ಸಕ್ಕರೆ-ಅಕ್ಕಿ ಬಿಡದೆ ಆರೋಗ್ಯ ಸುಧಾರಿಸೊಲ್ಲ
Team Udayavani, Mar 14, 2017, 1:33 PM IST
ದಾವಣಗೆರೆ: ಸಕ್ಕರೆ, ಈಗಿನ ಹಾಲು, ಅಕ್ಕಿ, ಗೋಧಿಯನ್ನ ನಿತ್ಯದ ಆಹಾರವನ್ನಾಗಿ ಸೇವಿಸುವುದನ್ನು ನಿಲ್ಲಿಸುವ ತನಕ ನಮ್ಮ ಆರೋಗ್ಯದ ಸ್ಥಿತಿ ಸುಧಾರಿಸುವುದು ಕನಸಿನ ಮಾತು ಎಂದು ಮೈಸೂರಿನ ಆಹಾರ ತಜ್ಞ ಡಾ| ಖಾದರ್ ಪ್ರತಿಪಾದಿಸಿದ್ದಾರೆ.
ಸೋಮವಾರ ನಗರದ ಶ್ರೀ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಗಳ ಹಿರೇಮಠದಲ್ಲಿ ನೆಮ್ಮದಿಯ ಬದುಕಿಗೆ ಸಿರಿಧಾನ್ಯಗಳೇ ವರದಾನ.. ವಿಷಯ ಕುರಿತುಉಪನ್ಯಾಸ ನೀಡಿದ ಅವರು, ನಾವು ಈಗ ಅಳವಡಿಸಿಕೊಂಡಿರುವ ಆಹಾರ ಪದ್ಧತಿ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಇದು ನಮ್ಮ ಪದ್ಧತಿಯಲ್ಲ.
ಇದರಿಂದ ಒಂದು ಕಡೆ ರೈತ ಸಾಯುತ್ತಿದ್ದರೆ ಇನ್ನೊಂದು ಕಡೆ ದೇಶದ ಜನರು ರೋಗಿಗಳಾಗುತ್ತಿದ್ದಾರೆ. ಸಕ್ಕರೆ, ಹಾಲು, ಅಕ್ಕಿ, ಗೋಧಿ ಸೇವನೆಯಿಂದ ಬಹುರಾಷ್ಟ್ರೀಯ ಕಂಪನಿಗಳು ಶ್ರೀಮಂತಗೊಳ್ಳುತ್ತಿವೆ. ವೈದ್ಯರೂಸೇರಿದಂತೆ ವಿವಿಧ ರಂಗದ ಜನರು ಇವುಗಳ ಕೃಪಕಟಾಕ್ಷದಲ್ಲಿ ಬದುಕುತ್ತಿದ್ದಾರೆ ಎಂದರು.
ಇಂದು ಭಾರತ ಮಧುಮೇಹಿಗಳ ದೇಶವಾಗಿದೆ. ಸದ್ಯ 100ಕ್ಕೆ 28 ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. 2020ರ ವೇಳೆ ಶೇ.50ರಷ್ಟು ಮಂದಿ ಮಧುಮೇಹಿಗಳಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಕೊಟ್ಟಿದೆ. ಹಾಗಿದ್ದರೂನಮ್ಮ ದೇಶದ ಯಾವುದೇ ನೇತಾರ, ವಿಜ್ಞಾನಿ, ವೈದ್ಯ, ಸಂಘ, ಸಂಸ್ಥೆಗಳು ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.
ನಮ್ಮ ದೇಶದ ಜನರಿಂದಾಗಿ ಕೋಟ್ಯಂತರ ರೂಪಾಯಿ ಗಳಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಎಲ್ಲವನ್ನೂ ಮುಚ್ಚಿಹಾಕುತ್ತಿವೆ ಎಂದು ಅವರು ಹೇಳಿದರು. ನಮ್ಮ ದೇಹಕ್ಕೆ ಬೇಕಾಗಿರುವುದು 5 ಗ್ರಾಂ ಸಕ್ಕರೆ ಪದಾರ್ಥ ಮಾತ್ರ. ಆದರೆ, ನಾವಿಂದು ಸೇವಿಸುವ ಆಹಾರದಿಂದ ನೂರಾರು ಗ್ರಾಂ ಸಕ್ಕರೆ ಪದಾರ್ಥ ದೇಹ ಸೇರುತ್ತಿದೆ.
