ಗಣೇಶ್‌ ಮೆಡಿಕಲ್ಸ್‌ನಲ್ಲಿ ಸತೀಶ್‌ ನೀನಾಸಂ


Team Udayavani, Apr 11, 2017, 12:03 PM IST

Neenasam-Satish-(5).jpg

“ನಮ್‌ ತಾಯಾಣೆಗೂ ನಾನ್‌ ಹೀರೋ ಅಲ್ಲ, ಪ್ರೊಡ್ನೂಸರ್‌ ಅಷ್ಟೇ …’ ಅಂತ ಚಿತ್ರದ ಜಾಹೀರಾತಿನಲ್ಲೇ ಹಾಕಿಸಿಕೊಂಡು ಬಿಟ್ಟಿದ್ದರು ಸ್ಕಂದ ಆಡಿಯೋದ ಪ್ರಸನ್ನ. ಈ ಮೂಲಕ ಈ ಚಿತ್ರದ ಹೀರೋ ಬೇರೆ ಯಾರೋ ಇರುತ್ತಾರೆ ಎಂದು ಸೂಕ್ಷ್ಮವಾಗಿ ಹಿಂಟ್‌ ಕೊಟ್ಟಿದ್ದರು. ಆದರೆ, ಆ ಹೀರೋ ಯಾರೂ? ಅವರು ಉತ್ತರಿಸಿರಲಿಲ್ಲ. ರೆಸಾರ್ಟನಲ್‌É ಅವ್ರೇ ಅಂತ ಇತ್ತು. ಹೋಗಲಿ ನಿರ್ದೇಶಕರು ಯಾರು ಎಂದರೆ ಅದಕ್ಕೂ ಸರಿಯಾದ ಉತ್ತರವಿಲ್ಲ. ಕೋಟಿ ಕೇಳ್ತಾವ್ರೇ ಅಂತ ಜಾಹೀರಾತಿನಲ್ಲಿತ್ತೇ ಹೊರತು, ಆ ಕೋಟಿ ಕೇಳ್ಳೋ ಪುಣ್ಯಾತ್ಮ ಯಾರು ಅಂತ ಮಾತ್ರ ಬಿಟ್ಟುಕೊಟ್ಟಿರಲಿಲ್ಲ.

ಈಗ ಕೊನೆಗೂ ಉತ್ತರ ಸಿಕ್ಕಿದೆ. “ಗಣೇಶ್‌ ಮೆಡಿಕಲ್ಸ್‌’ನ ಹೀರೋ ಆಗಿ ಸತೀಶ್‌ ನೀನಾಸಂ ನಟಿಸುತ್ತಿದ್ದರೆ, ಚಿತ್ರದ ನಿರ್ದೇಶನವನ್ನು ವಿಜಯಪ್ರಸಾದ್‌ ಮಾಡಲಿದ್ದಾರೆ. ಇವರಿಬ್ಬರೂ ಪ್ರಸನ್ನ ಜೊತೆಗೆ ಈ ಹಿಂದೆ ಕೆಲಸ ಮಾಡಿದವರೇ. ಪ್ರಸನ್ನ ನಿರ್ಮಾಣದ “ನೀರ್‌ ದೋಸೆ’ ಚಿತ್ರವನ್ನು ವಿಜಯಪ್ರಸಾದ್‌ ನಿರ್ದೇಶಿಸಿದರೆ, “ಬ್ಯೂಟಿಫ‌ುಲ್‌ ಮನಸುಗಳು’ ಚಿತ್ರದಲ್ಲಿ ಸತೀಶ್‌ ನಾಯಕರಾಗಿದ್ದರು. ತಮ್ಮ ಮೊದಲ ಚಿತ್ರದ ನಿರ್ದೇಶಕ ಮತ್ತು ಎರಡನೆಯ ಚಿತ್ರದ ನಾಯಕರನ್ನೇ ಇಟ್ಟುಕೊಂಡು ಮೂರನೆಯ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ ಪ್ರಸನ್ನ.

