ನಟನೆಯಲ್ಲಿ ಎಲ್ಲವೂ ಗೊತ್ತು ಎನ್ನುವ ಭ್ರಮೆ ಬಿಡಿ


Team Udayavani, Apr 6, 2017, 2:59 PM IST

hub7.jpg

ಧಾರವಾಡ: ಹೊಸ ನಟವರ್ಗ ನಟನೆಯಲ್ಲಿ ತಮಗೆ ಎಲ್ಲವೂ ಗೊತ್ತು ಎನ್ನುವ ಭ್ರಮಾಲೋಕದಲ್ಲಿದ್ದು, ಇದರಿಂದ ಅವರೆಲ್ಲ ಹೊರ ಬರಬೇಕು ಎಂದು ಹಿರಿಯ ರಂಗಕರ್ಮಿ ಚಿದಂಬರರಾವ್‌ ಜಂಬೆ ಹೇಳಿದರು. 

ರಂಗಾಯಣ ವತಿಯಿಂದ ಹಮ್ಮಿಕೊಂಡ ರಂಗಧ್ವನಿ-2017 ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಸುವರ್ಣ ಸಮುತ್ಛಯ ಭವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ನಾಟಕೋತ್ಸವ ವಿಚಾರ ಸಂಕಿರಣ “ರಂಗಾಭಿನಯ : ಮಾತುಕತೆ, ಮಾಟ, ಮನನ’ ಕಾರ್ಯಕ್ರಮದಲ್ಲಿ ಅವರು ಆಶಯ ಭಾಷಣ ಮಾಡಿದರು. 

ನವಯುಗದ ನಟರಿಗೆ ನಾಟ್ಯಶಾಸ್ತ್ರವೇ ಕಷ್ಟದ ಕೆಲಸ. ಈ ನಟರಿಗೆ ನಾಟ್ಯಶಾಸ್ತ್ರವೇ ಬೇಕಿಲ್ಲ. ನಟನೆಯಲ್ಲಿ ಶಿರೋನಾಮೆ(ಕುತ್ತಿಗೆ) ಹೇಗೆ ಬಳಸಬೇಕೆಂಬುದು ಗೊತ್ತಿಲ್ಲ. ತಾವೇ ವಿದ್ವಾಂಸರು ಎಂಬ ಭ್ರಮಾಲೋಕದಲ್ಲಿ ಮುಳಗಿದ್ದಾರೆ. ಈ ಭ್ರಮಾಲೋಕದಲ್ಲಿ ಇರುವ ನಟರಿಗೆ ರಾಷ್ಟ್ರೀಯ ನಾಟಕೋತ್ಸವದ ಸಭೆಗಳು ಕಲ್ಪವೃಕ್ಷಗಳಿದ್ದಂತೆ. 

ಈ ಕಲ್ಪವೃಕ್ಷಗಳಿಗೆ ಮೊರೆ ಹೋದಾಗಲೇ ಬೇಡಿದ ವರ ಪಡೆಯಬಹುದು ಎಂದು ಸಲಹೆ ನೀಡಿದರು. ನಾಟ್ಯಶಾಸ್ತ್ರವೇ ಇಂದಿನ ನಟ-ನಿರ್ದೇಶಕರಿಗೆ ಸವಾಲಾಗಿದೆ. ಪ್ರೇಕ್ಷಕರು ಪ್ರಬುದ್ಧರಾಗಲು ಮೊದಲು ನಟರು ಪ್ರಬುದ್ಧವಾಗಿ ನಟಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಸಣ್ಣ-ಸಣ್ಣ ಸೂಕ್ಷ್ಮಗಳನ್ನು ಹಿಡಿದು ಕೆಲಸ ಮಾಡುವ ವ್ಯವಧಾನ, ಸಹನೆ, ಸಂಯಮ, ತಾಳ್ಮೆ ಅತ್ಯಗತ್ಯ.

