ಮಹಾವೀರರ ಜೀವನ ಸಂದೇಶ ಪಾಲಿಸಿ


Team Udayavani, Apr 10, 2017, 12:48 PM IST

dvg2.jpg

ದಾವಣಗೆರೆ: ಭಗವಾನ್‌ ಮಹಾವೀರರ ತತ್ವ, ಆದರ್ಶ, ಸಂದೇಶ ಕೇವಲ ವೇದಿಕೆ ಭಾಷಣಕ್ಕೆ ಸೀಮಿತಗೊಳಿಸದೆ ದೈನಂದಿನ ಚಟುವಟಿಕೆಯಲ್ಲಿ ಪಾಲಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಆಶಿಸಿದರು. ಭಾನುವಾರ ವಿರಕ್ತಮಠದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಭಗವಾನ್‌ ಶ್ರೀ ಮಹಾವೀರರ ಜಯಂತಿಯಲ್ಲಿ ಮಾತನಾಡಿದರು.

ವರ್ಧಮಾನ ಮಹಾವೀರರು ಪ್ರತಿಯೊಬ್ಬರು ಸತ್ಯವನ್ನೇ ನುಡಿಯಬೇಕು ಎಂಬ ಮಹತ್ತರ ಸಂದೇಶ ನೀಡಿದ್ದಾರೆ. ಸತ್ಯವನ್ನು ನುಡಿಯುವುದರಿಂದ ಅಹಿಂಸಾ ಹಾದಿಯಲ್ಲಿ ನಡೆದಂತಾಗುತ್ತದೆ. ಇಂದಿನ ಎಲ್ಲವನ್ನೂ ಪಾಲನೆ ಮಾಡುವುದು ಕಷ್ಟ. ಆದರೂ, ಒಂದಿಷ್ಟನ್ನಾದರೂ ಪಾಲಿಸಿದಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು. 

ವರ್ಧಮಾನ ಮಹಾವೀರರು 2,600 ವರ್ಷಗಳ ಹಿಂದೆ ನೀಡಿರುವ ಸಂದೇಶಗಳನ್ನು ಗಮನಿಸಿದರೆ ಈ ಕ್ಷಣಕ್ಕೂ ಆಗಿನ ಮತ್ತು ಈಗಿನ ವಾತಾವರಣಕ್ಕೆ ಅಂತಹ ಯಾವುದೇ ವ್ಯತ್ಯಾಸ ಕಂಡು  ಬರುವುದಿಲ್ಲ. ಈಗಲೂ ಆಗಿನ ಸ್ಥಿತಿ, ವಾತಾವರಣ ಇದೆ. ಸ್ವತಃ ರಾಜನಾಗಿ 30 ವರ್ಷಕ್ಕೂ ಹೆಚ್ಚು ಕಾಲ ರಾಜ್ಯಭಾರ ನಡೆಸಿದಂತಹ ಮಹಾವೀರರು ಈಗಲೂ ಪ್ರಸ್ತುತವಾಗುವಂತಹ ಮೌಲ್ಯಯುತ ಸಂದೇಶ ನೀಡಿದ್ದಾರೆ ಎಂದರೆ ಅವರಲ್ಲಿ ಎಂತಹ ಆಲೋಚನಾ ಶಕ್ತಿ ಇತ್ತು ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು. 

ಭಗವಾನ್‌ ಮಹಾವೀರರು ನೀಡಿರುವ ಸತ್ಯ, ಅಹಿಂಸೆ, ಅಚೋರಿಯಾ, ಬ್ರಹ್ಮಚರ್ಯ, ಅಭಯನಿಗ್ರಹ ಎಂಬ ಮೈಲಿಗಲ್ಲುಗಳನ್ನು ದಾಟುವ ಮೂಲಕ ಮೋಕ್ಷವನ್ನ ಸಾಧಿಸಬಹುದು. ಸಂದೇಶ ಪಾಲಿಸುವ ಮೂಲಕ ನಿಜವಾದ ಮಾನವರಾಗಬೇಕು. ನಾವಲ್ಲದೆ ನಮ್ಮ ಸುತ್ತಮುತ್ತಲಿನವರನ್ನು ಒಳ್ಳೆಯ ಹಾದಿಯಲ್ಲಿ ಕೊಂಡೊಯ್ಯುವಂತಾಗಬೇಕು ಎಂದು ತಿಳಿಸಿದರು. 