ವಿಜಯಪ್ರಸಾದ್‌ ಮತ್ತು ಸತೀಶ್‌ ಈ ಹಿಂದೆ “ಪೆಟ್ರೋಮ್ಯಾಕ್ಸ್‌’ ಎಂಬ ಚಿತ್ರ ಮಾಡಬೇಕಿತ್ತು. ಚಿತ್ರ ಸೆಟ್ಟೇರಿದರೂ, ಕಾರಣಾಂತರಗಳಿಂದ ಮುಂದುವರೆಯಲಿಲ್ಲ. ಈಗ “ಪೆಟ್ರೋಮ್ಯಾಕ್ಸ್‌’ ಪಕ್ಕಕ್ಕಿಟ್ಟು ಇಬ್ಬರೂ “ಗಣೇಶ್‌ ಮೆಡಿಕಲ್ಸ್‌’ ಚಿತ್ರದ ಮೂಲಕ ಒಟ್ಟಾಗುತ್ತಿದ್ದಾರೆ. “ವಿಜಯಪ್ರಸಾದ್‌ ಅವರ ಜೊತೆಗೆ ಈ ಹಿಂದೆಯೇ ಚಿತ್ರ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಸ್ಟ್ರಕ್‌ ಆಗಿತ್ತು. ಈಗ ಕಾಲ ಕೂಡಿ ಬಂದಿದೆ. ವಿಜಯಪ್ರಸಾದ್‌ ಬಹಳ ಒಳ್ಳೆಯ ಕಥೆ ಮಾಡಿದ್ದಾರೆ. ಶೂಟಿಂಗ್‌ ಶುರು ಮಾಡಬೇಕು. ಅದಕ್ಕೂ ಮುನ್ನ ಇಬ್ಬರೂ ನಮ್ಮ ಈಗಿರುವ ಚಿತ್ರಗಳನ್ನು ಮುಗಿಸಬೇಕು’ ಎನ್ನುತ್ತಾರೆ ಸತೀಶ್‌ ನೀನಾಸಂ.

ಅಂದಹಾಗೆ, “ಗಣೇಶ್‌ ಮೆಡಿಕಲ್ಸ್‌’ ಚಿತ್ರ ಶುರುವಾಗುವುದೇನಿದ್ದರೂ ಈ ವರ್ಷದ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ ಹೊತ್ತಿಗೇ. ಅದಕ್ಕೂ ಮುನ್ನ ವಿಜಯಪ್ರಸಾದ್‌ “ಲೇಡೀಸ್‌ ಟೈಲರ್‌’ ಚಿತ್ರ ಮುಗಿಸಬೇಕು. ಇನ್ನು ಸತೀಶ್‌ ಸಹ ಇನ್ನೊಂದು (ಜೇಕಬ್‌ ವರ್ಗೀಸ್‌ ಶಿಷ್ಯ ನಿರ್ದೇಶನದ ಹೆಸರಿಡದ) ಚಿತ್ರವನ್ನು ಮುಗಿಸಬೇಕು. ಇಬ್ಬರೂ  ಈಗ ಒಪ್ಪಿರುವ ಚಿತ್ರಗಳನ್ನು ಮುಗಿಸಿ, “ಗಣೇಶ್‌ ಮೆಡಿಕಲ್ಸ್‌’ನ ಶಟರ್‌ ತೆಗೆಯಬೇಕಿದೆ. ಇನ್ನು ಚಿತ್ರವೇನಿದ್ದರೂ ಮುಂದಿನ ವರ್ಷವೇ ಬಿಡುಗಡೆ.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Ramesh aravind: ಇಡೀ ಸಿನಿಮಾರಂಗದ ದೂಷಣೆ ಬೇಡ

Ramesh aravind: ಇಡೀ ಸಿನಿಮಾರಂಗದ ದೂಷಣೆ ಬೇಡ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.