ದೇಹದಿಂದ ಇದನ್ನು ಕರಗಿಸಲು ಸಾಧ್ಯವಾಗದೇ ಇರುವುದರಿಂದ ಸಕ್ಕರೆ ಅಂಶ ಕೊಲೆಸ್ಟಾÅಲ್ ಸೇರಿದಂತೆ ವಿವಿಧ ಅನಾವಶ್ಯಕ ಪದಾರ್ಥಗಳು ದೇಹದಲ್ಲಿ ಉಳಿದುಕೊಂಡು ಮಧುಮೇಹ, ಕಿಡ್ನಿ ವೈಫಲ್ಯ, ಮಲಬದ್ಧತೆ, ಕುರುಡುತನ, ಹೃದ್ರೋಗ ಕಾಣಿಸಿಕೊಳ್ಳುತ್ತವೆ. ಹೆಣ್ಣುಮಕ್ಕಳು 4ನೇ ವಯಸ್ಸಿಗೆ ಋತುಮತಿಯಾಗುತ್ತಿದ್ದಾರೆ.
ಇದನ್ನೆಲ್ಲಾ ನಾವು ಗಂಭೀರವಾಗಿ ಪರಿಗಣಿಸದೇ ಹೋದರೆ ನಾನಾ ಸಮಸ್ಯೆಗಳಿಗೆ ಸಿಲುಕುತ್ತೇವೆ ಎಂದು ಅವರು ಎಚ್ಚರಿಸಿದರು. ಪ್ರಸ್ತುತ ನಾವು ಬೆಳೆಯುತ್ತಿರುವ ಕಬ್ಬು, ಭತ್ತ, ಮಾಂಸದ ಆಕರಗಳು, ಮೀನಿನಲ್ಲಿ ಅಪಾಯಕಾರಿ ಅಂಶಗಳು ಸೇರಿಕೊಳ್ಳುತ್ತಿವೆ. ವಿಪರೀತ ನೀರು ಬಳಕೆಯಾಗುತ್ತಿದೆ. ಇದರಿಂದ ಮುಂದೆ ಕುಡಿಯಲು ಸಹ ನೀರಿಲ್ಲದಂತಹ ಸ್ಥಿತಿ ನಿರ್ಮಾಣ ಆಗುತ್ತದೆ.
ಒಂದು ಕೆಜಿ ಮಾಂಸಕ್ಕೆ 66,000 ಲೀಟರ್, ಭತ್ತ ಬೆಳೆಯಲು 8000 ಲೀಟರ್ ನೀರು ಬೇಕಾಗುತ್ತದೆ. ಇವುಗಳನ್ನು ಬೆಳೆದು ಸೇವಿಸುವುದರಿಂದ ನಮ್ಮ ದೇಹಾರೋಗ್ಯ ಚೆನ್ನಾಗಿರುತ್ತದೆ ಎಂಬುದು ಸುಳ್ಳು. ಇವುಗಳನ್ನು ಬೆಳೆಯಲು ಪ್ರೋತ್ಸಾಹ ನೀಡುತ್ತಿರುವುದು ಬಹುರಾಷ್ಟ್ರೀಯ ಕಂಪನಿಗಳು.
ಅವುಗಳಿಗೆ ಹಣ ಬಿಟ್ಟರೆ ಆರೋಗ್ಯದ ಕಾಳಜಿ ಇರಲಾರದು. ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು. ನೀರನ್ನೂ ಸಹ ನಾವಿಂದು ಕಲುಷಿತ ಮಾಡಿದ್ದೇವೆ. ಮನೆಗೆ ಬಂದವರಿಗೆ ಮೊದಲು ನೀರು ಕೊಟ್ಟು ಉಪಚರಿಸುವ ನಮ್ಮ ಸಂಸ್ಕೃತಿ ಮಾಯವಾಗಿದೆ.
