ಬರ್ದ್ವಾನ್: ಪಂಚಾಯತ್ ಸಮಿತಿ ಅಧ್ಯಕ್ಷನ ಹತ್ಯೆ, ಹಿಂಸೆ ಸ್ಫೋಟ
Team Udayavani, Apr 13, 2017, 3:39 PM IST
ಬರ್ದ್ವಾನ್, ಪಶ್ಚಿಮ ಬಂಗಾಲ : ಬರ್ದ್ವಾನ್ ಜಿಲ್ಲೆಯ ಕೇತುಗ್ರಾಮ 1 ಪಂಚಾಯತ್ ಸಮಿತಿಯ ಅಧ್ಯಕ್ಷನನ್ನು ದುಷ್ಕರ್ಮಿಗಳು ಇರಿದು ಕೊಂದ ಘಟನೆಯನ್ನು ಅನುಸರಿಸಿ ರೈಫಾ ಗ್ರಾಮದಲ್ಲಿ ಹಿಂಸೆ ಸ್ಫೋಟಿಸಿದೆ.
ನಿನ್ನೆ ಬುಧವಾರ ತಡರಾತ್ರಿ ಸಂಭವಿಸಿದ ಘಟನೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಹೀರ್ ಶೇಖ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಸಾಯಿಸಿದರು. ಶೇಖ್ ಅವರು ಸಲೂನ್ನಿಂದ ಮನೆಗೆ ಮರಳುತ್ತಿದ್ದ ವೇಳೆ ಈ ಕೊಲೆ ಕೃತ್ಯ ನಡೆದಿದೆ.
ಶೇಖ್ ಅವರನ್ನು ಹಿಂಬದಿಯಿಂದ ಸಮೀಪಿಸಿದ ದುಷ್ಕರ್ಮಿಗಳು ಹೊಡೆದ ಗುಂಡಿಗೆ ಶೇಖ್ ಅವರು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.
ಜಹೀರ್ ಶೇಖ್ ಅವರ ಪತ್ನಿ ಜೂಲಿ ಬೀಬಿ ಹೇಳಿರುವ ಪ್ರಕಾರ ತನ್ನ ಪತಿಯನ್ನು ಕೇತುಗ್ರಾಮ 1 ಪಂಚಾಯತ್ ಸಮಿತಿಯ ಪಿಡಬ್ಲ್ಯುಡಿ ಮುಖ್ಯಸ್ಥ ಜಹಾಂಗೀರ್ ಶೇಖ್ ಎಂಬಾತ ಕೊಂದಿದ್ದಾನೆ.
ಜಹೀರ್ ಅವರ ಸಾವಿನಿಂದ ಕೋಪೋದ್ರಿಕ್ತರಾದ ಅವರ ಬೆಂಬಲಿಗರು, ಜಹಾಂಗೀರ್ ಶೇಖ್ ಅವರ ಮನೆಯ ಪಕ್ಕದ ಗೋದಾಮಿನ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದರು. ಮಾತ್ರವಲ್ಲದೆ ಜಹಾಂಗೀರ್ನ ಚಿಕ್ಕಪ್ಪನ ಮನೆಗೂ ಅವರು ಬೆಂಕಿ ಹಚ್ಚಿದರು.
“ನಾವು ಈ ಘಟನೆಗಳಿಗೆ ಸಂಬಂಧಿಸಿ ಹಲವಾರು ವ್ಯಕ್ತಿಗಳನ್ನು ಬಂಧಿಸಿ ಪ್ರಶ್ನಿಸುತ್ತಿದ್ದೇವೆ ಎಂದು ಕೇತುಗ್ರಾಮ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು
CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.