ಒಂದು ದೃಶ್ಯ ಕ್ರಿಯೆ ಅನುಭವಿಸಿ ನಟಿಸುವ ಕೆಲಸವಾಗಬೇಕಿದೆ ಎಂದರು. ರಂಗನಟರು ತಮ್ಮ ದೇಹದ ಅವಯವಗಳನ್ನು ಕರಾರುವಕ್ಕಾಗಿ ಬಳಸುವಂತಹ ಕಲೆ ಕರಗತ ಮಾಡಿಕೊಳ್ಳಿ. ಮರೆತು ಬಿಟ್ಟಿರುವ ದೃಷ್ಟಿನೋಟದತ್ತ ಹೆಚ್ಚಿನ ಗಮನ ಹರಿಸಬೇಕಿದೆ. ಹಿಂದಿನ ಅಭಿನಯ ಪದ್ಧತಿ ನೋಡಿಯೇ ಇಂದಿನ ನಟರು ಕಲೆಯುವುದು ಬಹಳಷ್ಟಿದೆ.

ಅಭಿನಯ ಬೆಳೆಯಲು ಕಲಾತಪಸ್ವಿಗಳಂತೆ ಪರಿಶ್ರಮ ಪಡಬೇಕಿದೆ ಎಂದರು. ಅಭಿನಯ ಎಂಬುದು ಆಧ್ಯಾತ್ಮವಿದ್ದಂತೆ. ಇದನ್ನು ನಿರಂತರ ತಪಸ್ಸಿನ ಮೂಲಕ ಸಿದ್ಧಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಆದರೆ, ಆಧುನಿಕ ನಟರು ಇಂಥ ಮನೋಸ್ಥಿತಿಗೆ ಇಳಿಯುತ್ತಿಲ್ಲ. ಹೀಗಾಗಿ ನಟನೆಯಲ್ಲಿ ಹಾವ-ಭಾವ, ಅವಯವಗಳ ಕೊರತೆ ಎದ್ದು ಕಾಣುತ್ತದೆ ಎಂದರು.

ಕೇವಲ ಕೈ-ಕಾಲು, ಸ್ವಲ್ಪ ಅವಯವಗಳನ್ನು ಬಳಸಿ ಕುಣಿದರೆ ನಟನೆ ಅಲ್ಲ. ಅಗತ್ಯಕ್ಕೆ ತಕ್ಕಷ್ಟು ನಟಿಸುವುದರ ಜತೆಗೆ ಶಿಸ್ತು ರೂಢಿಸಿಕೊಳ್ಳಬೇಕು. ಹಸ್ತಪ್ರಾಣ, ಹಸ್ತಭೇದ, ಹಸ್ತವೃಕ್ಷಗಳು, ಕೃತಿಬೋಧ, ಮುದ್ರಾಭಾಷೆ ಅರಿತಿರಬೇಕು. ಮುಖ್ಯವಾಗಿ ನಟರಿಗೆ ಒಂದು ನಿಲುವು ಇರಬೇಕು.

ಇದನ್ನು ಗಮನಿಸಿ ರಂಗಭೂಮಿ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದರು. ರಂಗ ಸಮಾಜದ ಸದಸ್ಯ ಡಾ|ಡಿ.ಎಸ್‌.ಚೌಗಲೆ ಮಾತನಾಡಿ, ನಟರು ಅಭಿನಯ ಮುಖ್ಯವಾಗಿರಿಸಿ ಮುಂಚೂಣಿಗೆ ಬರಬೇಕು. ನಿರ್ದೇಶಕ-ನಟರ ನಡುವಿನ ಮಾತಿನ ಲಹರಿಯೇ ಮಾಟ. ವಾಸ್ತವದ ನೆಲೆಯಲ್ಲಿ ಅಭಿನಯ ಹೇಳುವ ಕೆಲಸ ನಟರಿಂದ ಆಗಬೇಕಿದೆ. 

