ಘರ್ಷಣೆಗೆ ತಿರುಗಿದ ಕ್ಷುಲ್ಲಕ ಜಗಳ
Team Udayavani, Mar 31, 2017, 12:46 PM IST
ದಾವಣಗೆರೆ: ಯುವಕರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ, ಗುಂಪುಗಳ ನಡುವಿನ ಘರ್ಷಣೆಗೆ ತಿರುಗಿದ ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಪಾಮೇನಹಳ್ಳಿ- ದಾವಣಗೆರೆ ಪಾಲಿಕೆಯ ಶ್ರೀರಾಮ ನಗರದ ಹುಡುಗರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವೇ ಇದೀಗ ಗುಂಪು ಘರ್ಷಣೆಗೆ ಕಾರಣವಾಗಿದೆ.
ಪಾಮೇನಹಳ್ಳಿ ಗ್ರಾಮದ ವೆಂಕಟೇಶ್ ಪೂಜಾರ್(32) ಎಂಬ ಯುವಕ ಬ ಶ್ರೀರಾಮ ನಗರದ ಲೋಕಿಕೆರೆಯ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಬರಲು ಹೋದಾಗ ಶ್ರೀರಾಮ ನಗರದ ಹರೀಶ್ ಮತ್ತವರ ಬೆಂಬಲಿಗರು ವೆಂಕಟೇಶ್ ಮೇಲೆ ಹಲ್ಲೆ ಮಾಡಿದ್ದರು. ಪ್ರತಿಯಾಗಿ ಗ್ರಾಮಸ್ಥರು ಗುಂಪು ಕಟ್ಟಿಕೊಂಡು ಹನುಮಂತಪ್ಪ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆಮಾಡಿದ್ದಾರೆ ಎಂಬುದು ಎರಡೂ ಕಡೆಗಳಿಂದ ದೂರು ನೀಡಲಾಗಿದೆ.
ವೆಂಕಟೇಶ್ ಪೆಟ್ರೋಲ್ ಹಾಕಿಸಿಕೊಳ್ಳಲು ಹೋದಾಗ ಹರೀಶ್ ಮತ್ತು ಹನುಮಂತ ಎಂಬುವರು ವೆಂಕಟೇಶ್ನನ್ನು ತಡೆದು, ಏನ್ನಾನದರೂ ಕೊಡಿಸುವಂತೆ ಕೇಳಿದ್ದಾರೆ. ಆಗ ವೆಂಕಟೇಶ್ 100 ರೂಪಾಯಿ ಕೊಡಲು ಮುಂದಾಗಿದ್ದಾನೆ. ಇದರಿಂದ ಕುಪಿತರಾದ ಹರೀಶ್ ಮತ್ತು ಹನುಮಂತ ವೆಂಕಟೇಶ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಅದೇ ವೇಳೆಗೆ ಸ್ಥಳಕ್ಕೆ ಬಂದ ಹರೀಶ್ನ ಸ್ನೇಹಿತರಾದ ಸಂತೋಷ್ ಅಲಿಯಾಸ್ ಚಾಕಲೇಟ್ ಸಂತ, ಅನಿಲ್, ಬೀರೇಶ್ ಇನ್ನೋರ್ವ ಅಪರಿಚಿತ ಯುವಕ ಸೇರಿ ಹಲ್ಲೆಮಾಡಿದ್ದಾರೆಂದು ವೆಂಕಟೇಶ್ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಹನುಮಂತನ ಕಡೆಯವರು ಇನ್ನೊಂದು ದೂರು ದಾಖಲಿಸಿದ್ದು, ಅದರ ಅನ್ವಯ ಹರೀಶ್ ಮತ್ತು ಪೂಜಾರ್ ವೆಂಕಟೇಶ್ ಜಗಳಮಾಡುತ್ತಿದ್ದಾಗ ಹನುಮಂತ ಮತ್ತು ಸ್ನೇಹಿತ ಬೀರೇಶ್ ಜಗಳ ಬಿಡಿಸಿದ್ದರಂತೆ.
ವೆಂಕಟೇಶ್ ಜಗಳದ ಜಾಗದಿಂದ ತನ್ನೂರು ಪಾಮೇನಹಳ್ಳಿಗೆ ಹೋಗಿ ನಾಗರಾಜ, ಮಂಜುನಾಥ, ಪ್ರಭು, ರಮೇಶ್, ರಘು, ಪೂಜಾರ ಮಂಜುನಾಥ, ವೆಂಕಟೇಶ, ಆಟೋ ಬಸವರಾಜ ಸೇರಿದಂತೆ ಸುಮಾರು 40 ಜನ ಹನುಮಂತ ಮತ್ತು ಬೀರೇಶ್ ಮೇಲೆ ಹಲ್ಲೆಮಾಡಿದ್ದಾರೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ
Bhutan ಅಡಿಕೆ ಆಮದು ನಮ್ಮ ಬೆಳೆಗಾರರ ಮೇಲೆ ಪರಿಣಾಮ ಬೀರದು: ಕಿಶೋರ್ ಕುಮಾರ್ ಕೊಡ್ಗಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ
Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!
Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್
Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಫೋನ್ ಅಂಗಡಿ!
Chikkaballapura: ವಿಶ್ವ ಶಾಂತಿ ದಿನದ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ನಡಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.