ಕಾರ್ಕಳ ಪುರಸಭೆ ಸಾಮಾನ್ಯ ಸಭೆ: ಪ್ರತಿಧ್ವನಿಸಿತು ನೀರಿನ ಸಮಸ್ಯೆ


Team Udayavani, Mar 31, 2017, 12:08 PM IST

3003KAR1.jpg

ಕಾರ್ಕಳ: ಕಾರ್ಕಳ ಪುರಸಭೆಯ ಸಾಮಾನ್ಯ ಸಭೆ ಗುರುವಾರ ನಡೆಯಿತು.ವಾರ್ಡ್‌ಗಳಲ್ಲಿ ಕಾಡುತ್ತಿರುವ ನೀರಿನ ಸಮಸ್ಯೆ, ನೀರು ಬಿಡುವವರ ನಿರ್ಲಕ್ಷತನ,ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ  ಪಾರದರ್ಶಕತೆ ವಹಿಸದೇ ಇದ್ದದ್ದು, ಟೆಂಡರ್‌ ಕರೆಯುವ ಮೊದಲೇ ಕಾಮಗಾರಿಗಳು ನಡೆದದ್ದು ಮೊದಲಾದ ವಿಷಯಗಳು ಸಭೆಯಲ್ಲಿ ಚರ್ಚೆಗೆ ಗ್ರಾಸವಾದವು.

ನೀರಿನ ಸಮಸ್ಯೆ : 
ನೀರು ಬಿಡುವವರ ರಜೆ

ನೀರಿನ ಸಮಸ್ಯೆಯಿಂದ ವಿವಿಧ ವಾರ್ಡ್‌ಗಳು ಕಂಗೆಟ್ಟಿವೆ. ನೀರು ಬಿಡುವವರು ರಜೆ ಹಾಕಿ ಮನೆಯಲ್ಲಿ ಕೂತಿದ್ದಾರೆ. ನೀರು ಬಿಡುವವರಿಂದಲೇ ದಿನನಿತ್ಯ ಸಮಸ್ಯೆಗಳು ಉದ್ಭವಿಸುತ್ತಿವೆ. ತಮ್ಮ ವಾರ್ಡ್‌ಗಳಿಗೆ 8 ದಿನಗಳಿಂದ ಈ ರೀತಿಯ ಸಮಸ್ಯೆಯಾಗುತ್ತಿದೆ ಎಂದು ಸದಸ್ಯರಾದ ಯೋಗೀಶ್‌, ಶಾಂತಿ, ರೆಹಮತ್‌, ನಳಿನಿ, ಪಾರ್ಶ್ವನಾಥ್‌, ಪ್ರಕಾಶ್‌ ರಾವ್‌  ಮೊದಲಾದವರು ದೂರಿದರು.

ನೀರು ಹಾಕುವವರಿಗೆ ರಜೆ ನೀಡುವವರು ಯಾರು? ದಿಢೀರ್‌ ಕರೆ ಮಾಡಿ ರಜೆ ನೀಡುವಂತೆ ಮುಖ್ಯಾಧಿಕಾರಿಯವರಲ್ಲಿ ರಜೆ ಕೇಳುವ ನೌಕರರಿಂದ ನೀರು ಬಿಡುವ ಪ್ರಕ್ರಿಯೆಯಲ್ಲಿ ಸಮಸ್ಯೆಗಳಾಗುತ್ತಿವೆ.ಇಂತಹ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು. ನೀರಿನ ಸಮಸ್ಯೆ ಉದ್ಭವಿಸುವಲ್ಲಿ  ಇದೊಂದು ಮುಖ್ಯ ಕಾರಣ ಎಂದು ಸದಸ್ಯರು ಆಗ್ರಹಿಸಿದರು.

ಸದಸ್ಯ ನವೀನ್‌ ದೇವಾಡಿಗ ಮಾತನಾಡಿ, ನೀರಿನ ಸಮಸ್ಯೆಗಳಿರುವ ವಾರ್ಡ್‌ಗಳಿಗೆ ಟ್ಯಾಂಕರ್‌ನಲ್ಲಿ ನೀರು ವಿತರಣೆ ವ್ಯವಸ್ಥೆ ಮಾಡಬೇಕು. ನೀರಿನ ಗೇಟುಗಳನ್ನು ಪರ್ಪಲ್‌ಗ‌ುಡ್ಡೆ ಪ್ರದೇಶಗಳಲ್ಲಿ ಮನಬಂದಂತೆ ತೆಗೆಯಲಾಗುತ್ತಿದೆ. ಇದರಿಂದಾಗುವ ಪೈಪ್‌ಗ್ಳ ಹಾನಿಗೆ ಯಾರು ಜವಾಬ್ದಾರರು? ಎಂದು ಪ್ರಶ್ನಿಸಿದರು.

ನೀರು ಬಿಡುವವರನ್ನು ಬದಲಾಯಿಸಬೇಕು ಹಾಗೂ ನೀರು ಬಿಡುವವರನ್ನು ಹತೋಟಿಗೆ ತರಲು ಸರ್ವಾನುಮತದ ನಿರ್ಣಯವಾಗಬೇಕು ಎಂದು ಸದಸ್ಯೆ ರೆಹಮತ್‌ ಹೇಳಿದರು. ಸದಸ್ಯ ಮಹಮ್ಮದ್‌ ಶರೀಫ್‌ ಮಾತನಾಡಿ, ಪುರಸಭೆಯ ನಿರ್ಧಾರಗಳನ್ನು ನೀರುಬಿಡುವ ಕಾರ್ಮಿಕರು ಕೇಳದೇ ಇದ್ದಲ್ಲಿ ಅವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮುಖ್ಯಾಧಿಕಾರಿಯವರು ದೂರು ನೀಡಬೇಕು ಎಂದರು.

