ದಸರೀಘಟ್ಟದ ಶಕ್ತಿ ದೇವತೆ:  ಚೌಡೇಶ್ವರಿ ದೇವಿ 


Team Udayavani, Apr 15, 2017, 4:00 AM IST

13.jpg

 “ಕಲ್ಪತರು ನಾಡು’ ಎಂದೇ ಹೆಸರಾದ ತಿಪಟೂರು ತಾಲ್ಲೂಕಿನ ದಸರೀಘಟ್ಟ ಕ್ಷೇತ್ರವು ಶಕ್ತಿ ದೇವತೆ ಚೌಡೇಶ್ವರಿಯ ನೆಲೆ ನಾಡು. ಇದು ತುಮಕೂರು ಜಿಲ್ಲೆಯಲ್ಲಿದೆ.

 ದಸರೀಘಟ್ಟ  ಕ್ಷೇತ್ರದ  ಚೌಡೇಶ್ವರಿದೇವಿಯು  ಭಕ್ತರ ಕಷ್ಟ-ನಷ್ಟಗಳಿಗೆ ತನ್ನ ಕಳಶದ ಬರವಣಿಗೆ ಮೂಲಕ ಪರಿಹಾರ ಸೂಚಿಸುತ್ತಾಳೆ ಎನ್ನುವ ನಂಬಿಕೆ ಇದೆ.  ಇಂತಹ ಶಕ್ತಿಯನ್ನು ಹೊಂದಿರುವ ಚೌಡೇಶ್ವರಿಯನ್ನು ನೋಡಲು ಹಲವೆಡೆಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಅಷ್ಟೇ ಅಲ್ಲ, ವಿವಿಧ ಕ್ಷೇತ್ರಗಳ ಗಣ್ಯರೂ ಸಹ ಇಲ್ಲಿಗೆ ಭೇಟಿ ನೀಡಿ ದೇವಿಯ ದರ್ಶನಗೈದು ಪುನೀತರಾಗಿ¨ªಾರೆ.

 ತಿಪಟೂರಿನಿಂದ ಅನತಿ ದೂರದಲ್ಲಿರುವ ಈ ಕ್ಷೇತ್ರಕ್ಕೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಸಾಲು ತೆಂಗಿನ ಮರಗಳು ತಂಪು ಗಾಳಿ ಸೂಸುತ್ತಾ, ಭಕ್ತಾಧಿಗಳಿಗೆ ಸ್ವಾಗತ ಕೋರುವುದರ ಜೊತೆಗೆ ಕ್ಷೇತ್ರಕ್ಕೆ ಭೇಟಿ ನೀಡಿರೆಂದು ಕೈ ಬೀಸಿ ಕರೆಯುತ್ತಿವೆ. 

ಸುಮಾರು ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ ಚೌಡೇಶ್ವರಿಯ ದೇವಾಲಯ  ಸುಂದರವಾಗಿದೆ. ಪ್ರವೇಶ ದ್ವಾರದಲ್ಲಿ 78 ಅಡಿ ಎತ್ತರದ ಭವ್ಯ ರಾಜಗೋಪುರವಿದೆ. ದೇವಾಲಯದ ಗರ್ಭಗೃಹದಲ್ಲಿ ಹುತ್ತದ ಮಣ್ಣಿನಿಂದ ನಿರ್ಮಿಸಲಾಗಿರುವ ಚೌಡೇಶ್ವರಿಯ ವಿಗ್ರಹವಿದೆ. ಇಲ್ಲಿರುವ ಹುತ್ತದಲ್ಲಿ ಈ ಹಿಂದೆ ಚೌಡೇಶ್ವರಿಯು ಲೀನವಾಗಿ¨ªಾಳೆಂಬ ಪ್ರತೀತಿ ಇದೆ. ಇನ್ನು ದೇಗುಲದ ಮುಂದಿರುವ ಪುಟ್ಟ ದೇವಾಲಯದಲ್ಲಿ ಈ ಕ್ಷೇತ್ರಪಾಲಕಳಾದ ಕರಿಯಮ್ಮನ ಕಪ್ಪುಶಿಲೆಯ ಮೂರ್ತಿ ಇದೆ. ಸುಂದರವಾಗಿರುವ ಈ ಶಿಲಾಮೂರ್ತಿಗೆ ಅಭೀಷೇಕ ಮಾಡಲಾಗುತ್ತದೆ. ಆದಿಚುಂಚನಗಿರಿ ಮಠವು ಈ ಕ್ಷೇತ್ರದ ಸಂಪೂರ್ಣ ಆಡಳಿತ ಜವಬ್ದಾರಿಯನ್ನು ವಹಿಸಿಕೊಂಡಿದೆ. ಅದರ ಶಾಖಾಮಠವು ಇಲ್ಲಿದ್ದು, ದೇವಾಲಯದ ಉಸ್ತುವಾರಿ ಹೊತ್ತುಕೊಂಡಿದೆ.

