ಮತ್ತೆ ಬಂದರು ಪಾಂಡವರು!
Team Udayavani, Apr 14, 2017, 3:50 AM IST
ಅದು 1978. ಪುಟ್ಟಣ್ಣ ಕಣಗಾಲ್ ನಿರ್ದೇಶನದ “ಪಡುವಾರಳ್ಳಿ ಪಾಂಡವರು’ ಎಂಬ ಅದ್ಭುತ ಚಿತ್ರ ಬಿಡುಗಡೆಯಾಗಿ ಇತಿಹಾಸ ಬರೆದಿತ್ತು. ನಾಲ್ಕು ದಶಕದ ಬಳಿಕ ಅದೇ ಹೆಸರಿನ ಸಿನಿಮಾವೊಂದು ಈಗ ಸೆಟ್ಟೇರುತ್ತಿದೆ. ಆದರೆ, ಅದು “1989′ ರಲ್ಲಿನ ಪಡುವಾರಳ್ಳಿ ಪಾಂಡವರ ಕಥೆ! ಆದರೆ, ಪುಟ್ಟಣ್ಣ ಅವರ ಚಿತ್ರಕ್ಕೂ ಹೊಸಬರ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅಂದಹಾಗೆ, ಹೊಸ ತಂಡ ಸೇರಿಕೊಂಡು ಮಾಡುತ್ತಿರುವ ಆ ಚಿತ್ರಕ್ಕೆ “ಪಡುವಾರಳ್ಳಿ ಪಾಂಡವರು ಇನ್ 1989′ ಎಂದು ಹೆಸರಿಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ಜಗ್ಗು ಶಿರ್ಸಿ ನಿರ್ದೇಶಕರು. ಹೊಸ ಪ್ರತಿಭೆಗಳನ್ನೆಲ್ಲಾ ಒಗ್ಗೂಡಿಸಿ, ಹೊಸಬಗೆಯ ಕಥೆ ಮಾಡಿಕೊಂಡು ರೆಟ್ರೋ ಸ್ಟೈಲ್ನಲ್ಲೇ ಸಿನಿಮಾ ಮಾಡೋಕೆ ಹೊರಟಿದ್ದಾರೆ.
ಪುಟ್ಟಣ್ಣ ಅವರ “ಪಡುವಾರಳ್ಳಿ ಪಾಂಡವರು’ ಚಿತ್ರ ಬಂದ ನಂತರದ ಹದಿಮೂರು ವರ್ಷಗಳು ಉರುಳಿದ ಮೇಲೆ ಅದೇ ಪಡುವಾರಳ್ಳಿಯಲ್ಲಿ ಏನೆಲ್ಲಾ ಆಗೋಯ್ತು ಎಂಬ ಕಲ್ಪನೆಯೊಂದಿಗೆ ಸಿನಿಮಾ ಮಾಡುತ್ತಿದ್ದಾರಂತೆ. ಜೋಗ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ. 60 ದಿನಗಳ ಕಾಲ ಚಿತ್ರೀಕರಿಸುವ ಯೋಜನೆ ಜಗ್ಗು ಅವರದು. ಈ ಸಿನಿಮಾದ ವಿಶೇಷವೆಂದರೆ, ಪುಟ್ಟಣ್ಣರ “ಪಡುವಾರಳ್ಳಿ’ ಸಿನಿಮಾದಲ್ಲಿದ್ದ ಸ್ವಾಮೀಜಿ ಪಾತ್ರ ಇಲ್ಲಿಯೂ ಮುಂದುವರೆಯಲಿದೆ. ಆ ಚಿತ್ರದಲ್ಲಿ ಪಾಂಡವರು ದುಷ್ಟರನ್ನು ಓಡಿಸಿಕೊಂಡು ಹೋಗುವ ಕ್ಲೈಮ್ಯಾಕ್ಸ್ ಇತ್ತು. ಇಲ್ಲಿ ಕೌರವರ ದಂಡು ಪುನಃ ಪಡುವಾರಳ್ಳಿಯಲ್ಲಿ ಉದ್ಭವ ಆಗೋದನ್ನು ತೋರಿಸಲಾಗುವುದು ಎಂಬುದು ಜಗ್ಗು ಮಾತು.
