ಬ್ರಹ್ಮರಕೂಟ್ಲು , ಸುರತ್ಕಲ್‌ ಟೋಲ್‌ ಮತ್ತೆ ಏರಿಕೆ


Team Udayavani, Mar 31, 2017, 9:21 AM IST

31-REPORTER-8.jpg

ಮಂಗಳೂರು: ನಗರದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ (ಹಿಂದಿನ ರಾ.ಹೆ. 48)ಬಿ. ಮೂಡ ಗ್ರಾಮದ ಬ್ರಹ್ಮರಕೂಟ್ಲು ಟೋಲ್‌ಗೇಟ್‌ ಹಾಗೂ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ (ಹಳೆಯ ರಾ.ಹೆ 17) ಸುರತ್ಕಲ್‌ ಎನ್‌ಐಟಿಕೆ ಬಳಿಯ ಟೋಲ್‌ ದರ ಎ. 1ರಿಂದ ಮತ್ತೆ ಏರಿಕೆಯಾಗಲಿದೆ. ಎರಡೂ ಟೋಲ್‌ಗ‌ಳು ರದ್ದುಗೊಳ್ಳಲಿವೆ ಎಂಬ ನಿರೀಕ್ಷೆ ಇರುವಾಗಲೇ ದರ ಏರಿಕೆಯು ಪ್ರಯಾಣಿಕರಿಗೆ ಶಾಕ್‌ ನೀಡಿದಂತಾಗಿದೆ.

ಸುರತ್ಕಲ್‌ ಎನ್‌ಐಟಿಕೆ ಟೋಲ್‌ ದರ : ಕಾರು, ಜೀಪು, ವ್ಯಾನ್‌ ಅಥವಾ ಲಘು ಮೋಟಾರು ವಾಹನಗಳ ಏಕಮುಖ ಸಂಚಾರಕ್ಕೆ 50 ರೂ. (ಪ್ರಸ್ತುತ ದರ 45 ರೂ.) ಆಗಲಿದ್ದು, ಅದೇ ದಿನ ಮರಳಿ ಬರುವುದಾದರೆ ಆಗುವ 70 ರೂ. ದರದಲ್ಲಿ ಬದಲಾವಣೆ ಇಲ್ಲ. 1 ತಿಂಗಳಲ್ಲಿ 50 ಬಾರಿ ಬಂದರೆ ಮಾಸಿಕ ಶುಲ್ಕ 1,600 ರೂ. (1,535 ರೂ.)ಆಗಲಿದೆ. ಜಿಲ್ಲೆಯ ಒಳಗೆ ನೋಂದಣಿ ಆಗಿರುವ ವಾಣಿಜ್ಯ ವಾಹನಗಳಿಗೆ 25 ರೂ. ಶುಲ್ಕ ನಿಗದಿಪಡಿಸಲಾಗಿದೆ. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನ ಅಥವಾ ಮಿನಿ ಬಸ್‌ ಏಕಮುಖ ಸಂಚಾರಕ್ಕೆ 80 ರೂ. (75), ಮರಳಿ ಬಂದರೆ 115 ರೂ. (110)ಗೆ ಏರಲಿದೆ. ಮಾಸಿಕ ಪಾಸ್‌ 2585 ರೂ. (2,435 ರೂ.) ಹಾಗೂ ಜಿಲ್ಲೆಯ ಒಳಗೆ ನೋಂದಣಿಯಾದ ವಾಣಿಜ್ಯ ವಾಹನಗಳಿಗೆ 40 ರೂ. ನಿಗದಿ ಮಾಡಲಾಗಿದೆ. ಬಸ್‌ ಅಥವಾ ಟ್ರಕ್‌ (2 ಆ್ಯಕ್ಸೆಲ್‌) ಏಕಮುಖ ಸಂಚಾರಕ್ಕೆ 165 ರೂ, (155), ಅದೇ ದಿನ ವಾಪಸ್‌ ಬಂದರೆ 245 ರೂ. (235), 50 ಬಾರಿಗೆ ಮಾಸಿಕ ಪಾಸ್‌ಗೆ 5,420 ರೂ. (5105), ಮೂರು-ಆ್ಯಕ್ಸೆಲ್‌ ವಾಣಿಜ್ಯ ವಾಹನಗಳ ಏಕಮುಖ ಸಂಚಾರಕ್ಕೆ 175 ರೂ. (170), ಅದೇ ದಿನ ಮರಳಿ ಬಂದರೆ 265 ರೂ (255), ಮಾಸಿಕ ಪಾಸ್‌ 5,915 ರೂ. (5,670) ನಿಗದಿ ಮಾಡಲಾಗಿದೆ.

