ಆಧುನಿಕ ಯಗದಲ್ಲೂ ಮಹಿಳೆಯರ ನಿರ್ಲಕ್ಷ್ಯ: ಮೇಯರ್‌


Team Udayavani, Mar 17, 2017, 12:56 PM IST

dvg5.jpg

ದಾವಣಗೆರೆ: ಇಂದಿನ ಆಧುನಿಕ ಯುಗದಲ್ಲೂ ಬೇಡಿಕೊಂಡು ಮಹಿಳಾ ದಿನಾಚರಣೆ ಆಚರಿಸಬೇಕಾಗುತ್ತಿದೆ ಎಂದು ಮೇಯರ್‌ ರೇಖಾ ನಾಗರಾಜ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಗುರುವಾರ ಡಾನ್‌ ಬಾಸ್ಕೋ ಬಾಲಕಾರ್ಮಿಕರ ಮಿಷನ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮನೆ ಒಳಗೆ ಮತ್ತು ಹೊರಗೆ ಪುರುಷರ ಸಮಾನವಾಗಿ ಮಹಿಳೆಯರುದುಡಿದರೂ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ವಾತಾವರಣ ಇಲ್ಲ. ಒಂದೊಮ್ಮೆ ತೆಗೆದುಕೊಳ್ಳುವಂತಹ ನಿರ್ಧಾರಕ್ಕೆ ಬೆಲೆಯೇ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂದಿನ ವೈಜ್ಞಾನಿಕ, ಆಧುನಿಕತೆಯ ಯುಗದಲ್ಲೂ ಮಹಿಳೆಯರು ಕಸ, ಮುಸುರೆ, ಬಟ್ಟೆ ತೊಳೆಯುವುದು, ಅಡುಗೆ ಮನೆಗೆ ಕೆಲಸಕ್ಕೆ ಮಾತ್ರ ಸೀಮಿತ ಎಂದೇ ನೋಡಲಾಗುತ್ತದೆ.

ಇಂದಿಗೂ ಅನೇಕ ಮಹಿಳೆಯರು ಒಂದು ರೀತಿಯ ಬಂಧನದಲ್ಲಿಟ್ಟಿರುವಂತಿದ್ದಾರೆ. ಮನೆಯ ಕೆಲಸ ಮಾಡುವ ಮಹಿಳೆಯರಿಗೂ ಸಮಾನತೆ, ಎಲ್ಲಾ ರೀತಿಯ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇದೆ ಎಂದು ತಿಳಿಸಿದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಚ್‌.ಎಂ. ಪ್ರೇಮಾ ಮಾತನಾಡಿ, ಇಂದಿನ ವಾತಾವರಣದಲ್ಲಿ ಜಗತ್ತಿನ ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣವು ಶೇ. 50 ರಷ್ಟಿದೆ.

ಪುರುಷರಿಗೆ ಸಮಾನವಾಗಿದ್ದರೂ ಪುರುಷ ಕೇಂದ್ರಿಕೃತ ವ್ಯವಸ್ಥೆಯ ನಡುವೆ ಮಹಿಳೆಯರಿಗೆ ದೊರೆಯಬೇಕಾದ ಸ್ಥಾನಮಾನ ದೊರೆಯುತ್ತಿಲ್ಲ. ಸಮಾಜ ಸಂಪೂರ್ಣ ಅಭಿವೃದ್ಧಿ ಆಗಬೇಕಾದಲ್ಲಿ ಮಹಿಳೆಯರು ಸಹ ಮುಖ್ಯವಾಹಿನಿಯಲ್ಲಿ ಬಂದು, ಅಭಿವೃದ್ಧಿ ಸಾಧಿಸಬೇಕು ಎಂದು ತಿಳಿಸಿದರು. ಡಾನ್‌ ಬಾಸ್ಕೊ ಸಂಸ್ಥೆಯ ವೈ.ರಾಮನಾಯ್ಕ ಮಾತನಾಡಿ, ಕಿರು ಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿಯ ಆಸೆ ತೋರಿಸಿ, ಸಾಲ ನೀಡಿ, ಅತಿ ಸುಲಭವಾಗಿ ಮೋಸ ಮಾಡುತ್ತಿವೆ.

ಅಂತಹ ಕಡೆ ಸಾಲ ಪಡೆಯುವ ಬದಲಿಗೆ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರಾಗಿ ಸಾಲ ಪಡೆದು, ಸದುಪಯೋಗಪಡಿಸಿಕೊಂಡು, ಸಕಾಲದಲ್ಲಿ ಮರುಪಾವತಿಸಿ, ಆರ್ಥಿಕ ಸ್ವಾವಲಂಬನೆ ಹೊಂದಬೇಕು ಎಂದು ಸಲಹೆ ನೀಡಿದರು.  ಡಾನ್‌ ಬೋಸ್ಕೊ ಸಂಸ್ಥೆ ನಿರ್ದೇಶಕ ಸಿರಿಲ್‌ ಸಗಾಯ್‌ರಾಜ್‌, ಶಿಶು ಅಭಿವೃದ್ಧಿ ಯೋಜನಾಧಿಧಿಕಾರಿ ಚಂದ್ರಪ್ಪ, ರೈಲ್ವೆ ರಕ್ಷಣಾದಳ ನಿರೀಕ್ಷಕ ಗೌರಂಗ್‌ ಬೋರೋ, ಲಕ್ಷ್ಮಣ್‌, ಮನೋಜ್‌ ಇತರರು ಇದ್ದರು. 

