![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 4, 2017, 5:16 PM IST
ಮುಂಬಯಿ : ಬಾಲಿವುಡ್ನ ವಿವಾದಿತ ನಟಿ ರಾಖೀ ಸಾವಂತ್ ಳನ್ನು ಪಂಜಾಬ್ ಪೊಲೀಸರು ಮುಂಬಯಿಯಲ್ಲಿ ಬಂಧಿಸಿರುವುದಾಗಿ ಎಎನ್ಐ ತಿಳಿಸಿದೆ.
ಪುರಾಣ ಪ್ರಸಿದ್ಧ ಮಹರ್ಷಿ ವಾಲ್ಮೀಕಿ ಕುರಿತಾಗಿ ರಾಖೀ ಸಾವಂತ್ ಈ ಹಿಂದೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಆ ಬಗ್ಗೆ ಆಕೆಯ ವಿರುದ್ಧ ಕೇಸು ದಾಖಲಾಗಿತ್ತು. ಈ ಸಂಬಂಧ ರಾಖೀ ಸಾವಂತ್ ಮಾರ್ಚ್ 9ರಂದು ಕೋರ್ಟಿಗೆ ಹಾಜರಾಗಬೇಕಿತ್ತು. ಆದರೆ ಆಕೆ ಹಾಜರಾಗದ ಕಾರಣ ನ್ಯಾಯಾಲಯ ಆಕೆಯ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿತ್ತು.
ಅಂತೆಯೇ ಅರೆಸ್ಟ್ ವಾರಂಟ್ ಹೊಂದಿದ್ದ ಪಂಜಾಬ್ ಪೊಲೀಸರು ಮುಂಬಯಿಯಲ್ಲಿ ಆಕೆಯನ್ನು ಇಂದು ಬಂಧಿಸಿದರು.
ರಾಮಾಯಣ ಗ್ರಂಥಕರ್ತ ವಾಲ್ಮೀಕಿ ಮಹರ್ಷಿ ಕುರಿತಾಗಿ ಟಿವಿ ಶೋ ಒಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ರಾಖೀ ಸಾವಂತ್, ವಾಲ್ಮೀಕಿ ಸಮುದಾಯದವರ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆ ಎಂದು ದೂರುದಾರರು ಕೇಸ್ ಮಾಡಿದ್ದರು.
ಈಗಿನ್ನು ಈ ಕೇಸಿನ ವಿಚಾರಣೆ ಎಪ್ರಿಲ್ 10ರಂದು ನಡೆಯಲಿದೆ ಎಂದು ತಿಳಿದುಬಂದಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.