ರಂಗ ಕನಸಿನ ಸರದಾರ ಲಕ್ಷ್ಮಣ ಪೂಜಾರಿ


Team Udayavani, Apr 14, 2017, 3:50 AM IST

14-KALA-1.jpg

ನಾಟಕದ ಗೀಳು ಹಚ್ಚಿಕೊಂಡವರು ಕಲಾ ಸಾಗರ ತಂಡದ “ಅರ್ಥವಿಲ್ಲದ ಬದುಕು’ ನಾಟಕವನ್ನು ನೋಡಿರಬಹುದು. ನಾಟಕ ನೋಡಿದವರು ಅದರಲ್ಲಿನ ಟಿ.ಸಿ. ಜಗಲೂರು ಪಾತ್ರ ವಹಿಸಿದ ಲಕ್ಷ್ಮಣ ಪೂಜಾರಿಯನ್ನು ಮರೆಯಲು ಸಾಧ್ಯವೇ? ಕಂಚಿನ ಕಂಠದ, ಗಂಭೀರ ಮುಖದ, ಕಣ್ಣುಗಳಲ್ಲೇ ನೋವನ್ನೂ ನಗುವನ್ನೂ ಸೂಸುವ ಲಕ್ಷ್ಮಣ ನಾಟಕ ನೋಡಿದವರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. “ಅಭಿನವ ಚಾಪ್ಲಿನ್‌’ ನಾಟಕದ ಚಾಪ್ಲಿನ್‌ ಪಾತ್ರದಲ್ಲಾಗಲಿ, “ಅರಳಿದ ಗಝಲುಗಳು’ ನಾಟಕದ ಕಲ್ಲು ಮಿಯಾ ಪಾತ್ರದಗಲಿ, ನಾಟಕದ ಪಾತ್ರಕ್ಕೆ ಜೀವ ತುಂಬುತ್ತಾರೆ ಲಕ್ಷ್ಮಣ ಪೂಜಾರಿ.

ಕುಂದಾಪುರ, ಶೀರೂರು ಗ್ರಾಮದ ಉದೂರು ಎಂಬ ಚಿಕ್ಕ ಊರು ಲಕ್ಷ್ಮಣರದ್ದು. ಪ್ರಸ್ತುತ ಹೊಟೇಲಿನಲ್ಲಿ ಸಪ್ಲಾಯರ್‌ ಕೆಲಸ ಮಾಡುತ್ತಿದ್ದು, ನಾಟಕದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 

ಲಕ್ಷ್ಮಣ ಪೂಜಾರಿಯವರದ್ದು ಹುಟ್ಟು ಪ್ರತಿಭೆ. ಚಿಕ್ಕವನಿರುವಾಗಲೇ ಬಯಲಾಟ ನೋಡುತ್ತ ಕನಸಿನ ಲೋಕಕ್ಕೆ ತೆರಳುತ್ತಿದ್ದರು. ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ವಿದ್ಯಾಭ್ಯಾಸಕ್ಕೆ ಮಂಗಳ ಹಾಡಿ ಹೊಟೇಲ್‌ ಕೆಲಸಕ್ಕೆ ಸೇರಿದರು. ಹಲವು ಊರುಗಳಲ್ಲಿ, ಹಲವು ಹೊಟೇಲುಗಳಲ್ಲಿ ಕೆಲಸ. ಬೆಂಗಳೂರಿನ ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದರೂ ಬಣ್ಣ ಹಚ್ಚುವ ಕನಸನ್ನು ಕಾಣತೊಡಗಿದರು. ಕನ್ನಡದ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರು ಲಕ್ಷ್ಮಣ ಕೆಲಸ ಮಾಡುತ್ತಿದ್ದ ಹೊಟೇಲಿಗೆ ಬಂದಾಗ ಬಣ್ಣ ಹಚ್ಚುವ ಕನಸು ಮತ್ತೆ ಚಿಗುರೊಡೆಯಿತು. ಗಿರೀಶ ಕಾಸರವಳ್ಳಿಯವರ ಸಲಹೆಯಂತೆ ನಟನೆಯಲ್ಲಿ ತರಬೇತಿ ಪಡೆಯಲು ನಿರ್ಧರಿಸಿದರು. ಕಷ್ಟಪಟ್ಟು ಹಣ ಸಂಪಾದಿಸಿ ಖ್ಯಾತ ತರಬೇತಿ ಕೇಂದ್ರವೊಂದರಲ್ಲಿ ನಟನೆಯ ತರಬೇತಿ ಪಡೆದರು. ಸ್ನೇಹಿತನೊಬ್ಬ ಹೆಸರಾಂತ ನಾಟಕ ತಂಡ “ಕಲಾ ಸಾಗರ’ಕ್ಕೆ ಪರಿಚಯಿಸಿದಾಗ ಲಕ್ಷ್ಮಣರ ರಂಗ ಪ್ರಯಾಣ ಶುರುವಾಯಿತು. 

ಲಕ್ಷ್ಮಣರ ಮೊದಲ ನಾಟಕ ಕಲಾ ಸಾಗರ ತಂಡದೊಡನೆ, ನಾಟಕ -“ವಲಸೆ ಹಕ್ಕಿ ಹಾಡು’. ಇದೇ ನಾಟಕ ತಂಡದೊಡನೆ “ಅರ್ಥವಿಲ್ಲದ ಬದುಕು’, “ಕೊಳಗ’ ಮುಂದಿನ ನಾಟಕಗಳಾಗಿದ್ದವು. ಅಲ್ಲದೆ ಡ್ರಾಮಾಟ್ರಿಕ್ಸ್‌ ತಂಡದೊಡನೆ “ರಾಮ ಫ‌ಮ್‌ ತೆನಾಲಿ, “ಅರಳಿದ ಗಜಲುಗಳು’, “ಅಭಿನವ ಚಾಪ್ಲಿನ್‌’ ಹೀಗೆ ಹಲವಾರು ನಾಟಗಳಲ್ಲಿ ಅಭಿನಯಿಸಿದ್ದಾರೆ. ನಾಟಕವಲ್ಲದೆ ಕೆಲವು ಕನ್ನಡ ಟಿವಿ ಸಿರಿಯಲ್‌ ಮತ್ತು “ಕಾಮನ ಬಿಲ್ಲು’, ‘ಕೌತುಕ’ ಎಂಬ ಎರಡು ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಲಕ್ಷ್ಮಣ ಈಗ ಬೆಂಗಳೂರಿನ ಬಿಟಿಎಂ ಲೇಔಟ್‌ನ ಹೊಟೇಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸಹ ಕೆಲಸಗಾರರ ಮತ್ತು ಹೊಟೇಲ್‌ ಮಾಲಕರ ಸಹಕಾರದಿಂದ ಉದ್ಯೋಗ ಮತ್ತು ಅಭಿನಯವೆಂಬ ಅವಳಿ ದೋಣಿಗಳಲ್ಲಿ ಸಾಗಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಲಕ್ಷ್ಮಣ. 

ಗೀತಾ ಕುಂದಾಪುರ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.