ಸಮಕಾಲಿನ ಸಮಸ್ಯೆಗಳು ಇರಿಸಿಕೊಂಡು ನಾಟಕ ರಚಿಸುವಂತಹ ಕೆಲಸವೂ ಆಗಬೇಕಿದೆ ಎಂದರು. ಹಿರಿಯ ನಟಿ ಲಕೀಬಾಯಿ ಏಣಗಿ ರಾಷ್ಟ್ರೀಯ ನಾಟಕೋತ್ಸವ ವಿಚಾರ ಸಂಕಿರಣ ಉದ್ಘಾಟಿಸಿದರು. ಧಾರವಾಡ ರಂಗಾಯಣ ನಿರ್ದೇಶಕ ಡಾ|ಪ್ರಕಾಶ ಗರುಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಂಗಾಯಣ ಆಡಳಿತಾಧಿಧಿಕಾರಿ ಬಸವರಾಜ ಹೂಗಾರ ಇದ್ದರು.  

ಟಾಪ್ ನ್ಯೂಸ್

Bihar-tragey

Tragedy: ಬಿಹಾರದ 2 ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದುರಂತ: ಒಟ್ಟು 35 ಮಂದಿ ಸಾವು

Maha-Rig

Maharashtra: ವಾಣಿಜ್ಯ ವಾಹನಗಳಿಗೂ ಇನ್ನು ಡೀಲರ್‌ಗಳಿಂದಲೇ ನೋಂದಣಿ

supreme-Court

Court: ಬಾಲ್ಯವಿವಾಹ ತಡೆ ಕಾನೂನಿಗೆ ವೈಯಕ್ತಿಕ ಕಾನೂನು ಅಡ್ಡಿ ಆಗಬಾರದು: ಸುಪ್ರೀಂ

GOLD2

Gold Price: ದೆಹಲಿಯಲ್ಲಿ 80 ಸಾವಿರ ರೂ.ಗಳ ಸನಿಹಕ್ಕೆ ಚಿನ್ನದ ದರ

NZ-Rachin

India Vs New Zealand Test: ಇನ್ನಿಂಗ್ಸ್‌ ಸೋಲು ತಪ್ಪಿಸಲು ಭಾರತ ಹೋರಾಟ

ranaj

Ranaji Trophy: ಹೊರಮೈದಾನ ಒದ್ದೆ : ಕರ್ನಾಟಕ-ಕೇರಳ ಪಂದ್ಯಕ್ಕೆ ತೊಂದರೆ

Udupi: ಗೀತಾರ್ಥ ಚಿಂತನೆ-68: ಅರ್ಜುನನ ಅಹಂ ಮರ್ದನ

Udupi: ಗೀತಾರ್ಥ ಚಿಂತನೆ-68: ಅರ್ಜುನನ ಅಹಂ ಮರ್ದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

By Election: ಸಿಪಿವೈ ಎನ್‌ಡಿಎ ಅಭ್ಯರ್ಥಿ ಆದರೆ ಒಳ್ಳೆಯದು: ಜೋಶಿ

By Election: ಸಿಪಿವೈ ಎನ್‌ಡಿಎ ಅಭ್ಯರ್ಥಿ ಆದರೆ ಒಳ್ಳೆಯದು: ಜೋಶಿ

ಟಿಕೆಟ್‌ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ಜೋಶಿ

Pralhad Joshi: ಟಿಕೆಟ್‌ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Bihar-tragey

Tragedy: ಬಿಹಾರದ 2 ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದುರಂತ: ಒಟ್ಟು 35 ಮಂದಿ ಸಾವು

Maha-Rig

Maharashtra: ವಾಣಿಜ್ಯ ವಾಹನಗಳಿಗೂ ಇನ್ನು ಡೀಲರ್‌ಗಳಿಂದಲೇ ನೋಂದಣಿ

supreme-Court

Court: ಬಾಲ್ಯವಿವಾಹ ತಡೆ ಕಾನೂನಿಗೆ ವೈಯಕ್ತಿಕ ಕಾನೂನು ಅಡ್ಡಿ ಆಗಬಾರದು: ಸುಪ್ರೀಂ

GOLD2

Gold Price: ದೆಹಲಿಯಲ್ಲಿ 80 ಸಾವಿರ ರೂ.ಗಳ ಸನಿಹಕ್ಕೆ ಚಿನ್ನದ ದರ

NZ-Rachin

India Vs New Zealand Test: ಇನ್ನಿಂಗ್ಸ್‌ ಸೋಲು ತಪ್ಪಿಸಲು ಭಾರತ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.