ಪುಟ್ಟಣ್ಣರ ಚಿತ್ರದ ಸ್ಪೂರ್ತಿ ಪಡೆದು ಹುಟ್ಟಿಕೊಂಡ ಈ ಕಥೆಗೆ ಐವರು ನಾಯಕರಿದ್ದಾರೆ. ಮುಂಬೈನ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ಕಲಿತ ವಿನು ವೆಂಕಟೇಶ್, ಸತೀಶ್, ಜಾನ್, ಮಹಾಸತಿ, ಆಶಾ ಭಂಡಾರಿ, ಬಸವರಾಜ್ ಬಣಕಾರ್, ಇತರರು ನಟಿಸಿದ್ದಾರೆ. ಇವರೊಂದಿಗೆ ಸ್ವಸ್ತಿಕ್ ಶಂಕರ್ ಹಾಗೂ ಸ್ವಾಮೀಜಿ ಪಾತ್ರದಲ್ಲಿ ಜಿ.ವಿ.ಕೃಷ್ಣ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು, ಚಿತ್ರಕ್ಕೆ ಬಕ್ಕೇಶ್ ರೊನಾಡ್ ಹಾಗೂ ಪಂಚಮ್ದೇವ್ ಸಂಗೀತ ನೀಡಿದ್ದಾರೆ. ಈ ಪೈಕಿ ಪಂಚಮ್ ದೇವ್ ರಂಗಕಲಾವಿದರಾಗಿದ್ದು, ಅವರಿಲ್ಲಿ ರೊಮ್ಯಾಂಟಿಕ್ ಹಾಡೊಂದನ್ನು ಸಂಯೋಜಿಸಿದ್ದಾರಂತೆ. ನಾಯಕ ವಿನು ವೆಂಕಟೇಶ್ಗೆ
ಇದು ಮೊದಲ ಚಿತ್ರವಾಗಿದ್ದು, ಅವರ ಆಯ್ಕೆ ಮಾಡಿದ್ದಕ್ಕೆ ಖುಷಿಯಾಗಿದೆಯಂತೆ. ನಾಯಕಿ ಆಶಾಭಂಡಾರಿ ಮೂಲತಃ ಭರತನಾಟ್ಯ ಕಲಾವಿದೆಯಾಗಿದ್ದು, ಮಾಡೆಲಿಂಗ್ನಲ್ಲೂ ಮಿಂದೆದ್ದವರು. ಆಡಿಷನ್ ಮೂಲಕ ಅವರಿಲ್ಲಿ ಆಯ್ಕೆಯಾಗಿದ್ದನ್ನು ಹೇಳಿಕೊಂಡರು.
ಹಿರಿಯ ಕಲಾವಿದ ಸ್ವಸ್ತಿಕ್ ಶಂಕರ್ಗಿಲ್ಲಿ ಕೌರವ ದಂಡಿನಲ್ಲಿ ಕಾಣಿಸಿಕೊಳ್ಳುವ ಮುಖ್ಯಸ್ಥನ ಪಾತ್ರವಂತೆ. ಅಂದು ನಿರ್ಮಾಪಕ ಅಣಜಿ ನಾಗರಾಜ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭಹಾರೈಸಿದರೆ, ಸಂಚಾರಿ ವಿಜಯ್ ಸಾಂಗ್ ಮೇಕಿಂಗ್ ವೀಡಿಯೋ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nisha Ravikrishnan: ಮಹಿಳಾ ಪ್ರಧಾನ ʼಅಂಶುʼ: ಕುತೂಹಲ ಮೂಡಿಸಿದ ಟ್ರೇಲರ್
Vaibhavi Shandilya: ಮಾರ್ಟಿನ್ ಪ್ರೀತಿ ಪಾತ್ರಳು ನಾನು…; ವೈಭವಿ ಕಣ್ತುಂಬ ನಿರೀಕ್ಷೆ
Radhika kumaraswamy: ಭೈರಾದೇವಿ ನನ್ನ ಡ್ರೀಮ್ ಪ್ರಾಜೆಕ್ಟ್…: ರಾಧಿಕಾ
Sandalwood: ಮಿಂಚುಹುಳ, ಗೋಪಿಲೋಲ, ಜನಕ.. ಇಂದು ತೆರೆಗೆ
Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್ವುಡ್ನ ಪಾರ್ಟ್-2 ಕ್ರೇಜ್
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.