ರೈತರು ಸಮಸ್ಯೆಗೆ ಹೆದರುವ ಅಗತ್ಯವಿಲ್ಲ
Team Udayavani, Mar 15, 2017, 1:14 PM IST
ನ್ಯಾಮತಿ: ರೈತರು ಯಾವುದೇ ಸಾಲ, ಸಮಸ್ಯೆಗಳಿಗೆ ಹೆದರುವ ಆಗತ್ಯವಿಲ್ಲ. ಆತ್ಮಸ್ಥೈರ್ಯದಿಂದ ಬದುಕಬೇಕು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಹರಿಹರ ಶಾಸಕ ಎಚ್.ಎಸ್. ಶಿವಶಂಕರ ಹೇಳಿದರು. ಸಮೀಪದ ದೊಡ್ಡೆತ್ತಿನಹಳ್ಳಿ ಗ್ರಾಮದ ಮೃತ ರೈತ ಬನ್ನಿಕೆರೆ ರುದ್ರಪ್ಪ ಅವರ ನಿವಾಸದ ಎದುರು ರೈತ ಸಾಂತ್ವನ ಪಾದಯಾತ್ರೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಕೃತಿ ವಿಕೋಪ ಮನುಷ್ಯ ನಿರ್ಮಿತ ಸಮಸ್ಯೆಯಲ್ಲ. ರೈತರ ಬದುಕನ್ನು ಹಸನು ಮಾಡಬೇಕೆಂಬುದು ನಮ್ಮ ಅಭಿಲಾಷೆ. ಸಾಲ ತೀರಿಸಲು ಸಮಯ ಕೊಡಿ ಎಂಬುದು ನಮ್ಮ ಹೇಳಕೆಯಾಗಿದ್ದು, ಸಾಲ ವಸೂಲಾತಿಗೆಯಾವ ಬ್ಯಾಂಕ್ನವರು ಬರುವುದಿಲ್ಲ. ರೈತರು ಆತಂಕಪಡುವುದು ಬೇಡ ಎಂದರು.
ದಾವಣಗೆರೆ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೀಲಾಕುಮಾರ ಮಾತನಾಡಿ, ನಾನು ರೈತರ ಮಗಳಾಗಿದ್ದು, ಅವರ ಸಮಸ್ಯೆಗಳ ಅರಿವಿದೆ. ಹೆಂಡತಿ ಮಕ್ಕಳಿಗೆ ನೋವು ಕೊಡುವ ಕೆಲಸವನ್ನು ಯಜಮಾನರು ಮಾಡಬಾರದು. ಎಷ್ಟೇ ಕೋಟಿ ಸಾಲವಿದ್ದರೂ ಶಾಸಕರ ಬಳಿ ಹೋಗಿ ಪರಿಹಾರದ ದಾರಿ ಕಂಡುಕೊಳ್ಳಬೇಕು ಎಂದರು.
ಮಲೆಬೆನ್ನೂರು ಪುರಸಭಾ ಅಧ್ಯಕ್ಷ ವಿಜಯಕುಮಾರ, ದಾವಣಗೆರೆ ಜಿಲ್ಲಾಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ಗುರುಪಾದಯ್ಯ ಮಠದ್ ಮಾತನಾಡಿದರು. ಹೊನ್ನಾಳಿ ತಾಲೂಕು ಜೆಡಿಎಸ್ ಅಧ್ಯಕ್ಷ ರಮೇಶ ದೇವರ ಹೊನ್ನಾಳಿ ಅಧ್ಯಕ್ಷತೆ ವಹಿಸಿದ್ದರು. ಮೃತರ ಪತ್ನಿ ಸರೋಜಮ್ಮ ಅವರಿಗೆ ಸಾಂತ್ವನ ಹೇಳಿದರು.
ಆರಂಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಲಾಯಿತು.ಮೂರು ದಿನಗಳ ಪಾದಯಾತ್ರೆಗೆ ಮೃತ ರುದ್ರಪ್ಪ ಅವರ ಮಗ ಹಾಲೇಶ ಡೋಲು ಬಾರಿಸಿ ಚಾಲನೆ ನೀಡಿದರು. ನೂರಾರು ಕಾರ್ಯಕರ್ತರು ಪಾದಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ವರಿಷ್ಠರ ಖಡಕ್ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫಲ
MUDA Case: ಸಿಎಂ ಸಿದ್ದರಾಮಯ್ಯ 45 ವರ್ಷದ ರಾಜಕೀಯ ಜೀವನ ಅಂತ್ಯ: ಪ್ರತಾಪ್ ಸಿಂಹ
BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ
BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್
Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್ ಆರೋಪ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
GOAT OTT Release: ದಳಪತಿ ವಿಜಯ್ ʼಗೂಟ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Kollegala: ಇಟ್ಟಿಗೆಯಿಂದ ಹಲ್ಲೆ: ಆಟೋ ಚಾಲಕ ಮೃತ್ಯು… ನೆರೆಮನೆಯ ಮಹಿಳೆಯರಿಬ್ಬರ ಬಂಧನ
Top court: ಬುಲ್ಡೋಜರ್ ಕಾರ್ಯಾಚರಣೆ-ದೇವಸ್ಥಾನ, ಮಸೀದಿ ಬಗ್ಗೆ ಸುಪ್ರೀಂ ಹೇಳಿದ್ದೇನು?
ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಪ್ರವಹಿಸಿ 11 ಕುರಿ, 1 ನಾಯಿ ಸಾವು… ತಪ್ಪಿದ ಅನಾಹುತ
Bantwal: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.