ಜಯಂತಿ ಉದ್ಘಾಟಿಸಿದ ಮೇಯರ್‌ ರೇಖಾ ನಾಗರಾಜ್‌ ಮಾತನಾಡಿ, ಜೈನ ಸಮಾಜ ಎಂದೆಂದೂ ಹಿಂಸೆಯನ್ನು ವಿರೊಧೀಧಿ ಸಿದ ಅಹಿಂಸೆಯ ಆಚಾರ ವಿಚಾರಗಳನ್ನು ಶ್ರೇಷ್ಠತೆಯನ್ನು ಮೈಗೂಡಿಸಿಕೊಂಡಿರುವ ಸಮಾಜ ಎಂದು ಹರ್ಷ ವ್ಯಕ್ತಪಡಿಸಿದರು.  ವಿಶೇಷ ಉಪನ್ಯಾಸ ನೀಡಿದ ಬಿಎಸ್ಸೆನ್ನೆಲ್‌ ಉಪಮಂಡಲ ಅಭಿಯಂತರ ಸಂಜಯ ಹಜಾರೆ, ಭಗವಾನ್‌ ಮಹಾವೀರರ ಜೀವನ ಸಂದೇಶ, ಉಪದೇಶ ಸಾರ್ವಕಾಲಿಕ ಸತ್ಯ.

ಪ್ರತಿಯೊಬ್ಬರ ಜೀವನವನ್ನು ಮುಕ್ತಿಯೆಡೆಗೆ ಕೊಂಡೊಯುವಂಥವು. ಪ್ರತಿ ಆತ್ಮಕ್ಕೆ ಪರಮಾತ್ಮನಾಗುವ ಶಕ್ತಿ ಇದೆ ಎಂದು ಮಹಾವೀರರು ಸದಾ ಪ್ರಸ್ತಾಪಿಸುತ್ತಿದ್ದರು ಎಂದು ತಿಳಿಸಿದರು. 2600 ವರ್ಷಗಳ ಹಿಂದೆ ಬಿಹಾರದಲ್ಲಿ ಜನಿಸಿದ ಭಗವಾನ್‌ ಮಹಾವೀರರು ಸಮಾಜದ ನೈತಿಕ ಮೌಲ್ಯಗಳ ಉನ್ನತಿಗೆ ಶ್ರಮಿಸಿದರು. ಜೀವಿಸಿ… ಜೀವಿಸಲು ಬಿಡಿ… ಎಂಬ ಉದಾತ್ತ ಸಂದೇಶ ನೀಡಿದವರು.

ಮಹಾವೀರರ ಸಂದೇಶಗಳು ಈ ಕ್ಷಣಕ್ಕೂ ಹೆಚ್ಚು ಪ್ರಸ್ತುತವಾಗಿವೆ. ಅರ್ಥ, ಕಾಮ, ಮೋಕ್ಷ, ಲೋಭ, ಮದ, ಮತ್ಸರದಂತಹ ಅರಿಷಡ್‌ವರ್ಗಗಳ ವಿರುದ್ಧ ಅಹಿರ್ನಿಶಿ ಹೋರಾಟ ನಡೆಸುತ್ತಾ ಸಮಾನತೆಗೆ ಶ್ರಮಿಸಿದವರು. 2 ಸಾವಿರ ವರ್ಷಗಳ ಹಿಂದೆಯೇ ಸ್ತ್ರೀ ಸಮಾನತೆಗೆ ಶ್ರಮಿಸಿದ ಮಹಾವೀರರ ಬದುಕು ಅನುಕರಣೀಯ ಎಂದು ತಿಳಿಸಿದರು. 

ಸ್ವಾರ್ಥಕ್ಕಾಗಿ ಜೀವಿಸುವುದು ಯಾಂತ್ರಿಕ ಜೀವನ… ಅಹಿಂಸೆಯ ಪರವಾಗಿ ಜೀವಿಸುವುದು ಸಾರ್ಥಕ ಜೀವನ… ಎನ್ನುವ ಸಂದೇಶ ನೀಡಿರುವ ಮಹಾವೀರರು ನುಡಿದಂತೆ ನಡೆದವರು. ಹಿಂಸಾ ಪರಮೋಧರ್ಮ ಎನ್ನುವಂತೆ ಕೊನೆಯವರೆಗೆ ಅಹಿಂಸಾ ಮಂತ್ರ ಪಾಲಿಸಿದರು. ತಮ್ಮ ಮಹತ್ತರ ಉಪದೇಶಗಳ ಮೂಲಕ  ಕ್ರಾಂತಿಕಾರಕ ಬದಲಾವಣೆ ತಂದ ಮಹಾವೀರರು ಚೀನಾದ ಲಾವೋತ್ಸೆ, ಫೈಥಾಗೊರಸ್‌, ಸಾಕ್ರೆಟಿಸ್‌ ಅವರಂತಹ ಶ್ರೇಷ್ಠ ದಾರ್ಶನಿಕರ ಸಮಕಾಲೀನರು.

