ಹೊಳೆಯಲ್ಲಿ ನಿರ್ಮಿಸಿದ್ದ ಹೊಂಡ ನಾಪತ್ತೆ!


Team Udayavani, Apr 10, 2017, 1:04 PM IST

dvg6.jpg

ಹರಿಹರ: ತುಂಗಭದ್ರಾ ನದಿ ನೀರಿನ ಹರಿವು ಭಾನುವಾರ ಮತ್ತಷ್ಟು ಕ್ಷೀಣಿಸಿದ್ದು, ನಗರಕ್ಕೆ ನೀರು ಪೂರೈಸುವ ಕವಲೆತ್ತು ಜಾಕ್‌ವೆಲ್‌ಗೆ ಸರಿಯಾಗಿ ನೀರು ಸಿಗದ ಕಾರಣ ಸೋಮವಾರದಿಂದ ನೀರು ಸರಬರಾಜು ಸ್ಥಗಿತೊಳ್ಳುವ ಅಪಾಯ ಎದುರಾಗಿದೆ. ನದಿ ಪಾತ್ರದ ಜನವಸತಿ ಪ್ರದೇಶಗಳಿಗೆ ಕುಡಿಯುವ ಉದ್ದೇಶಕ್ಕೆಂದು ಕಳೆದ ಮಾ.20ರಂದು ಭದ್ರಾ ಡ್ಯಾಮ್‌ನಿಂದ 3 ಸಾವಿರ ಕ್ಯೂಸೆಕ್ಸ್‌ ನೀರನ್ನು ನದಿಗೆ ಹರಿಸಲಾಗುತ್ತಿತ್ತು.

ಆದರೆ ಈಗಾಗಲೇ ಜಲಾಶಯದಿಂದ ಬರುವ ನೀರು ಬಂದ್‌ ಮಾಡಲಾಗಿದ್ದು, ತಾಲೂಕಿನಲ್ಲಿ ಮುಂದಿನ 2-3 ದಿನಗಳಲ್ಲಿ ನದಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಬರದ ನಿಮಿತ್ತ ಪ್ರಸಕ್ತ ವರ್ಷ ಜಲಾಶಯದಲ್ಲಿ ಕನಿಷ್ಟ ಪ್ರಮಾಣದ ನೀರು ಮಾತ್ರ ಸಂಗ್ರಹವಾಗಿದ್ದು, ಜನವರಿ ಕೊನೆಯಲ್ಲಾಗಲೇ ನದಿ ನೀರು ಸ್ಥಗಿತಗೊಂಡಿತ್ತು.

ಮೈಲಾರ ಜಾತ್ರೆ ನಿಮಿತ್ತ ಫೆಬ್ರವರಿಯಲ್ಲಿ 10-12 ದಿನಗಳ ಕಾಲ ನೀರು ಹರಿಸಿದ್ದರೆ, ಈ ಸಲ ಏ.5ರವರೆಗೆ ಅಂದರೆ 15-16 ದಿನಗಳ ಕಾಲ ನೀರು ಹರಿಸಲಾಗಿದೆ. ನಾಳೆಯಿಂದ ಮತ್ತೆ ಕೊಳವೆ ಬಾವಿಯ ಸಪ್ಪೆ ಹಾಗೂ ಫ್ಲೋರೈಡ್‌ಯುಕ್ತ ನೀರನ್ನೆ ತಾಲೂಕಿನ ಜನರು ಆಶ್ರಯಿಸಬೇಕಿದೆ.

ಹೊಂಡ ನಾಪತ್ತೆ!: ಜಲಾಶಯದಿಂದ ನೀರು ಬಿಡುತ್ತಲೇ ತಾಲೂಕಿನ ಅಧಿಧಿಕಾರಿಗಳು ಹಾಗೂ ಜನಪ್ರತಿನಿಧಿಧಿಗಳಿಗೆ ಹೊಳೆಯಲ್ಲೇ ಹೊಂಡ ನಿರ್ಮಿಸಿ, ನೀರು ಸಂಗ್ರಹಿಸುವ ಅದ್ಭುತ ಉಪಾಯ (?) ಹೊಳೆಯಿತು. ಅದರಂತೆ ಜಾಕ್‌ವೆಲ್‌ ಸುತ್ತಲೂ 250-300 ಮೀಟರ್‌ ಉದ್ದ, 100 ಮೀಟರ್‌ ಅಗಲದ 2 ಮೀಟರ್‌ ಆಳದ ಹೊಂಡ ನಿರ್ಮಿಸಲಾಗಿತ್ತು.

12-13 ದಿನಗಳ ಕಾಲ ಹರಿದ ನೀರಿನಮಟ್ಟ ಈಗ ಕ್ಷೀಣಿಸಿದೆ. ಆದರೆ ಜಾಕ್‌ವೆಲ್‌ ಸುತ್ತ ನಿರ್ಮಿಸಲಾಗಿದ್ದ ಹೊಂಡ ನಾಪತ್ತೆಯಾಗಿದೆ. ಅಲ್ಲಿ ದೊಡ್ಡ ಹೊಂಡ ನಿರ್ಮಿಸಲಾಗಿತ್ತೆಂಬ ಸಣ್ಣ ಕುರುಹು ಸಹ ಕಾಣದಂತೆ ಮರಳು ಸಮತಟ್ಟಾಗಿದೆ. 