ದಾವಣಗೆರೆ ವಿಶ್ವವಿದ್ಯಾಲಯ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಬಿ.ಎಸ್‌. ಪ್ರದೀಪ್‌ ಮಹಿಳಾ ಹಕ್ಕುಗಳು,  ನ್ಯಾಯವಾದಿ ಸಿ.ಪಿ. ಅನಿತಾ, ಮಹಿಳಾ ದೌರ್ಜನ್ಯ ತಡೆಗಟ್ಟುವಿಕೆ ಮತ್ತು ಕಾನೂನು ಅರಿವು, ಎಚ್‌. ಎನ್‌. ಶೃತಿ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ವಿಷಯ ಕುರಿತು ಉಪನ್ಯಾಸ ನೀಡಿದರು. 

ಟಾಪ್ ನ್ಯೂಸ್

Belagavi; ಬಾಲಕಿ ಮೇಲೆ ಅತ್ಯಾಚಾರ: 20 ವರ್ಷ ಕಠಿಣ ಜೈಲು ಶಿಕ್ಷೆ

Belagavi; ಬಾಲಕಿ ಮೇಲೆ ಅತ್ಯಾಚಾರ: 20 ವರ್ಷ ಕಠಿಣ ಜೈಲು ಶಿಕ್ಷೆ

Singvi

MUDA Case: ಮೂರೇ ದಿನದಲ್ಲಿ ಪಿಎಂಎಲ್‌ಎ ಪ್ರಕರಣ ಹೇಗೆ ದಾಖಲಿಸಿದ್ರು?: ಅಭಿಷೇಕ್ ಸಿಂಘ್ವಿ 

BBK11: ಹಸ್ತ ರೇಖೆ‌ ನೋಡಿ ಸಹ ಸ್ಪರ್ಧಿಯ ಭವಿಷ್ಯ ನುಡಿದ ಚೈತ್ರಾ

BBK11: ಹಸ್ತ ರೇಖೆ‌ ನೋಡಿ ಸಹ ಸ್ಪರ್ಧಿಯ ಭವಿಷ್ಯ ನುಡಿದ ಚೈತ್ರಾ

pratap-Simha

MUDA: ಎರಡುವರೆ ತಿಂಗಳ ಹಿಂದೆ ನಿವೇಶನ ವಾಪಸ್‌ ಕೊಟ್ಟಿದ್ರೆ ಇಷ್ಟೆಲ್ಲ ಆಗ್ತಿತ್ತಾ: ಪ್ರತಾಪ್

Mangaluru: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ 5 ಮಂದಿಯ ಸೆರೆ

Mangaluru: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ 5 ಮಂದಿಯ ಸೆರೆ

Irani cup: ರಹಾನೆ, ಅಯ್ಯರ್‌, ಸರ್ಫರಾಜ್‌ ಅರ್ಧ ಶತಕ; ಚೇತರಿಸಿಕೊಂಡ ಮುಂಬಯಿ

Irani cup: ರಹಾನೆ, ಅಯ್ಯರ್‌, ಸರ್ಫರಾಜ್‌ ಅರ್ಧ ಶತಕ; ಚೇತರಿಸಿಕೊಂಡ ಮುಂಬಯಿ

1

Ajekar: ವಿದ್ಯುತ್‌ ಕಂಬಕ್ಕೆ ಬಡಿದ ಸಿಡಿಲು; ತಪ್ಪಿದ ಅನಾಹುತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ತಡೆದವರೇ ಯತ್ನಾಳ್: ರೇಣುಕಾಚಾರ್ಯ

Davanagere: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ತಡೆದವರೇ ಯತ್ನಾಳ್: ರೇಣುಕಾಚಾರ್ಯ

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

pratp

MUDA Case: ಸಿಎಂ ಸಿದ್ದರಾಮಯ್ಯ 45 ವರ್ಷದ ರಾಜಕೀಯ ಜೀವನ ಅಂತ್ಯ: ಪ್ರತಾಪ್‌ ಸಿಂಹ

Renukacharya

BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ

yathnal

BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Belagavi; ಬಾಲಕಿ ಮೇಲೆ ಅತ್ಯಾಚಾರ: 20 ವರ್ಷ ಕಠಿಣ ಜೈಲು ಶಿಕ್ಷೆ

Belagavi; ಬಾಲಕಿ ಮೇಲೆ ಅತ್ಯಾಚಾರ: 20 ವರ್ಷ ಕಠಿಣ ಜೈಲು ಶಿಕ್ಷೆ

Singvi

MUDA Case: ಮೂರೇ ದಿನದಲ್ಲಿ ಪಿಎಂಎಲ್‌ಎ ಪ್ರಕರಣ ಹೇಗೆ ದಾಖಲಿಸಿದ್ರು?: ಅಭಿಷೇಕ್ ಸಿಂಘ್ವಿ 

BBK11: ಹಸ್ತ ರೇಖೆ‌ ನೋಡಿ ಸಹ ಸ್ಪರ್ಧಿಯ ಭವಿಷ್ಯ ನುಡಿದ ಚೈತ್ರಾ

BBK11: ಹಸ್ತ ರೇಖೆ‌ ನೋಡಿ ಸಹ ಸ್ಪರ್ಧಿಯ ಭವಿಷ್ಯ ನುಡಿದ ಚೈತ್ರಾ

sand

Kaup: ಟಿಪ್ಪರ್‌ನಲ್ಲಿ ಅಕ್ರಮ ಮರಳು ಸಾಗಾಟ ಪತ್ತೆ

pratap-Simha

MUDA: ಎರಡುವರೆ ತಿಂಗಳ ಹಿಂದೆ ನಿವೇಶನ ವಾಪಸ್‌ ಕೊಟ್ಟಿದ್ರೆ ಇಷ್ಟೆಲ್ಲ ಆಗ್ತಿತ್ತಾ: ಪ್ರತಾಪ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.