ಡಿಸಿ ಕೊಲೆಯತ್ನ ಪ್ರಕರಣ: ಬಂಧಿತರ ಸಂಖ್ಯೆ 21ಕ್ಕೆ ಏರಿಕೆ
Team Udayavani, Apr 10, 2017, 3:15 PM IST
ಉಡುಪಿ/ಕುಂದಾಪುರ: ಡಿ.ಸಿ., ಎ.ಸಿ, ವಿ.ಎ., ಗನ್ಮ್ಯಾನ್ ಮೇಲೆ ಮರಳು ಮಾಫಿಯಾದವರು ನಡೆಸಿದ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ರಾತ್ರಿ ಮತ್ತೆ ನಾಲ್ವರು ಆರೋಪಿಗಳನ್ನು ಹಾಗೂ ರವಿವಾರ ಮಧ್ಯಾಹ್ನ ಒಬ್ಬನನ್ನು ಬಂಧಿಸಿದ್ದು, ಒಟ್ಟಾರೆ ಎ. 3ರಿಂದ ಎ. 9ರ ವರೆಗೆ ಹಂತ-ಹಂತವಾಗಿ ಒಟ್ಟು 21 ಆರೋಪಿಗಳ (ಗಡೀಪಾರು ಮಾಡಲಾದ ಐವರನ್ನು ಹೊರತುಪಡಿಸಿ) ಬಂಧನವಾಗಿದೆ.
ಶನಿವಾರ ರಾತ್ರಿ ಕಾಳಾವರದ ರಾಘವೇಂದ್ರ (36), ಕಂಡೂÉರಿನ ಫಯಾಜ್ ಅಹ್ಮದ್ (22), ಮುಶಿನ್ (23), ಮಹಮ್ಮದ್ ಯಾಸಿನ್ (20) ಮೂಡುಬಗೆಯ ಮಹಮ್ಮದ್ ಅಫìತ್ (23) ಹಾಗೂ ರವಿವಾರ ಮಧ್ಯಾಹ್ನ ಕಂಡೂÉರಿನ ಸಂಜೀವ (44) ಅವರನ್ನು ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಮಾಯಕರ ಬಿಡುಗಡೆಗೆ ಆಗ್ರಹ
ಈ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂದು ಕಂಡೂÉರಿನ ಮಹಿಳೆಯರ ಸಹಿತ ಸ್ಥಳೀಯರು ಕುಂದಾಪುರ ಠಾಣಾಧಿಕಾರಿ ಹಾಗೂ ಕಂಡೂÉರು ಠಾಣಾಧಿಕಾರಿ ವಿರುದ್ಧ ಆರೋಪ ಮಾಡಿದರು.
ಕಂಡೂÉರು ಠಾಣೆಗೆ ತೆರಳಿ ಠಾಣಾಧಿಕಾರಿಗಳಲ್ಲಿ ಅಮಾಯಕರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಈ ಬಗ್ಗೆ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಅದೇ ರೀತಿ ಕಂಡೂÉರಿನವರು ಉಡುಪಿ ನಗರ ಠಾಣೆಗೂ ಆಗಮಿಸಿ ಅಧಿಕಾರಿಗಳಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
21 ಆರೋಪಿಗಳ ಬಂಧನ: ಎಸ್ಪಿ
ರವಿವಾರದ ವರೆಗೆ ಒಟ್ಟು 21 ಆರೋಪಿಗಳ ಬಂಧನವಾಗಿದೆ. ಇನ್ನೂ ಹಲವು ಆರೋಪಿಗಳ ಬಂಧನವಾಗಲೂಬಹುದು. ಪೊಲೀಸ್ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಕರಣದ ಮತ್ತಷ್ಟು ಆರೋಪಿಗಳ ಪತ್ತೆ ಕಾರ್ಯಕ್ಕೆ ಶ್ರಮ ವಹಿಸುತ್ತಿದೆ ಎಂದು ಎಸ್ಪಿ ಕೆ.ಟಿ. ಬಾಲಕೃಷ್ಣ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.