ಸಾರ್ವಜನಿಕ ಹಣ ಪೋಲು: 8 ಜೆಸಿಬಿ ವಾಹನಗಳು 3 ದಿನ ಹಗಲು ರಾತ್ರಿ ಶ್ರಮಿಸಿ ನದಿಯಲ್ಲಿ ಹೊಂಡ ನಿರ್ಮಿಸಿದ್ದವು. ಇದರಲ್ಲಿ 40-50 ಮಿಲಿಯನ್‌ ಲೀಟರ್‌ ನೀರು ಸಂಗ್ರಹವಾಗಲಿದ್ದು, ನದಿ ಹರಿವು ನಿಂತರೂ  ಸಂಗ್ರಹಿತ ನೀರನ್ನು ಒಂದು ವಾರ ನಗರಕ್ಕೆಪೂರೈಸಬಹುದು ಎಂದು ಪ್ರಚಾರ ಮಾಡಲಾಗಿತ್ತು. 

ಆದರೆ ತರಾತುರಿಯಲ್ಲಿ, ಅವೈಜ್ಞಾನಿಕವಾಗಿ ನಿರ್ಮಿಸಿದ್ದ ಹೊಂಡ ಮರಳಿನಿಂದ ಮುಚ್ಚಿಕೊಂಡು ನಾಮಾವಶೇಷವಾಗಿದೆ. ಅಧಿಧಿಕಾರಿಗಳು, ಜನಪ್ರತಿನಿಧಿಧಿಗಳ ದಡ್ಡತನಕ್ಕೆ ಲಕ್ಷಾಂತರ ರೂ. ಸಾರ್ವಜನಿಕ ಹಣ ಪೋಲಾದಂತಾಗಿದೆ. 

ನೀರಿದ್ದರೂ ಉಪಯೋವಿಲ್ಲ: ನದಿ ನೀರು ಇನ್ನೂ ಸಂಪೂರ್ಣ ಸ್ಥಗಿತಗೊಂಡಿಲ್ಲ, ಸಣ್ಣದಾಗಿ ಝರಿಯಂತೆ ನೀರು ಹರಿಯುತ್ತಿದ್ದರೂ ಅದು ನೀರೆತ್ತುವ ಜಾಕ್‌ವೆಲ್‌ಗೆ ಸಿಗದ ಕಾರಣ ಪಂಪ್‌ ಮಾಡಿ, ಸರಬರಾಜು ಮಾಡಲಾಗುತ್ತಿಲ್ಲ. ನದಿಪಾತ್ರದ ಉದ್ದಕ್ಕೂ ಅಲ್ಲಲ್ಲಿ ನದಿಗೆ ಅಡ್ಡಲಾಗಿ ತಾತ್ಕಾಲಿಕ ಅಥವಾ ಶಾಶ್ವತ ಒಡ್ಡು ಹಾಕಿ ಸಾಧ್ಯವಾದಷ್ಟು ನೀರು ಸಂಗ್ರಹಿಸಿಕೊಂಡು ಜಾಕ್‌ವೆಲ್‌ಗೆ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುತ್ತದೆ.

ಇಲ್ಲೂ ಸಹ ಪ್ರತಿ ಬೇಸಿಗೆಯಲ್ಲಿ ಮರಳಿನ ಚೀಲದಿಂದ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗುತ್ತಿತ್ತು. ಆದರೆ ಹೊಂಡ ನಂಬಿಕೊಂಡು ಈ ಸಲ ಅದನ್ನು ಮಾಡಿಲ್ಲ. ಈಗಲೂ ಕಾಲ ಮಿಂಚಿಲ್ಲ, ನಗರಸಭೆ ಸೋಮವಾರವೇ ತಾತ್ಕಾಲಿಕ ಮರಳಿನ ಚೀಲದ ಗೋಡೆ ನಿರ್ಮಿಸಿದರೆ ಮತ್ತೆ 5-6 ದಿನಗಳ  ನಗರಕ್ಕೆ ನೀರು ಪೂರೈಸಬಹುದಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. 

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ನನ್ನಅಳಿಯನನ್ನು ಬಿಟ್ಟು ಬಿಟ್ಟಿದ್ದರೆ ದರ್ಶನ್‌ ಗೆ….: ರೇಣುಕಾಸ್ವಾಮಿ ಮಾವa

Davanagere; ನನ್ನಅಳಿಯನನ್ನು ಬಿಟ್ಟು ಬಿಟ್ಟಿದ್ದರೆ ದರ್ಶನ್‌ ಗೆ….: ರೇಣುಕಾಸ್ವಾಮಿ ಮಾವ

6-

Nyamathi ಪಟ್ಟಣದ ಹಲವೆಡೆ ಸರಣಿ ಕಳ್ಳತನ; ನಾಲ್ವರಲ್ಲಿ ಇಬ್ಬರು ಆರೋಪಿಗಳ ಬಂಧನ, ಸ್ವತ್ತು ವಶ

BC-Patil

Congress ವಿಪಕ್ಷದಲ್ಲಿದ್ದಾಗ ಕೋವಿಡ್ ಹಗರಣ ಬಗ್ಗೆ ಸುಮ್ಮನಿದ್ದಿದ್ದೇಕೆ?: ಬಿ.ಸಿ.ಪಾಟೀಲ್‌

Protest against Aadhaar link to agricultural pump set: Kodihalli Chandrasekhar

ಕೃಷಿ ಪಂಪ್ ಸೆಟ್ ಗೆ ಆಧಾರ‌ ಲಿಂಕ್ ಖಂಡಿಸಿ ಸೆ. 4ರಂದು ಪ್ರತಿಭಟನೆ: ಕೋಡಿಹಳ್ಳಿ ಚಂದ್ರಶೇಖರ್‌

Davanagere; Governor’s post should be abolished: CPI

Davanagere; ರಾಜ್ಯಪಾಲ ಹುದ್ದೆಯನ್ನೇ ರದ್ದು ಮಾಡಬೇಕು: ಸಿಪಿಐ ಆಗ್ರಹ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.