ಗೋವಾದಲ್ಲಿ “ಎಣ್ಣೆ ‘ ಬೆಲೆ ಏರಿಕೆ!
Team Udayavani, Mar 25, 2017, 3:50 AM IST
ಪಣಜಿ: ಬಿಯರ್ ಕುಡಿದು ಮೋಜು- ಮಸ್ತಿ ಮಾಡಲೆಂದು ಗೋವಾಕ್ಕೆ ತೆರಳುವ ಪ್ರವಾಸಿಗರಿಗೆ ಕೊಂಚ ಕಹಿ ಸುದ್ದಿ. ಕಿಕ್ ಏರಿಸಬೇಕಾದ ಅಲ್ಲಿನ ಬಿಯರ್ನ ಬೆಲೆಯೇ ಈಗ “ಕಿಕ್’ ಪಡೆದಿದೆ!
ಗೋವಾದಲ್ಲಿ ಉತ್ಪಾದನೆ ಆಗುವ, ಮಾರಲ್ಪಡುವ ಬಿಯರ್ ಬೆಲೆಯನ್ನು ಸಿಎಂ ಮನೋಹರ ಪಾರೀಕರ್ ರಾಜ್ಯ ಬಜೆಟ್ನಲ್ಲಿ ಏರಿಸಿದ್ದಾರೆ. ಆಮದಾಗುವ ಮದ್ಯ ಪೇಯಗಳಿಗೆ ವಾರ್ಷಿಕವಾಗಿ 1 ಲಕ್ಷ ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ. ಮದ್ಯವನ್ನೇ ನಂಬಿ ಗೋವಾಕ್ಕೆ ಹೋಗುವ ಮಂದಿಗೆ ಅದರ ಬೆಲೆಯೇ ಇನ್ನು ಕಿಕ್ ಏರಿಸಲಿದೆ.
ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಶೇ.15 ಹೆಚ್ಚಿಸಲಾಗಿದೆ. ಅಲ್ಲಿ ಪೆಟ್ರೋಲ್ ಕೂಡ ಇನ್ನು ತುಟ್ಟಿ. 5 ವರ್ಷಗಳಲ್ಲಿ ವ್ಯಾಟ್ ಇಳಿಸುತ್ತಾ ಬಂದ ಹಿನ್ನೆಲೆಯಲ್ಲಿ, ಪೆಟ್ರೋಲ್ ದರ ಲೀ.ಗೆ 60 ರೂ. ದಾಟಿರಲಿಲ್ಲ. ಆದರೆ, ಈ ಬಾರಿ ವ್ಯಾಟ್ ಅನ್ನು ಶೇ.15 ಹೆಚ್ಚಿಸಲಾಗಿದೆ. ಆದರೂ, ನೆರೆಯ ಕರ್ನಾಟಕ (ಲೀ.ಗೆ 72 ರೂ.), ಮಹಾರಾಷ್ಟ್ರ (ಲೀ.ಗೆ. 76)ಕ್ಕೆ ಹೋಲಿಸಿದರೆ ಗೋವಾದಲ್ಲಿನ ದರ ಕಡಿಮೆಯೇ (65 ರೂ.) ಇರಲಿದೆ. ಪ್ರವಾಸಿ ತಾಣಗಳಲ್ಲಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ 150 ಕೋಟಿ ಮೀಸಲಿಡಲಾಗಿದೆ. ಜಿಎಸ್ಟಿ ಜಾರಿಯಾದ ಬಳಿಕ ಗೋವಾ ಪ್ರವೇಶಿಸುವ ವಾಹನ ಶುಲ್ಕ ರದ್ದು ಮಾಡುವ ಭರವಸೆ ಸಿಎಂ ನೀಡಿದ್ದಾರೆ.
ಬಜೆಟ್ ಮುಖ್ಯಾಂಶ
ರಾಜ್ಯದಲ್ಲಿ ಬಿಯರ್ ಕೂಡ ತುಟ್ಟಿ
ಪೆಟ್ರೋಲ್ ದರದ ಮೇಲಿನ ವ್ಯಾಟ್ ಶೇ.15 ಹೆಚ್ಚಳ
ಜಿಎಸ್ಟಿ ಜಾರಿಯಾದ ನಂತರ ಗಡಿಗಳಲ್ಲಿ ವಾಹನ ಪ್ರವೇಶ ಶುಲ್ಕ ರದ್ದು
2020ರ ವೇಳೆಗೆ ಗೋವಾವನ್ನು ತ್ಯಾಜ್ಯಮುಕ್ತ ರಾಜ್ಯವಾಗಿ ಮಾರ್ಪಡಿಸುವ ಗುರಿ
ಭಾರತದ ಮೊದಲ ಭಿಕ್ಷುಕಮುಕ್ತ ರಾಜ್ಯವಾಗಿಸುವ ಗುರಿ
ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಒದಗಿಸಲು 5×0 ಕೋಟಿ ರೂ. ಮೀಸಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್
EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ
J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ
Panaji: ಮಲ್ಪೆಯ ಎರಡು ಮೀನುಗಾರಿಕಾ ಬೋಟ್ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!
Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ
BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!
By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್.ಡಿ.ಕುಮಾರಸ್ವಾಮಿ
Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್ಆರ್!!
Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.