ಪಾಲಿಕೆ ತೆರಿಗೆ ಸಂಗ್ರಹ ಶೀಘ್ರ ಸರಳೀಕರಣ
Team Udayavani, Apr 11, 2017, 3:22 PM IST
ಹುಬ್ಬಳ್ಳಿ: ಆಸ್ತಿಕರ ಹಾಗೂ ಇನ್ನಿತರ ತೆರಿಗೆ ಸಂಗ್ರಹವನ್ನು ಶೀಘ್ರದಲ್ಲಿಯೇ ಸರಳೀಕರಣಗೊಳಿಸಲಾಗುತ್ತಿದ್ದು, ಆನ್ಲೈನ್ ಹಾಗೂ ಮೊಬೈಲ್ ಅಪ್ಲಿಕೇಶನ್ ಮೂಲಕ ಕರ ಪಾವತಿ ಸೌಲಭ್ಯ, ಕರ ಪಾವತಿ ಬಾಕಿ ಕಡತಗಳ ವಿಲೇವಾರಿಗೆ ಅದಾಲತ್ ಮಾಡುವುದಾಗಿ ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ಸೋಮವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಸದಸ್ಯ ರಾಜಣ್ಣಾ ಕೊರವಿ ಅವರ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಸ್ಮಾರ್ಟ್ ಸಿಟಿ ಯೋಜನೆಯಡಿ ತೆರಿಗೆ ಸಂಗ್ರಹಕ್ಕೆ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಸಿದ್ಧತೆಗೆ ಸೂಚನೆ ಇದ್ದು, ಆನ್ಲೈನ್ ಪಾವತಿಗೆ ಒತ್ತು ನೀಡಲಾಗುತ್ತಿದೆ.
ಕರ ಸಂಗ್ರಹಕಾರರಿಗೆ ಪಿಒಎಸ್ ಯಂತ್ರಗಳನ್ನು ನೀಡಲಾಗುವುದು ಎಂದರು. ಪಾಲಿಕೆಯಲ್ಲಿ ಕಾಗದ ರಹಿತ ಆಡಳಿತಕ್ಕೆ ಕ್ರಮ ಕೈಗೊಳ್ಳಲಾಗುವುದು. ಕರ ಪಾವತಿ ಬಾಕಿ ಕಡತಗಳ ವಿಲೇವಾರಿಗೆ ವಲಯವಾರು ಅದಾಲತ್ ನಡೆಸಲಾಗುವುದು. ಬೇಸಿಗೆ ಸಂದರ್ಭದಲ್ಲಿ ಪಾಲಿಕೆಯಲ್ಲಿ ವರ್ಗಾವಣೆ ನಡೆಯಲಿದ್ದು, ಹೆಚ್ಚು ವರ್ಷಗಳಿಂದ ಒಂದೇ ಕಡೆ ಇರುವವರನ್ನು ವರ್ಗ ಮಾಡಲಾಗುವುದು ಎಂದರು.
ಪಕ್ಷಭೇದ ಮರೆತು ವಿರೋಧ: ಕರ ಪಾವತಿ ಕಡತಗಳ ಬಾಕಿ ಕುರಿತು ಜೆಡಿಎಸ್ನ ರಾಜಣ್ಣಾ ಕೊರವಿ ಮಾತನಾಡಿ, ಸುಮಾರು 1,273 ಆಸ್ತಿ ಕರ ಪಾವತಿ ಅರ್ಜಿಗಳು ಬಾಕಿ ಉಳಿದಿವೆ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಬಿಜೆಪಿಯ ಶಿವು ಹಿರೇಮಠ ಮಧ್ಯಪ್ರವೇಶಿಸಿ, ವಲಯ ಕಚೇರಿಗಳಲ್ಲಿ ಕ್ಲಾಕ್ ìಗಳು ಹೊಸದಾಗಿ ಆಸ್ತಿಕರ ಜೋಡಣೆಗೆ ಮುಂದಾಗುವವರಿಗೆ ನಿಗದಿತ ಹಣದ ಬದಲು ಲಂಚದ ಹಣ ಕೇಳುತ್ತಿದ್ದಾರೆ.
ಪಾಲಿಕೆ ಸದಸ್ಯರನ್ನು ಕರೆ ತಂದರೆ ಕೆಲಸ ಮಾಡಿಕೊಡುವುದಿಲ್ಲ ಎಂದು ಸಾರ್ವಜನಿಕರಿಗೆ ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ವಿಪಕ್ಷ ನಾಯಕ ಸುಭಾಸ ಶಿಂಧೆ, ಸದಸ್ಯರಾದ ನಿರ್ಮಲಾ ಜವಳಿ, ಅಲ್ತಾಫ್ ಕಿತ್ತೂರ, ರಘು ಲಕ್ಕಣ್ಣವರ, ದೀಪಕ ಚಿಂಚೋರೆ, ಬಲರಾಮ ಕುಸುಗಲ್ಲ, ಗಣೇಶ ಟಗರಗುಂಟಿ ಇನ್ನಿತರ ಸದಸ್ಯರು ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ
B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ
Hubli: ರಾಡ್ ಬಿದ್ದು ಎಎಸ್ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ
Meet Friends: ಧಾರವಾಡದ ಹಳೆಯ ಗೆಳೆಯರ ಭೇಟಿಯಾದ ತೆಲುಗು ನಟ ಶ್ರೀಕಾಂತ್
Hubli: ಬೈಕಲ್ಲಿ ಹೋಗುತ್ತಿದ್ದಾಗ ತಲೆಗೆ ರಾಡ್ ಬಿದ್ದು ಗಾಯಗೊಂಡಿದ್ದ ಎಎಸ್ಐ ಸಾವು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.