ಆದರ್ಶಮಯ ಜೀವನ ದರ್ಶನ ಮಾಡಿಸಿದ ಮಹಾಪುರುಷ ಎಂದು ಬಣ್ಣಿಸಿದರು.  ಮನುಷ್ಯನ ಮನಸ್ಸಿನ ವಿಕೃತಿಗಳನ್ನು ತೊಳೆದು ಪರಿಶುದ್ದವಾಗಿಸುವವನೇ ತೀರ್ಥಂಕರ. ಅಂತಹ ತೀರ್ಥಂಕರ ಶ್ರೇಷ್ಠರಲ್ಲಿ ಪ್ರಮುಖರಾದವರು ಮಹಾವೀರರು. ಸ್ವತಃ ಇಂದ್ರನೇ  ತೀಥಂಕರನ ಪೂಜೆ¿ ಮಾಡುತ್ತಿದ್ದ ಎಂಬುದು ಪ್ರತೀತಿ ಇದೆ ಎಂದು ತಿಳಿಸಿದರು. 

ಧರ್ಮೋ ರಕ್ಷತಿ ರಕ್ಷತಃ… ಎನ್ನುವಂತೆ ಧರ್ಮವನ್ನು ರಕ್ಷಿಸು, ಧರ್ಮ ನಿನ್ನನ್ನು ರಕ್ಷಿಸುತ್ತದೆ ಎನ್ನುವ ಸಂದೇಶ ನೀಡಿರುವ ಮಹಾವೀರರು ಧರ್ಮ ಸಕಲ ಜೀವಿಗಳು ಒಟ್ಟುಗೂಡಿ ಸುಖ ಜೀವನ ನಡೆಸುವುದೇ ನಿಜವಾದ ಧರ್ಮ ಎಂದು ಸಾರಿದವರು ಎಂದು ತಿಳಿಸಿದರು.

ಸಮಾಜದ ಮುಖಂಡರಾದ ರಮಣ್‌ ಲಾಲ್‌ ವಿ. ಸಂಘವಿ, ಅಜಿತ್‌ಕುಮಾರ್‌ ಇತರರು ಇದ್ದರು. ಪ್ರಸನ್ನ ಚಂದ್ರಪ್ರಭ ಮತ್ತು ಸಂಗಡಿಗರು ಜಿನಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಸ್ವಾಗತಿಸಿದರು. ಗಂಗಾಧರ್‌ ಬಿ.ಎಲ್‌. ನಿಟ್ಟೂರು ನಿರೂಪಿಸಿದರು. 

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yatnal 2

Government ಪತನ ಸಂಚು ಹೇಳಿಕೆ; ದಾವಣಗೆರೆಯಲ್ಲಿ ಯತ್ನಾಳ್ ವಿರುದ್ಧ ಪ್ರಕರಣ ದಾಖಲು

accident

Davanagere; ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃ*ತ್ಯು

Davanagere: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ಹರಿಹರ- ಹರಪನಹಳ್ಳಿ ಸಂಚಾರ ಬಂದ್

Davanagere: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ಹರಿಹರ- ಹರಪನಹಳ್ಳಿ ಸಂಚಾರ ಬಂದ್

DVG

Davanagere: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ​: 48 ಮಂದಿ ಆರೋಪಿಗಳಿಗೆ ಜಾಮೀನು

ವಾಲ್ಮೀಕಿ ನಿಗಮದಲ್ಲಿ ಆಗಿರುವ ಅವ್ಯವಹಾರ ಸರಿಪಡಿಸಬೇಕು: ಪ್ರಸನ್ನಾನಂದಪುರಿ ಸ್ವಾಮೀಜಿ

ವಾಲ್ಮೀಕಿ ನಿಗಮದಲ್ಲಿ ಆಗಿರುವ ಅವ್ಯವಹಾರ ಸರಿಪಡಿಸಬೇಕು: ಪ್ರಸನ್ನಾನಂದಪುರಿ ಸ್ವಾಮೀಜಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.