ಬಡ್ತಿ ಮೀಸಲಾತಿ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ


Team Udayavani, Mar 15, 2017, 1:09 PM IST

dvg5.jpg

ದಾವಣಗೆರೆ: ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ಬಡ್ತಿ ಮೀಸಲಾತಿ ಸೌಲಭ್ಯ ಒದಗಿಸುವುದು, ರಾಜ್ಯ ಸರ್ಕಾರ ನೂತನ ವಿಧೇಯಕ ಜಾರಿಗೊಳಿಸುವ ಮೂಲಕ ಅರ್ಹರಿಗೆ ಅನುಕೂಲ ಮಾಡಿಕೊಡುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪರಿಶಿಷ್ಟಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ಒತ್ತಾಯಿಸಿ ಮಂಗಳವಾರ ಕ್ರಿಯಾ ಸಮಿತಿ ನೇತೃತ್ವದಲ್ಲಿ ವಿವಿಧ ಇಲಾಖೆಯ ಪರಿಶಿಷ್ಟ ಜಾತಿ, ಪಂಗಡದ ನೌಕರರು ಪ್ರತಿಭಟನೆ ನಡೆಸಿದರು. 

ಅಂಬೇಡ್ಕರ್‌ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂವಿಧಾನ ಪರಿಚ್ಛೇದ 16(4) ರಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಉದ್ಯೋಗದಲ್ಲಿ ಮೀಸಲಾತಿ ಪ್ರದತ್ತ ಮಾಡಲಾಗಿದೆ.

ಬಡ್ತಿ ಮೀಸಲಾತಿಯನ್ನು ಸಂವಿಧಾನಬದ್ಧವಾಗಿಒದಗಿಸಲು 1978 ಏ. 27 ರಿಂದ ಸಾಂದರ್ಭಿಕ ಸೇವಾ ಹಿರಿತನ ಕಲ್ಪಿಸುವ ಮೂಲಕ ರಾಜ್ಯ ಸರ್ಕಾರ ಕಾಯ್ದೆ ಜಾರಿ ಮಾಡಿತ್ತು. ಈಚೆಗೆ ಬಡ್ತಿ ಮೀಸಲಾತಿ ವಿಚಾರ ಕುರಿತಂತೆ ಸರ್ವೋತ್ಛ ನ್ಯಾಯಾಲಯ ಕಳೆದ ಫೆ. 9 ರಂದು ಬಡ್ತಿ ಮೀಸಲಾತಿ ರದ್ದುಪಡಿಸಿ, ಹೊರಡಿಸಿರುವ ತೀರ್ಪು ದಲಿತ ನೌಕರರಿಗೆ ಅಕ್ಷರಶಃ ಮರಣಶಾಸನವಾಗಿದೆ ಎಂದು ಪ್ರತಿಭಟನಾಕಾರರು ತೀವ್ರ ಆತಂಕ ವ್ಯಕ್ತಪಡಿಸಿದರು. 

ಸರ್ವೋತ್ಛ ನ್ಯಾಯಾಲಯದ ತೀರ್ಪಿನಿಂದ 2002 ರಿಂದ ಈವರೆಗೆ ಮುಂಬಡ್ತಿ ಪಡೆದಿರುವ ರಾಜ್ಯ ಸರ್ಕಾರದ ವಿವಿಧ 36 ಇಲಾಖೆಯ 12 ಸಾವಿರ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತರಾಗಲಿದ್ದಾರೆ. ರಾಜ್ಯ ಸರ್ಕಾರ ಸರ್ವೋತ್ಛ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾದ ಕಾರಣ ಅರ್ಹ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತರಾಗುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

ಕೇಂದ್ರ ಸರ್ಕಾರ ಸ್ವಾತಂತ್ರ ಬಂದಾಗನಿಂದ ಈವರೆಗೆ ಮೀಸಲಾತಿ, 1978 ರಿಂದ ಬಡ್ತಿ ಮೀಸಲಾತಿ ಜಾರಿಯಲ್ಲಿ ತೋರುತ್ತಿರುವ ಅತೀವ ವಿಳಂಬ ನೀತಿ ಅರ್ಹ ದಲಿತ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಬಡ್ತಿ ಮೀಸಲಾತಿ ವಿಚಾರವನ್ನು ಲೋಕಸಭೆಯಲ್ಲಿ ಮಂಡಿಸಿ, ಸಂವಿಧಾನದ 117ನೇ ಕಲಂಗೆ ತಿದ್ದುಪಡಿ ತರುವ ಮೂಲಕ ಬಡ್ತಿ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. 

ಅರ್ಹ ದಲಿತ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತರಾಗುವ ಕುರಿತಂತೆ ರಾಜ್ಯ ಸರ್ಕಾರ ಸರ್ವೋತ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಜೊತೆಗೆ ಈ ಬಜೆಟ್‌ ಅಧಿವೇಶನದಲ್ಲಿ ಬಡ್ತಿ ಮೀಸಲಾತಿ ಕುರಿತಂತೆ ನೂತನ ವಿಧೇಯಕ ಮಂಡಿಸಿ, ಅಂಗೀಕರಿಸಿ, ಸಂವಿಧಾನದ 9ನೇ ಅನುಚ್ಛೇದದಲ್ಲಿ ಸೇರಿಸುವತ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. 