ಸದಸ್ಯ ಅಶ#ಕ್‌ ಅಹಮ್ಮದ್‌ ಮಾತನಾಡಿ,ಜರಿಗುಡ್ಡೆ ಪ್ರದೇಶವನ್ನು ಕಡೆಗಣಿಸಲಾಗುತ್ತಿದೆ. ನಗರೋತ್ಥಾನ ಯೋಜನೆಯಡಿ ಅನುದಾನ ಬಂದ ಬಳಿಕ ಪೈಪ್‌ಲೈನುಗಳನ್ನು ಮಾಡಿದ್ದಲ್ಲಿ ಸಮಸ್ಯೆ ಮರುಕಳಿಸುತ್ತಿರಲಿಲ್ಲ ಎಂದರು.

ಟೆಂಡರ್‌ ಬಿಡುವ ಮೊದಲೇ ಕಾಮಗಾರಿ ಖತಂ!
ಟೆಂಡರ್‌ ಬಿಡುವ ಮೊದಲೇ ಪುರಸಭಾ ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆದೂ ಆಗಿವೆ ಎನ್ನುವ ಸುದ್ದಿ ಇದೆ. ಆದರೆ ನನ್ನ ವಾರ್ಡ್‌ನಲ್ಲಿ ಈ ವರೆಗೆ ಯಾವ ಕೆಲಸಗಳೂ ನಡೆದಿಲ್ಲ, ಕಾಮಗಾರಿ ಆಗಿದೆ ಎಂದಾದರೆ ಅದು ಎಲ್ಲಿ  ಆಗಿದೆ ಎನ್ನುವ ಮಾಹಿತಿ ಸಿಗಲಿ ಎಂದು ಅಶ#ಕ್‌ ಅಹಮ್ಮದ್‌ ಮುಖ್ಯಾಧಿಕಾರಿಗಳಿಗೆ ಸವಾಲು ಎಸೆದರು.

ಸಭೆಯಲ್ಲಿ ಅಧ್ಯಕ್ಷೆ ಅನಿತಾ ಅಂಚನ್‌, ಉಪಾಧ್ಯಕ್ಷ ಗಿರಿಧರ್‌ ನಾಯಕ್‌, ಸ್ಥಾಯೀ ಸಮಿತಿ ಅಧ್ಯಕ್ಷ ಅಕ್ಷಯ್‌ ರಾವ್‌, ಮುಖ್ಯಾಧಿಕಾರಿ ಮೇಬಲ್‌ ಡಿ’ಸೋಜಾ ಉಪಸ್ಥಿತರಿದ್ದರು.

ವಸತಿ ಅಸಿಂಧು ಮಾಡಿ
ಸದಸ್ಯ ಶುಭದ್‌ ರಾವ್‌ ಮಾತನಾಡಿ, ವಸತಿ ಯೋಜನೆಯಡಿ 78 ಫಲಾನುಭವಿಗಳು ಆಯ್ಕೆಯಾಗಿದ್ದಾರೆ.ಆದರೆ ಅವರನ್ನು ಆಯ್ಕೆ ಮಾಡಿದ್ದು ಯಾರು? ಫಲಾನುಭವಿಗಳನ್ನು ಆ ಯೋಜನೆಯ ಸಮಿತಿಯಲ್ಲಿರುವವರು ಆಯ್ಕೆ ಮಾಡಬೇಕು. ಸಮಿತಿ ಅದರದ್ದೇ ಮಾನದಂಡದ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ವಿನಃ ಮನಬಂದತೆ ಆಯ್ಕೆ ಮಾಡುವುದಲ್ಲ. ಈ ಫಲಾನುಭವಿಗಳನ್ನು ಯಾವುದೇ  ಆಶ್ರಯ ಯೋಜನೆ ಸಮಿತಿಯವರು ಆಯ್ಕೆ ಮಾಡಿಲ್ಲ, ಹಾಗಾಗಿ ಈ ಪ್ರಕ್ರಿಯೆಯನ್ನು ಶೀಘ್ರವೇ ಅಸಿಂಧು ಮಾಡಬೇಕು ಎಂದು ಆಗ್ರಹಿಸಿದರು.

ಟಾಪ್ ನ್ಯೂಸ್

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Harassment of Hindu sentiment is going on: Vijayendra

Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ

Shiruru; Missing Kerala Arjuna’s lorry found; Operation of Ishwar Malpe Team

Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್‌ ಮಲ್ಪೆ ತಂಡದ ಕಾರ್ಯಾಚರಣೆ

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

BellaryBellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Udupi: ಮದ್ಯ ಸೇವಿಸಿ ಬಸ್‌ ಚಾಲನೆ: ಪ್ರಕರಣ ದಾಖಲು

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

13

Udupi: ಅಪಾಯಕಾರಿಯಾಗಿ ಬಸ್‌ ಚಾಲನೆ: ಪ್ರಕರಣ ದಾಖಲು

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

sand

Malpe: ಮರಳು ಅಕ್ರಮ ಸಂಗ್ರಹ, ಕೇಸು ದಾಖಲು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Harassment of Hindu sentiment is going on: Vijayendra

Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ

Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ

Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ

Shiruru; Missing Kerala Arjuna’s lorry found; Operation of Ishwar Malpe Team

Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್‌ ಮಲ್ಪೆ ತಂಡದ ಕಾರ್ಯಾಚರಣೆ

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.