ಕಡಲಲ್ಲಿ ಈಜಿ ಅಂತೂ ಬದುಕುಳಿದ ಹೆಣ್ಣು ಕಡವೆ
Team Udayavani, Apr 11, 2017, 10:58 AM IST
ಕಾರವಾರ: ಸೋಮವಾರ ಬೆಳಗಿನ ಜಾವ ನಗರದ ಲಂಡನ್ ಬ್ರಿಜ್ ಸಮೀಪದ ಕಾಡುಗುಡ್ಡದಿಂದ ನಾಯಿಗಳ
ದಾಳಿಯಿಂದ ತಪ್ಪಿಸಿಕೊಳ್ಳಲು ಹೆಣ್ಣು ಕಡವೆಯೊಂದು ಸಮುದ್ರಕ್ಕೆ ಜಿಗಿದು ಕೆಲ ಸಮಯ ಕಡಲಲ್ಲಿ ಈಜಿತು. ಈ ವೇಳೆ ಮೀನುಗಾರರು ದೋಣಿಯಲ್ಲಿ ತೆರಳಿ ಕಡವೆ ಸಮುದ್ರದ ಆಳಕ್ಕೆ ಹೋಗದಂತೆ ತಡೆದು ರಕ್ಷಿಸಿ ದಡಕ್ಕೆ ತಂದರು.
ಫೋಟೋಗ್ರಾಫರ್ ಪಾಂಡುರಂಗ ಹರಿಕಂತ್ರ ಕಡವೆ ರಕ್ಷಣೆಗಾಗಿ ಸಮುದ್ರಕ್ಕೆ ಜಿಗಿದಾಗ ಕಡವೆ ಕಾಲುತಾಗಿ ಅವರ ತಲೆಗೆ ಗಾಯವಾಗಿದ್ದು, ತಕ್ಷಣ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಡವೆಗೆ ಪಶು ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಕೊಡಿಸಿದರು. ಕಾರವಾರ ಡಿಎಫ್ಒ ಕಚೇರಿ ಬಳಿಯ ನರ್ಸರಿಗೆ ಕಡವೆಯನ್ನು ಕೊಂಡೊಯ್ದು ವಿಶ್ರಾಂತಿಗೆ ಬಿಡಲಾಯಿತು. ನಂತರ ಅಧಿಕಾರಿಗಳ ಸಮ್ಮುಖದಲ್ಲಿ ಕಾರವಾರ-ಗೋವಾ ನಡುವಿನ ಮೈಂಗಿಣಿ ಅರಣ್ಯ ಪ್ರದೇಶದಲ್ಲಿ ಹಳ್ಳದ ನೀರಿನ ಸೌಲಭ್ಯವಿದ್ದು, ಅಲ್ಲಿ ಕಡವೆ ಬಿಡಲು ನಿರ್ಧರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್ ವೆಲೋಡ್ರೋಮ್
Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ
Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ
Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು
Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.