ಕಾಂಗ್ರೆಸ್‌ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಬೇರ್ಯಾರೂ ಬೇಡ


Team Udayavani, Mar 15, 2017, 1:05 PM IST

dvg3.jpg

ದಾವಣಗೆರೆ: ಕಾಂಗ್ರೆಸ್‌ಮುಕ್ತ ಕರ್ನಾಟಕಕ್ಕೆ ಕಾಂಗ್ರೆಸ್‌ನವರೇ ಸಾಕು. ಬೇರೆಯವರು ಬೇಕಾಗಿಯೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಕಾಂಗ್ರೆಸ್‌ಮುಕ್ತ ಭಾರತದಂತೆ ಕಾಂಗ್ರೆಸ್‌ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಬೇರೆಯವರು ಬೇಕಾಗಿಯೇ ಇಲ್ಲ.

ಆ ಕೆಲಸವನ್ನೆಲ್ಲಾ ಆ ಪಕ್ಷದವರೇ ಮಾಡಲಿದ್ದಾರೆ. ಕಾಂಗ್ರೆಸ್‌ ಮುಖಂಡರು ಬಿಜೆಪಿ ಸೇರುವ ಬಗ್ಗೆ ನಾನು ಹೇಳಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವರು ಉಡಾಫೆ ಮಾಡಿದ್ದರು. ಈಗ ನಾನು ಹೇಳಿದ ಮಾತುಗಳು ಸತ್ಯವಾಗುತ್ತಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ರಾಜ್ಯ ಸರ್ಕಾರ ಹಗರಣಗಳಿಂದ ನಲುಗುತ್ತಿದೆ. ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ನಂಜನಗೂಡು, ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆ ನಂತರ ರಾಜ್ಯ ಸರ್ಕಾರ ಪತನವಾಗಿ ಮಧ್ಯಂತರ ಚುನಾವಣೆ ನಡೆದೇ ನಡೆಯುತ್ತದೆ. ಕಾಂಗ್ರೆಸ್‌ನ ಇನ್ನೂ ಅನೇಕ ಅತಿರಥ ಮಹಾರಥರು ಬಿಜೆಪಿ ಸೇರಲಿದ್ದಾರೆ.

ಒಟ್ಟಾರೆ ಕಾಂಗ್ರೆಸ್‌ ಖಾಲಿಯಾಗಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಅಡ್ರೆಸ್‌ಗೆ ಇಲ್ಲದಂತಾಗುತ್ತದೆ. ಉತ್ತರ ಪ್ರದೇಶ,  ಉತ್ತರಾಖಂಡ್‌ ಚುನಾವಣೆಯಲ್ಲಿ ಸೋತಿರುವ ಕಾಂಗ್ರೆಸ್‌ ಈಗ ಪ್ರಾದೇಶಿಕ ಪಕ್ಷದಂತಾಗಿದೆ ಎಂದು ಲೇವಡಿ ಮಾಡಿದರು. ಉಪ ಮುಖ್ಯಮಂತ್ರಿಯಾಗಿ, ವಿಪಕ್ಷ ನಾಯಕರಾಗಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ತೋರುತ್ತಿದ್ದಂತಹ ಇಚ್ಚಾಶಕ್ತಿ ಎಲ್ಲಿಗೆ ಹೋಯಿತುಎಂದು ಪ್ರಶ್ನಿಸುವಂತಾಗಿದೆ.

ಅವರಿಗೆ ನಿಜವಾಗಿ ರೈತರು, ಜನರ ಬಗ್ಗೆ ಕಾಳಜಿಯಿದ್ದಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಸಾಲ ಮನ್ನಾ ಘೋಷಣೆ ಮಾಡಬೇಕು ಎಂದರು. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿರುವ ರೀತಿ ಅತ್ಯಂತ ಖಂಡನೀಯ. 

ರೋಲೆಕ್ಸ್‌ ವಾಚ್‌ ಒಳಗೊಂಡಂತೆ ಅನೇಕ ಹಗರಣ ದಲ್ಲಿ ಭಾಗಿಯಾಗಿರುವ ಇಬ್ರಾಹಿಂ ಮಾತೆತ್ತಿದರೆ ವಚನ ಹೇಳುವುದು ಭೂತದ ಬಾಯಲ್ಲಿ ಭಗವದೀತೆ ಎನ್ನುವಂತಾಗಿದೆ. ತಿರಸ್ಕೃತ ನಾಣ್ಯ, ಮಾನಸಿಕ ಅಸ್ವಸ್ಥ ಇಬ್ರಾಹಿಂಗೆ ಮೋದಿಯವರ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಇಲ್ಲ ಎಂದು ಟೀಕಿಸಿದರು. ಕೂಲಂಬಿ ಬಸವರಾಜ್‌, ಕಿಟ್ಟಿ ಮುರಾರಿ, ಚೋರಡಿ ಶಿವು, ಜುಟ್ಟುರವಿ, ರಾಜು ಇತರರಿದ್ದರು. 