ದುಡ್ಡಿಗಾಗಿ ನೀರು ಮಾರುವ ಸ್ಥಿತಿಗೆ ಬಂದಿದ್ದೇವೆ. ಇದಕ್ಕೆ ಕಾರಣ ವ್ಯಾಪಾರಿ ಮನೋಭಾವ ಹೊಂದಿದ ಕಂಪನಿಗಳು. ಇಂದು ಪ್ಲಾಸ್ಟಿಕ್ ಬಾಟಲಿಯಲ್ಲಿ ಮಾರುತ್ತಿರುವ ನೀರು, ಆರ್ಒ ಘಟಕದಿಂದ ಶುದೀœಕರಿಸಿದ ನೀರು ಜೀವಕ್ಕೆ ಅಪಾಯಕಾರಿ. ನಮ್ಮ ಹಿರಿಯರು ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸುತ್ತಿದ್ದ ನೀರು ಆರೋಗ್ಯಕ್ಕೆ ಅತಿ ಅವಶ್ಯಕವಾದದ್ದಾಗಿತ್ತು.
ಇದನ್ನು ನಾವು ಮನಗಾಣಬೇಕಿದೆ ಎಂದು ಅವರು ಹೇಳಿದರು. ನವಣೆ, ರಾಗಿ, ಆರ್ಕ, ಸಾಮೆ, ಬರಗು ಸಿರಿಧಾನ್ಯಗಳನ್ನು ನಾವು ನಿತ್ಯದ ಆಹಾರವಾಗಿ ಸೇವನೆ ಮಾಡಬೇಕು. ಆಗ ದೇಹಕ್ಕೆ ಬೇಕಾದ ಎಲ್ಲಾ ಅಂಶಗಳು ಸಿಗುತ್ತವೆ. ಆರೋಗ್ಯ ಸ್ಥಿತಿ ಚೆನ್ನಾಗಿ ಇರುತ್ತದೆ. ಇದನ್ನು ಯಾವುದೇ ವೈದ್ಯರು ನಿಮಗೆ ಹೇಳುವುದಿಲ್ಲ.
ವೈದ್ಯರು ಹೇಳುವುದು ಕೇವಲ ಔಷಧ ಸೇವನೆ, ಚಿಕಿತ್ಸೆ ಬಗ್ಗೆ ಅಷ್ಟೇ. ನಾವೇ ಇಂತಹ ವಿಷಯ ತಿಳಿದುಕೊಳ್ಳಬೇಕು ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಮಠದ ಆಡಳಿತ ಮಂಡಳಿ ಕಾರ್ಯದರ್ಶಿ ಡಾ| ಸ್ವಾಮಿ ತ್ರಿಭುವನಾನಂದ ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ವರಿಷ್ಠರ ಖಡಕ್ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫಲ
MUDA Case: ಸಿಎಂ ಸಿದ್ದರಾಮಯ್ಯ 45 ವರ್ಷದ ರಾಜಕೀಯ ಜೀವನ ಅಂತ್ಯ: ಪ್ರತಾಪ್ ಸಿಂಹ
BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ
BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್
Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್ ಆರೋಪ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Dandeli : ಸರಣಿ ಕಳ್ಳತನ ಪ್ರಕರಣ… ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ
Mangaluru: ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡಕ್ಕೆ ಸಮ್ಮಾನ
Tusshar Kapoor: ʼಗೋಲ್ ಮಾಲ್ʼ ನಟ ತುಷಾರ್ ಕಪೂರ್ ಫೇಸ್ಬುಕ್ ಖಾತೆ ಹ್ಯಾಕ್
Karkala: ಹೊಸ್ಮಾರು ಬಳಿ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು
Hubli: ಬಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆ…; ಸಿಎಂ ಕುರಿತು ಶೆಟ್ಟರ್ ಮಾತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.