹ

Renukacharya

BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ

yathnal

BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್‌

Davanagere; Conspiracy to stop Ganeshotsava is going on: Yatnal

Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್‌ ಆರೋಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

8

Udupi: ತಾಲೂಕು ಕಚೇರಿಗಳಲ್ಲಿ 112 ಹುದ್ದೆ ಖಾಲಿ

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರ್‌ 45 ಬಗ್ಗೆ ಶಿವಣ್ಣ ಮಾತು

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರರ್‌ 45 ಬಗ್ಗೆ ಶಿವಣ್ಣ ಮಾತು

7

Bunts Hostel ವೃತ್ತ: ಫುಟ್‌ಪಾತ್‌ ಇಲ್ಲದೆ ಅಪಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.