ಟಾಪ್ ನ್ಯೂಸ್

G.parameshwar

IPS Officer: ಎಡಿಜಿಪಿ ಪರ ನಿಂತ ಗೃಹ ಸಚಿವ ಪರಮೇಶ್ವರ್‌

Rajeev

MUDA Case: ತಪ್ಪನ್ನು ಮುಚ್ಚಿ ಹಾಕಲು ಲೋಕಾಯುಕ್ತಕ್ಕೆ ಮನೀಶ್‌ ಖರ್ಬೀಕರ್‌ ನೇಮಕ

1-DY

Yeah, Yes; ಕೋರ್ಟ್‌ನಲ್ಲಿ ಯಾ.. ಅನ್ನಬೇಡಿ, ಎಸ್‌ ಅನ್ನಿ: ವಕೀಲರಿಗೆ ಸಿಜೆಐ ಕ್ಲಾಸ್‌!

Sunil-kumar

BJP Leader: ಯತ್ನಾಳ್‌ 1,200 ಕೋಟಿ ಹೇಳಿಕೆ ವರಿಷ್ಠರ ಗಮನಕ್ಕೆ: ಶಾಸಕ ಸುನಿಲ್‌

Krishna-Byregowda

Work Pressure: ಗ್ರಾಮ ಆಡಳಿತಾಧಿಕಾರಿಗಳ ಕೆಲಸದ ಒತ್ತಡ ಕಡಿಮೆಗೆ ಕ್ರಮ: ಕೃಷ್ಣ ಬೈರೇಗೌಡ

DK-Shiva-Kumar

Gandhi Jayanthi: ನಾಳೆ ಕಾಂಗ್ರೆಸ್‌ನಿಂದ ರಾಜ್ಯಾದ್ಯಂತ ಗಾಂಧಿ ನಡಿಗೆ

yogi

Rahul Gandhi ಆಕಸ್ಮಿಕ ಹಿಂದೂ: ಸಿಎಂ ಯೋಗಿ ಆದಿತ್ಯನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

pratp

MUDA Case: ಸಿಎಂ ಸಿದ್ದರಾಮಯ್ಯ 45 ವರ್ಷದ ರಾಜಕೀಯ ಜೀವನ ಅಂತ್ಯ: ಪ್ರತಾಪ್‌ ಸಿಂಹ

Renukacharya

BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ

yathnal

BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್‌

Davanagere; Conspiracy to stop Ganeshotsava is going on: Yatnal

Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್‌ ಆರೋಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

BY-Vijayendra

MUDA Case: ಸಿಎಂಗೆ ರಾಜೀನಾಮೆಯ ಅನಿವಾರ್ಯತೆ ಸೃಷ್ಟಿಯಾಗಿದೆ: ಬಿ.ವೈ.ವಿಜಯೇಂದ್ರ

G.parameshwar

IPS Officer: ಎಡಿಜಿಪಿ ಪರ ನಿಂತ ಗೃಹ ಸಚಿವ ಪರಮೇಶ್ವರ್‌

Rajeev

MUDA Case: ತಪ್ಪನ್ನು ಮುಚ್ಚಿ ಹಾಕಲು ಲೋಕಾಯುಕ್ತಕ್ಕೆ ಮನೀಶ್‌ ಖರ್ಬೀಕರ್‌ ನೇಮಕ

1-DY

Yeah, Yes; ಕೋರ್ಟ್‌ನಲ್ಲಿ ಯಾ.. ಅನ್ನಬೇಡಿ, ಎಸ್‌ ಅನ್ನಿ: ವಕೀಲರಿಗೆ ಸಿಜೆಐ ಕ್ಲಾಸ್‌!

Sunil-kumar

BJP Leader: ಯತ್ನಾಳ್‌ 1,200 ಕೋಟಿ ಹೇಳಿಕೆ ವರಿಷ್ಠರ ಗಮನಕ್ಕೆ: ಶಾಸಕ ಸುನಿಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.