ಹಿರಿಯ ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ, ಸಮಿತಿ ಗೌರವ ಅಧ್ಯಕ್ಷ ಡಾ| ಎ.ಬಿ. ರಾಮಚಂದ್ರಪ್ಪ, ಕಾರ್ಯಾಧ್ಯಕ್ಷ ಡಾ| ಎಸ್‌. ರಂಗಸ್ವಾಮಿ, ಅಧ್ಯಕ್ಷ ಕೆ.ಎಸ್‌. ಜಯಣ್ಣ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್‌. ಹಾಲೇಶಪ್ಪ, ಮಂಜುನಾಥ್‌ ಸಾಸೀÌಹಳ್ಳಿ, ಬಿ.ಎಸ್‌. ವೆಂಕಟೇಶ್‌, ಜಯಪ್ಪನಾಯ್ಕ, ಕೆ. ಸುನೀತಾ, ಪ್ರೊ. ಮಂಜಣ್ಣ, ಪರಶುರಾಮ್‌, ಮಹಾರುದ್ರಪ್ಪ, ಪ್ರಕಾಶ್‌, ಬಸವರಾಜ್‌, ರವಿ ಇತರರು ಇದ್ದರು.  

ಟಾಪ್ ನ್ಯೂಸ್

15th–finance

Grant: 15ನೇ ಹಣಕಾಸು ಆಯೋಗ ಅನುದಾನದಡಿ ರಾಜ್ಯಕ್ಕೆ 2,637 ಕೋ. ರೂ.

Mysuru: ರಾಮೋಜಿ ಫಿಲಂ ಸಿಟಿ ಮಾದರಿ ಮೈಸೂರು ಚಿತ್ರನಗರಿ ನಿರ್ಮಾಣ

Mysuru: ರಾಮೋಜಿ ಫಿಲಂ ಸಿಟಿ ಮಾದರಿ ಮೈಸೂರು ಚಿತ್ರನಗರಿ ನಿರ್ಮಾಣ

1-muslim

Muslims ಸಂಖ್ಯೆ ಏರಿಕೆ, 2027ಕ್ಕೆ ಬಿಜೆಪಿ ಆಡಳಿತಕ್ಕೆ ತೆರೆ: ಸಮಾಜವಾದಿ ಪಕ್ಷದ ಶಾಸಕ

1-tirr

Tirupati Laddu Controversy;ಆಂಧ್ರ ಸಿಎಂ ನಾಯ್ಡುಗೆ ತರಾಟೆ: ಸಾಕ್ಷ್ಯ ಕೇಳಿದ ಸುಪ್ರೀಂ

CM—Krishna

Court Order: ಮುಡಾ ತನಿಖೆ ಚುರುಕು: ದೂರುದಾರರಿಗೆ ನೋಟಿಸ್‌

1-dia

Type-1 Diabetes ಮದ್ದು ಸಿದ್ಧ: ಚೀನ

1-aaaaa

Cleaning; ಸ್ವಚ್ಛತಾ ಕಾರ್ಮಿಕರ ಪೈಕಿ ಶೇ.92 ಎಸ್ಸಿ, ಎಸ್ಟಿ, ಒಬಿಸಿ ವರ್ಗದವರು: ಕೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

pratp

MUDA Case: ಸಿಎಂ ಸಿದ್ದರಾಮಯ್ಯ 45 ವರ್ಷದ ರಾಜಕೀಯ ಜೀವನ ಅಂತ್ಯ: ಪ್ರತಾಪ್‌ ಸಿಂಹ

Renukacharya

BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ

yathnal

BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್‌

Davanagere; Conspiracy to stop Ganeshotsava is going on: Yatnal

Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್‌ ಆರೋಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

15th–finance

Grant: 15ನೇ ಹಣಕಾಸು ಆಯೋಗ ಅನುದಾನದಡಿ ರಾಜ್ಯಕ್ಕೆ 2,637 ಕೋ. ರೂ.

1

Uppinangady: ಸಿಬಿಐ ಅಧಿಕಾರಿ ಹೆಸರಿನಲ್ಲಿ ಬೆದರಿಕೆ ಕರೆ

ACT

Kumbale: ಎರಡು ಮನೆಗಳಿಂದ ಕಳವು: ಬಂಧನ

Mysuru: ರಾಮೋಜಿ ಫಿಲಂ ಸಿಟಿ ಮಾದರಿ ಮೈಸೂರು ಚಿತ್ರನಗರಿ ನಿರ್ಮಾಣ

Mysuru: ರಾಮೋಜಿ ಫಿಲಂ ಸಿಟಿ ಮಾದರಿ ಮೈಸೂರು ಚಿತ್ರನಗರಿ ನಿರ್ಮಾಣ

1-muslim

Muslims ಸಂಖ್ಯೆ ಏರಿಕೆ, 2027ಕ್ಕೆ ಬಿಜೆಪಿ ಆಡಳಿತಕ್ಕೆ ತೆರೆ: ಸಮಾಜವಾದಿ ಪಕ್ಷದ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.