ಮೈಸೂರು ಸಂಗೀತ ವಿದ್ಯಾಲಯ: ಪುರಂದರದಾಸ, ತ್ಯಾಗರಾಜರ ಆರಾಧನೆ


Team Udayavani, Mar 16, 2017, 3:44 PM IST

3.jpg

ಮುಂಬಯಿ: ಶ್ರೀ ಪುರಂದರ ದಾಸರು ಮತ್ತು ಶ್ರೀ ತ್ಯಾಗರಾಜರು ನಾದಋಷಿಗಳು. ಋಷಿಮುನಿಗಳು ವೇದೋ ಪಾಸಕರಾದರೆ, ಈ ಸಂಗೀತ ಸಂತದ್ವಯರು ನಾದೋಪಾಸಕರು. ಅನೇಕ ಕೃತಿಗಳನ್ನು ರಚಿಸಿ ತಮ್ಮ ನಾದೋಪಾಸನೆಯಿಂದ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡಿದ್ದಾರೆ. ಇಬ್ಬರ ಕೃತಿಗಳಲ್ಲೂ ವೇದ ಉಪನಿಷತ್ತುಗಳ ಸಾರಾಂಶ ಅಡಗಿದೆ. ಪುರಂದರದಾಸರ ಕೃತಿಗಳನ್ನು ಪುರಂದರೋಪನಿಷತ್‌ ಎಂದೇ ಕರೆದಿದ್ದಾರೆ ಎಂದು ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ. ಎನ್‌. ವೆಂಕಟನಾರಾಯಣ ಅವರು ಅಭಿಪ್ರಾಯಪಟ್ಟರು.

ಮೈಸೂರು ಸಂಗೀತ ವಿದ್ಯಾಲಯ ಮುಂಬಯಿ ವತಿಯಿಂದ ಇತ್ತೀಚೆಗೆ ಮೈಸೂರು ಸಂಗೀತ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಪುರಂದರದಾಸ ಮತ್ತು ಶ್ರೀ ತ್ಯಾಗರಾಜ ಆರಾಧನೋತ್ಸವದಲ್ಲಿ ತ್ಯಾಗರಾಜರ ಮೇಲೆ ಶ್ರೀ ಪುರಂದರ ದಾಸರ ಪ್ರಭಾವ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು, ಪುರಂದರ ದಾಸರ ಅನಂತರ  ಬಂದ ತ್ಯಾಗರಾಜರು ಪುರಂದರದಾಸರಿಂದ ಪ್ರಭಾವಿತರಾದರೂ ಇಬ್ಬರಲ್ಲೂ ಸ್ವಾಮ್ಯತೆ ಇದೆ. ಭಗವನ್ಮಾಮ ಸಂಕೀರ್ತನೆ ಪ್ರಚಾರವೇ ಇಬ್ಬರ ಗುರಿಯಾಗಿದ್ದಿತ್ತು. ಕರ್ನಾಟಕ ಸಂಗೀತಕ್ಕೆ ಅದ್ವಿತೀಯ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದರು.

ಇದಕ್ಕೆ ಪೂರಕವಾಗಿ ಕರ್ನಾಟಕ ಕಲಾಶ್ರೀ ವಿದುಷಿ ಉಮಾ ನಾಗಭೂಷಣ್‌, ಸೌಮ್ಯಾ ಪ್ರಶಾಂತ್‌, ಗಾಯತ್ರಿ ಪ್ರಕಾಶ್‌, ಅರುಣಾ ದುವ್ವರಿ, ಸುಧಾಮಣಿ, ರಾಮಕೃಷ್ಣ, ಪುರಂದರ ದಾಸ ಮತ್ತು ತ್ಯಾಗರಾಜರ ಸಾಮ್ಯತೆಯ ಕೀರ್ತನೆಗಳನ್ನು ಗಾಯನದ ಮೂಲಕ ಪ್ರಸ್ತುತಪಡಿಸಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಶ್ರೀ ಪುರಂದರ ದಾಸರ ಆರಾಧನಾ ಟ್ರಸ್ಟ್‌ ಇದರ ಪ್ರಧಾನ ಕಾರ್ಯದರ್ಶಿ ಎಲ್‌. ರಾಜಾರಾಮ್‌ ಅವರು ಮಾತನಾಡಿ, ಬೆಂಗಳೂರು ಮತ್ತು ಮುಂಬಯಿಯಲ್ಲಿ ಸತತವಾಗಿ ಸಂಗೀತ ಸೇವೆಯನ್ನು ನಡೆಸಿಕೊಡುವ ಮೈಸೂರು ಸಂಗೀತ ವಿದ್ಯಾಲಯದ ಸಾಧನೆ ಅನನ್ಯವಾಗಿದೆ. ವಿದ್ಯಾಲಯದ ಯೋಜನೆಗಳಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು. 

ವಿದ್ವಾನ್‌ ಚಂದ್ರಮೌಳಿ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಿತು. ಮಧ್ಯಾಹ್ನ ವಿದ್ಯಾರ್ಥಿ ವೃಂದದ ಶಾಸ್ತ್ರೀಯ ಸಂಗೀತವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣಲೀಲಾ ತರಂಗಣಿಯ ಸಂಗೀತ ರೂಪಕವು ಸೌಮ್ಯಾ ಪ್ರಶಾಂತ್‌, ಗಾಯತ್ರಿ ಪ್ರಕಾಶ್‌, ಅರುಣಾ ದುವ್ವರಿ ಅವರು ಪ್ರಸ್ತುತಪಡಿಸಿದರು. ಉಮಾ ನಾಗಭೂಷಣ್‌ ಸ್ವಾಗತಿಸಿದರು.

ಅಶ್ವಿ‌ನಿ ಮಹೇಶ್‌ ಅವರು ಅತಿಥಿಗಳನ್ನು ಪರಿಚಯಿಸಿದರು. ನಾಗಭೂಷಣ್‌ ಅವರು ವಂದಿಸಿದರು. ಅಕ್ಷತಾ, ಡಾ| ರೇಖಾ ಪರಮೇಶ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ರಾಮಮಂಡಲಿಯ ಅಧ್ಯಕ್ಷ ಕೆ. ಶಂಕರ್‌ ಉಪಸ್ಥಿತರಿದ್ದರು. ಬಿ. ಆರ್‌. ಮಂಜುನಾಥ್‌, ಶಶಿಕಲಾ, ಗುರುಪ್ರಸಾದ್‌, ಚೈತನ್ಯ ಶ್ರೀಧರ್‌, ಕೃಷ್ಣಕಾಂತ್‌, ಶಿವಣ್ಣ ಮೊದಲಾದವರು ಸಹಕರಿಸಿದರು. 

ಟಾಪ್ ನ್ಯೂಸ್

supreme-Court

Reprimand: ಕೆಲಸದಲ್ಲಿ ಅಧಿಕಾರಿಗಳು ಬೈದರೆ ಅದು ಕ್ರಿಮಿನಲ್‌ ಅಪರಾಧವಲ್ಲ: ಸುಪ್ರೀಂಕೋರ್ಟ್‌

City

Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್‌ ಸಿಟಿ ನಿರ್ಮಾಣ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

supreme-Court

Reprimand: ಕೆಲಸದಲ್ಲಿ ಅಧಿಕಾರಿಗಳು ಬೈದರೆ ಅದು ಕ್ರಿಮಿನಲ್‌ ಅಪರಾಧವಲ್ಲ: ಸುಪ್ರೀಂಕೋರ್ಟ್‌

City

Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್‌ ಸಿಟಿ ನಿರ್ಮಾಣ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.