ರಾಂಗ್ನಂಬರ್ ಡಯಲ್ ತಂದಿಟ್ಟ ಕಾಮಕೇಳಿ ಪೀಡನೆ
Team Udayavani, Mar 21, 2017, 12:24 PM IST
ಬೆಂಗಳೂರು: ವಿವಾಹಿತ ಮಹಿಳೆಯೊಬ್ಬರಿಗೆ ಪದೇ ಪದೇ ಕರೆ ಮಾಡಿ ಲೈಂಗಿಕ ಕ್ರಿಯೆಗೆ ಆಹ್ವಾನಿಸುತ್ತಿದ್ದ ಆರೋಪಿಯನ್ನು ಪೀಣ್ಯ ಪೊಲೀಸರು ಯೋಜನೆ ರೂಪಿಸಿ ಬಂಧಿಸಿದ್ದಾರೆ. ತುಮಕೂರಿನ ಶ್ರೀಮಂತ್ (23) ಬಂಧಿತ ಆರೋಪಿ. ಮಹಿಳೆಯೊಬ್ಬರು ಸಂಬಂಧಿಕರಿಗೆ ದೂರವಾಣಿ ಕರೆ ಮಾಡುವ ಸಂದರ್ಭದಲ್ಲಿ ರಾಂಗ್ ನಂಬರ್ ಡಯಲ್ ಮಾಡಿದ್ದರು.
ಆಗ ಕರೆ ಸ್ವೀಕರಿಸಿದ್ದ ಆರೋಪಿ ಅದೇ ನಂಬರ್ಗೆ ಪದೇ ಪದೇ ಕರೆ ಮಾಡಿ ಅಶ್ಲೀಲವಾಗಿ ವರ್ತಿಸಿ ಲೈಂಗಿಕ ಕ್ರಿಯೆಗೆ ಆಹ್ವಾನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದಾಸರಹಳ್ಳಿ ವಾಸಿ ಮಹಿಳೆಯೊಬ್ಬರು ಫೆ.25ರಂದು ತನ್ನ ಸಂಬಂಧಿಗೆ ಕರೆ ಮಾಡಲು ಹೋಗಿ ರಾಂಗ್ ನಂಬರ್ ಡಯಲ್ ಮಾಡಿದ್ದರು. ಆ ಕರೆ ಆಕಸ್ಮಿಕವಾಗಿ ತುಮಕೂರಿನ ಆಟೋಚಾಲಕ ಶ್ರೀಮಂತ್ಗೆ ಸಂಪರ್ಕವಾಗಿತ್ತು.
ಇದು ಗೊತ್ತಾದ ಕೂಡಲೇ ತಪ್ಪಾಗಿದೆ ಎಂದು ಹೇಳಿ ಮಹಿಳೆ ಕರೆ ಸ್ಥಗಿತಗೊಳಿಸಿದ್ದರು. ಆದರೆ ಶ್ರೀಮಂತ್, ಮಹಿಳೆಯ ಮೊಬೈಲ್ ನಂಬರ್ ಸೇವ್ ಮಾಡಿಕೊಂಡು ನಿತ್ಯ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ. ಜತೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಈ ಕೃತ್ಯದಿಂದ ಆಘಾತಗೊಂಡ ಮಹಿಳೆ ತನ್ನ ಪತಿಗೆ ವಿಷಯ ತಿಳಿಸಿದ್ದು ಫೆ. 28ರಂದು ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟ್ರ್ಯಾಪ್ಗೆ ಸಿಲುಕಿದ ಆರೋಪಿ
ಆರೋಪಿಯ ಬಂಧನಕ್ಕೆ ಬಲೆ ಬೀಸಿದ ಪೊಲೀಸರು, ದೂರುದಾರ ಮಹಿಳೆಗೆ ಮೊದಲಿನಂತೆ ಆರೋಪಿ ಶ್ರೀಮಂತ್ ಜತೆ ಮಾತನಾಡುವಂತೆ ಹೇಳಿ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ. ಪೊಲೀಸರ ಕಾರ್ಯ ತಂತ್ರತೆಗೆ ಅನುಗುಣವಾಗಿ ಮಹಿಳೆ ಶ್ರೀಮಂತ್ ಜೊತೆ ಮಾತನಾಡಿ ನಗರದ 8ನೇ ಮೈಲಿಯ ಜಂಕ್ಷನ್ಗೆ ಬರುವಂತೆ ಹೇಳಿದ್ದಾರೆ.
ಇದನ್ನು ನಂಬಿದ್ದ ಶ್ರೀಮಂತ್ ಮಾರ್ಚ್ 1ರಂದು ಮಹಿಳೆ ಹೇಳಿದ ಸ್ಥಳಕ್ಕೆ ಬಂದು ನಿಂತಿದ್ದ. ಈ ವೇಳೆ ಮಹಿಳೆ, ಆಕೆಯ ಪತಿ ಸಂಬಂಧಿಕರು ಆರೋಪಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಫೋನ್ ಅಂಗಡಿ!
Bengaluru; ಬಸ್ ಡ್ರೈವರ್ಗೆ ಎದೆನೋವು: ಬ್ರೇಕ್ ಹಾಕಿ ಅಪಾಯ ತಪಿಸಿದ ಎಎಸ್ಐ
Flipkart Big Billion Day ಸೆ. 27 ರಿಂದ ಆರಂಭ
Bengaluru: ನಮ್ಮ ಕ್ಲಿನಿಕ್ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ
Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್ಸರ್ವೀಸ್ ಸೆಂಟರ್ಗೆ 12 ಸಾವಿರ ದಂಡ!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.