ಭಾರೀ ನಿರ್ಮಾಣ ಯಂತ್ರಗಳು (ಎಚ್‌ಸಿಎಂ) ಅಥವಾ ಭೂ ಅಗೆತದ ಸಾಧನಗಳು (ಇಎಂಇ) ಅಥವಾ ಬಹು ಆ್ಯಕ್ಸೆಲ್‌ ವಾಹನ (ಎಂಎವಿ) (ನಾಲ್ಕರಿಂದ ಆರು ಆ್ಯಕ್ಸೆಲ್‌ಗ‌ಳದ್ದು) ಏಕಮುಖ ಸಂಚಾರಕ್ಕೆ 255 ರೂ. (240), ಮರಳಿ ಬಂದರೆ 385 ರೂ., (360), ಮಾಸಿಕ ಪಾಸ್‌ 8500 ರೂ. (8150) ರೂ.ಗೆ ಏರಲಿದೆ. ಮಿತಿ ಮೀರಿದ ಅಳತೆಯ ವಾಹನಗಳು (ಏಳು ಅಥವಾ ಅದಕ್ಕೂ ಹೆಚ್ಚು ಆ್ಯಕ್ಸೆಲ್‌ಗ‌ಳದ್ದು) ಏಕಮುಖ ಸಂಚಾರಕ್ಕೆ 310 ರೂ. (300), ಮರಳಿ ಬಂದರೆ 465 ರೂ (445 ರೂ), ಮಾಸಿಕ ಪಾಸ್‌ 10350 ರೂ. (9925) ನಿಗದಿಪಡಿಸಲಾಗಿದೆ.

 ಬ್ರಹ್ಮರಕೂಟ್ಲು ಟೋಲ್‌
ಕಾರು, ಜೀಪು, ವ್ಯಾನ್‌ ಅಥವಾ ಲಘು ಮೋಟಾರ್‌ ವಾಹನಗಳಿಗೆ ಏಕಮುಖ ಸಂಚಾರದಲ್ಲೂ ಏರಿಕೆಯಾಗಿದೆ. 20 ರೂ. ನಿಗದಿಯಾ
ಗಿದ್ದ ಮುಂದೆ 25 ರೂ.ಗೆ ಏರಲಿದೆ. ಮರಳಿ ಬಂದರೆ ಪ್ರಸ್ತುತ ಇರುವ 35 ರೂ. ಅನ್ನೇ ಮುಂದುವರಿಸಲಾಗಿದೆ. 1 ತಿಂಗಳಿಗೆ (50 ಬಾರಿ ಯಂತೆ) ಮಾಸಿಕ ಪಾಸ್‌ 770 ರೂ. (ಪ್ರಸ್ತುತ ದರ 735) ಮಾಡಲಾಗಿದ್ದು, ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ ಅಥವಾ ಮಿನಿ ಬಸ್‌ಗಳ – ಏಕಮುಖ ಸಂಚಾರಕ್ಕೆ ಚಾಲ್ತಿ ಯಲ್ಲಿರುವ 35 ರೂ. ಹಾಗೂ ಆದೇ ದಿನ ಮರಳಿದರೆ 50 ರೂ. ಅನ್ನು ಬದಲಾಯಿಸಲಿಲ್ಲ. ಮಾಸಿಕ ಪಾಸ್‌ 1240 ರೂ (1190) ನಿಗದಿ ಪಡಿಸಲಾಗಿದೆ.

ಬಸ್‌ ಅಥವಾ ಟ್ರಕ್‌ (ಎರಡು ಆ್ಯಕ್ಸೆಲ್‌ಗ‌ಳದ್ದು ) ಏಕಮುಖ ಸಂಚಾರಕ್ಕೆ 80 ರೂ. (75), ಮರಳಿ ಬಂದರೆ 55 ರೂ., ಮಾಸಿಕ ಶುಲ್ಕ 2600 ರೂ. (2495), 3 ಆ್ಯಕ್ಸೆಲ್‌ ವಾಣಿಜ್ಯ ವಾಹನಕ್ಕೆ ಏಕಮುಖ ಸಂಚಾರಕ್ಕೆ 85 ರೂ. (80), ಮರಳಿ ಬಂದರೆ 130 ರೂ., ಮಾಸಿಕ ಪಾಸ್‌ 2,840 ರೂ. (2,720)ಗೆ ಏರಿಕೆ ಮಾಡಲಾಗಿದೆ. ಭಾರೀ ನಿರ್ಮಾಣ ಯಂತ್ರಗಳು ಅಥವಾ ಭೂಅಗೆತದ ಸಾಧನಗಳು ಅಥವಾ ಬಹು ಆ್ಯಕ್ಸಲ್‌ ವಾಹನ ಗಳಿಗೆ (4ರಿಂದ 6 ಆ್ಯಕ್ಸೆಲ್‌) ಏಕಮುಖ ಸಂಚಾರಕ್ಕೆ 120 ರೂ. (115), ಮರಳಿ ಬಂದರೆ 185 ರೂ. (175), ಮಾಸಿಕ ಪಾಸ್‌ 4,080 ರೂ. (3,915) ಆಗಲಿದೆ. ಮಿತಿಮೀರಿದ ಅಳತೆ ವಾಹನಗಳು (7 ಅಥವಾ ಅದಕ್ಕಿಂತಲೂ ಹೆಚ್ಚು ಆ್ಯಕ್ಸೆಲ್‌ಗ‌ಳದ್ದು) ಏಕಮುಖ ಸಂಚಾರಕ್ಕೆ 150 ರೂ. (145), ಮರಳಿ ಬಂದರೆ 225 ರೂ (215), ಮಾಸಿಕ ಪಾಸ್‌ 4,970 ರೂ. (4,765)ಗೆ ಏರಿಕೆಯಾಗಲಿದೆ.

