ನಿಮ್ಮ ಯಡಿಯೂರಪ್ಪ ಸಿಎಂ ಆಗ್ಬೇಕಂದ್ರೆ ಪ್ರಸಾದ್ ಗೆಲ್ಬೇಕು
Team Udayavani, Apr 5, 2017, 12:59 PM IST
ನಂಜನಗೂಡು: ನಿಮ್ಮ ಯಡಿಯೂರಪ್ಪ ಮುಖ್ಯ ಮಂತ್ರಿಯಾಗಬೇಕಾದರೆ ಇಲ್ಲಿ ಶ್ರೀನಿವಾಸ ಪ್ರಸಾದ ಗೆಲ್ಲಲೇ ಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜನತೆಗೆ ತಾಕೀತು ಮಾಡಿದರು.
ಮಂಗಳವಾರ ಉಪ ಚುನಾವಣಾ ಪ್ರಚಾರ ವನ್ನು ಕ್ಷೇತ್ರದ ಚಿನ್ನದ ಗುಡಿ ಹುಂಡಿಯಿಂದ ಪ್ರಾರಂಭ ಮಾಡಿದ ಅವರು ನಂತರ ಬದನವಾಳು ದೇವನೂರು ಚಿಕ್ಕ ಕೌಲಂದೆ ದೊಡ್ಡ ಕಕೌಲಂದೆ ಕೃಷ್ಣರಾಜಪುರ, ಗಟವಾಡಿ ಗಟವಾಡಿ ಪುರಗಳಲ್ಲಿ ಮತಯಾಚನೆ ನಡೆಸಿ ಮಾತನಾಡಿದರು.
ಸಾರ್ವಜನಿಕ ಚುನಾವಣೆಯ ಪೂರ್ವಭಾವಿ ಯಾಗಿ ನಡೆಯುತ್ತಿರುವ ಈ ಚುನಾವಣೆಯ ಮಹತ್ವವನ್ನು ವಿವರಿಸಿದ ಅವರು ನಿಮ್ಮ ಈ ಅಭಿಮಾನ ಪ್ರಸಾದರ ಪಾಲಿಗೆ ಮತವಾಗಿ ಅವರು ವಿಜೇತರಾಗಬೇಕು ಹಾಗಾದಾಗ ಮಾತ್ರ ಈ ಯಡಿಯೂರಪ್ಪ ಮತ್ತೆ ಮುಖ್ಯ ಮಂತ್ರಿಯಾಗಲು ಸಾಧ್ಯ ಎಂದರು.
ರಾಯರೆಡ್ಡಿ ಕಂಪನಿ ಬೀಡುಬಿಟ್ಟಿದೆ ಹುಷಾರ್: ಈ ಕೌಲಂದೆ ಸುತ್ತಮುತ್ತ ರಾಯರೆಡ್ಡಿ ಹಾಗೂ ಸಿದ್ದರಾಮಯ್ಯರ ಕಂಪನಿ ಬೀಡು ಬಿಟ್ಟಿದೆ ಜನತೆ ಇವರ ಬಗ್ಗೆ ಹುಷಾರಾಗಿರಬೇಕು. ಆಡಳಿತ ಪಕ್ಷದ ಮೋಸದ ಬಲೆಗೆ ಬೀಳದೆ ವಿವಿಧ ಸಮಾಜದ ಎಲ್ಲರನ್ನೂ ಒಂದಾಗಿಸಿ ಬಿಜೆಪಿಯ ವೋಟಿನ ಬುಟ್ಟಿ ತುಂಬಿಸಬೇಕು ಎಂದು ಮನವಿ ಮಾಡಿದರು.
ಕೇಸರಿ ರಥ ಏರಿದ ಮುಸ್ಲಿಮರು: ಕೌಲಂದೆ ಯಲ್ಲಿ ಮುಸ್ಲಿಂ ಸಮುದಾಯದವರು ಯಡಿ ಯೂರಪ್ಪನವರ ಪ್ರಚಾರದ ಬಿಜೆಪಿಯ ಕೇಸರಿ ರಥ ಏರುವುದರ ಮುಖಾಂತರ ತಾಲೂಕಿನ ರಾಜಕಾರಣದಲ್ಲಿನ ಹೊಸ ಅಧ್ಯಾಯಕ್ಕೆ ಕಾರಣರಾದರು.
ಬಿಎಸ್ವೈ ಅವರೊಡನೆ ಇಂದು ಪ್ರಚಾರ ದಲ್ಲಿ ವಿರೋಧ ಪಕ್ಷದ ನಾಯಕ ಈಶ್ವರಪ್ಪ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಹರತಾಳು ಹಾಲಪ್ಪ, ಎಸ್. ಮಹದೇವಯ್ಯ, ಕೆ.ಕೆ ಜಯದೇವು, ತಾಪಂ ಸದಸ್ಯರಾದ ಶಿವಣ್ಣ, ಬದನವಾಳು ರಾಮು, ಶಿವಪ್ಪ ದೇವರು, ಕೆ.ಆರ್ ಪುರದ ಸಿದ್ದಪ್ಪ, ಚಿಕ್ಕಮಂಗಳೂರು ಜಿಪಂ ಅಧ್ಯಕ್ಷೆ ಚೈತ್ರಾ, ಕೌವಲಂದೆ ಗ್ರಾಪಂ ಉಪಾಧ್ಯಕ್ಷ ಜಾವೀದ್ ಅಹ್ಮದ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ
Cycle Ride: ಸಾಗುತ ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್ ಸವಾರಿ
Kamanur village: ದಾರಿ ತೋರುವ ಮಾದರಿ ಗ್ರಾಮ
Bigg Boss: ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.