ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಒಗ್ಗಟ್ಟು ಅಗತ್ಯ
Team Udayavani, Apr 12, 2017, 3:14 PM IST
ಧಾರವಾಡ: ಧಾರ್ಮಿಕ ತತ್ವ-ಸಿದ್ಧಾಂತದಡಿ ಜನಮನಕ್ಕೆ ಉತ್ತಮ ಸಂದೇಶ ನೀಡುವ ಸಂಘ-ಸಂಸ್ಥೆಗಳು ಹಾಗೂ ಚಿಂತನ ಮಂಥನದ ಮಂಟಪಗಳು ನಾಡಿನಾದ್ಯಂತ ನಿರ್ಮಾಣವಾದರೆ ಈ ನಾಡು ಕಲ್ಯಾಣ ರಾಜ್ಯ ಆಗುತ್ತದೆ ಎಂದು ಬಸವಧರ್ಮ ಪೀಠದ ಶ್ರೀ ಗಂಗಾಮಾತಾಜಿ ಹೇಳಿದರು.
ಗುಲಗಂಜಿಕೊಪ್ಪದ ಸೋನಾಪುರದಲ್ಲಿ ಬಸವಧರ್ಮ ಅಭಿವೃದ್ದಿ ಸಂಸ್ಥೆ ವತಿಯಿಂದ ನಿರ್ಮಿಸಿದ ಬಸವ ಮಂಟಪದ ಉದ್ಘಾಟನೆ ಹಾಗೂ ವಿಶ್ವಗುರು ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಧಾರವಾಡದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಈ ಬಸವ ಮಂಟಪ ರಚನೆಯಾಗಿದ್ದು, ಇಲ್ಲಿ ಆಧ್ಯಾತ್ಮಿಕ ಚಿಂತನೆಗಳು ನಿರಂತರವಾಗಿ ನಡೆಯಬೇಕಿದೆ ಎಂದರು.
ಜನರು ಸತ್ಯ ಶುದ್ಧ ಕಾಯಕ ಮಾಡಿ ಸಮಾಜ ಸೇವೆ ಮಾಡುವುದನ್ನು ರೂಢಿಸಿಕೊಂಡಾಗ ಇಂತಹ ಚಿಂತನೆಗಳು ಹೊರ ಬಂದು ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ. ಸದ್ವಿಚಾರ ಚಿಂತನೆಗಳು, ಉಪನ್ಯಾಸಗಳು ಮಂದಿರ, ಮಠ, ಮಂಟಪಗಳಲ್ಲಿ ನಡೆಯುವುದರಿಂದ ಮಕ್ಕಳು ಮುಂದಿನ ಸತ್ಪಜೆಗಳಾಗಲು ಸಾಧ್ಯ ಎಂದರು.
ಬಸವಾದಿ ಶರಣರ ವಚನ ಚಿಂತನೆ, ಸಂಗೀತ ಕಾರ್ಯಕ್ರಮ ಹಾಗೂ ವಚನ ನೃತ್ಯ ಸೇರಿದಂತೆ ಹಲವಾರು ಧಾರ್ಮಿಕ ಸಮಾರಂಭ ನೆರವೇರಿಸುವ ಉದ್ದೇಶದಿಂದ ಮಂಟಪ ರಚನೆ ಮಾಡಲಾಗಿದೆ. ಜನಮನದಲ್ಲಿ ಆಳವಾದ ಅಧ್ಯಯನ ಮತ್ತು ಮೌಲ್ವಿಕ ತತ್ವಗಳು ಬೇರೂರಬೇಕಿದ್ದು ಸಮಯಾವಕಾಶ ಮಾಡಿಕೊಂಡು ಪ್ರಾರ್ಥನೆ ಹಾಗೂ ಚಿಂತನಾ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು ಎಂದರು.
ಕುಂಬಳಗೋಡಿನ ಬಸವ ಗಂಗೋತ್ರಿಯ ಶ್ರೀ ಚನ್ನಬಸವಾನಂದ ಸ್ವಾಮೀಜಿ ಅವರು ವಚನ ತಾಂಬೂಲ ನೆನಪಿನ ಕಾಣಿಕೆ ಬಿಡುಗಡೆಗೊಳಿಸಿದರು. ಅಕ್ಕಮಹಾದೇವಿ ಅನುಭಾವ ಪೀಠದ ಶ್ರೀ ಸತ್ಯಾದೇವಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ನೀಲಾಂಬಿಕೆ ಇಂಗಳಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸೂರ್ಯಕಾಂತ ಶೀಲವಂತ ಷಟಸ್ಥಳ ಧ್ವಜಾರೋಹಣ ನೆರವೇರಿಸಿದರು.
ಲಿಂಗಾಯತ ಧರ್ಮ ಮಹಾಸಭಾ ಅಧ್ಯಕ್ಷ ಕೆ. ಬಸವರಾಜಪ್ಪ, ಕಗ್ಗೊàಡ ರಾಷ್ಟ್ರೀಯ ಬಸವದಳ ಅಧ್ಯಕ್ಷ ಬಸವರಾಜ ಕೊಂಡಗೋಳಿ, ಅಶೋಕ ಶೀಲವಂತ, ಶಿವಾನಂದ ಲೋಲೆನವರ, ಮಂಜುನಾಥ ಚೋಳಪ್ಪನವರ ಇದ್ದರು. ದೇವೆಂದ್ರಪ್ಪ ಇಂಗಳಹಳ್ಳಿ ನಿರೂಪಿಸಿದರು. ಮಂಜುನಾಥ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಮಹಾದೇವ ನ್ಯಾಮತಿ ಸ್ವಾಗತಿಸಿದರು. ಶಿವಾನಂದ ಅಬಲೂರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ
B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ
Hubli: ರಾಡ್ ಬಿದ್ದು ಎಎಸ್ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ
Meet Friends: ಧಾರವಾಡದ ಹಳೆಯ ಗೆಳೆಯರ ಭೇಟಿಯಾದ ತೆಲುಗು ನಟ ಶ್ರೀಕಾಂತ್
Hubli: ಬೈಕಲ್ಲಿ ಹೋಗುತ್ತಿದ್ದಾಗ ತಲೆಗೆ ರಾಡ್ ಬಿದ್ದು ಗಾಯಗೊಂಡಿದ್ದ ಎಎಸ್ಐ ಸಾವು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.