ವೆಚ್ಚ 363 ಕೋ.ರೂ.; ಸಂಗ್ರಹ 31 ಕೋ.ರೂ..!
ಸುರತ್ಕಲ್‌ನಿಂದ ಬಿ.ಸಿ ರೋಡ್‌ ವರೆಗಿನ ಹೆದ್ದಾರಿಯು ಒಂದೇ ಯೋಜನೆಯಲ್ಲಿ ನಡೆದಿದ್ದು, ಇದಕ್ಕೆ ಒಟ್ಟು ಬಂಡವಾಳ ವೆಚ್ಚ 363 ಕೋ.ರೂ. ಆಗಿದೆ. ಅದರಲ್ಲಿ 31 ಕೋ.ರೂ. (ಕಳೆದ ವರ್ಷ 22 ಕೋ.ರೂ) ಮರಳಿ ಪಡೆಯಲಾಗಿದೆ. ಹೀಗಾಗಿ ಬಂಡವಾಳ ವೆಚ್ಚ ಪೂರ್ಣ ವಸೂಲಾದ ಅನಂತರ ಬಳಕೆ ಶುಲ್ಕ ದರ (ಟೋಲ್‌)ವನ್ನು ಶೇ. 40ರಷ್ಟು ಕಡಿಮೆ ಮಾಡಲಾಗುತ್ತದೆ. ಪ್ರಸ್ತುತ ಈ ಎರಡೂ ಟೋಲ್‌ಫ್ಲಾಝಾದಿಂದ 20 ಕಿ.ಮೀ. ವಿಸ್ತೀರ್ಣದೊಳಗೆ ವಾಸಿಸುವ ಎಲ್ಲ ವಾಣಿಜ್ಯೇತರ ವಾಹನಗಳಿಗೆ 245 ರೂ. (ಪ್ರಸ್ತುತ 235 ರೂ.) ತಿಂಗಳ ಪಾಸ್‌ ಲಭ್ಯವಿದೆ. ಟೋಲ್‌ಫ್ಲಾಜಾ ಜಿಲ್ಲೆಯಲ್ಲಿ ನೋಂದಾಯಿತಗೊಂಡ ವಾಣಿಜ್ಯ ವಾಹನ (ರಾಷ್ಟ್ರೀಯ ಪರವಾನಿಗೆ ಅಡಿಯಲ್ಲಿ ಚಲಿಸುವ ವಾಹನಗಳನ್ನು ಹೊರತುಪಡಿಸಿ) ಶೇ. 50 ರಿಯಾಯಿತಿ ದೊರೆಯಲಿದೆ ಎಂದು ಭಾರತೀಯ ರಾ.ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

2 ಟೋಲ್‌ ರದ್ದು;  1 ವರ್ಷ ಬೇಕು!
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್‌ಸನ್‌ ವಿಜಯ್‌ ಕುಮಾರ್‌ ಅವರು ಹೇಳುವ ಪ್ರಕಾರ, ದೇಶದಲ್ಲಿ ಸರಕಾರಿ ಟೋಲ್‌ಗ‌ಳನ್ನು ರದ್ದುಗೊಳಿಸಬೇಕು ಎಂಬ ಕೇಂದ್ರ ಸರಕಾರದ ನಿಯಮದಂತೆ ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್‌ ಟೋಲ್‌ ಕೂಡ ರದ್ದುಗೊಳ್ಳುವ ಸಾಧ್ಯತೆ ಇದೆ. ಆದರೆ ಕೆಲವೇ ತಿಂಗಳಿನಲ್ಲಿ ಇದು ನಡೆಯುವುದು ಕಷ್ಟ. ಈ ಬಗ್ಗೆ ಪೂರಕ ಪ್ರಕ್ರಿಯೆಗಳು ಮೊದಲು ನಡೆಯಬೇಕಿದೆ. ಅದು ಪೂರ್ಣಗೊಳ್ಳಲು ಹೆಚ್ಚಾ-ಕಡಿಮೆ 1 ವರ್ಷ ಆಗಬಹುದು. ಆ ಬಳಿಕ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಬಹುದು. ಅಲ್ಲಿಯವರೆಗೆ ಟೋಲ್‌ ದರ ಪಡೆಯಲಾಗುತ್ತದೆ.

ದಿನೇಶ್‌ ಇರಾ

ಟಾಪ್ ನ್ಯೂಸ್

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಮಲ್ಪೆ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Malpe ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.