ಬರೆಯುವ ಅಮ್ಮ

ಇಲ್ಲಿರುವ ಚೌಡೇಶ್ವರಿಯ ಉತ್ಸವಮೂರ್ತಿಯನ್ನು “ಬರೆಯುವ ಅಮ್ಮ’ ಎಂದು ಕರೆಯಲಾಗುತ್ತದೆ. ಇದು ಈ ಕ್ಷೇತ್ರದ ವಿಶೇಷ ಮತ್ತು ಕುತೂಹಲ ಸಂಗತಿಯಾಗಿದೆ. ಭಕ್ತರ ಸಮಸ್ಯೆಗಳಿಗೆ ಈ ಉತ್ಸವಮೂರ್ತಿಯು ತನ್ನ ಕಳಸದ ಬರವಣಿಗೆಯ ಮೂಲಕ ಪರಿಹಾರ ಸೂಚಿಸುತ್ತದೆ ಎನ್ನುವ ನಂಬಿಕೆ ಇದೆ.  ದೇವಿಯು ತನ್ನ ಮುಂದಿರುವ ಮಠದ ಹಲಗೆಯಲ್ಲಿ ಹರಡಿರುವ ರಾಗಿ ಹಿಟ್ಟು, ಅರಿಶಿಣ ಅಥವಾ ಅಕ್ಕಿಯಲ್ಲಿ ತನ್ನ ಕಳಶದ ತುದಿಭಾಗದಿಂದ ಅಕ್ಷರ ಮೂಡಿಸಿ ಭಕ್ತಾದಿಗಳಿಗೆ ಉತ್ತರ ಸೂಚಿಸುವುದರ ಜೊತೆಗೆ ಆಶ್ಚರ್ಯ ಮೂಡಿಸುತ್ತದೆ.

ಇದಲ್ಲದೆ ಭಕ್ತರು ತಮ್ಮ ಮನಸ್ಸಿನಲ್ಲಿ ಯಾವುದಾದರೂ ವಸ್ತುವನ್ನು ಕುರಿತು ಅಂದುಕೊಂಡರೆ ಅದನ್ನು ಉತ್ಸವಮೂರ್ತಿ ತೋರಿಸುತ್ತದೆ. ಇದೂ ಸಹ ಈ ಕ್ಷೇತ್ರದ ವಿಶೇಷ. ಭಕ್ತರ ಸಮಸ್ಯೆಗಳ ನಿವಾರಣೆಗಾಗಿ ಇಲ್ಲಿ ವಿವಿಧ ಪೂಜೆಗಳನ್ನು ನಡೆಸಲಾಗುತ್ತದೆ.

ಪ್ರತಿವರ್ಷ ವಿಜಯದಶಮಿಯಂದು ಈ ಕ್ಷೇತ್ರದಲ್ಲಿ ಮುಳ್ಳುಗದ್ದಿಗೆ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ರಾಶಿಗಟ್ಟಲೆ ತಂದು ಹಾಕಿರುವ ಕಾರೆ ಮುಳ್ಳುಗಳನ್ನು ಉತ್ಸವಮೂರ್ತಿ ಹೊತ್ತವರು ತುಳಿಯುತ್ತಾರೆ. ಆದರೆ ಯಾರಿಗೂ ಏನೂ ತೊಂದರೆಯಾಗುವುದಿಲ್ಲವೆಂದು ಸ್ಥಳೀಯರು ಹೇಳುತ್ತಾರೆ.

ನವರಾತ್ರಿಯ ಒಂಭತ್ತು ದಿನ ಈ ದೇವಿಗೆ ವಿವಿಧ ಬಗೆಯ ಅಲಂಕಾರ ಮಾಡಲಾಗುತ್ತದೆ. ಅದನ್ನು ನೋಡುವುದೇ ಬಲು ಸೊಗಸು. ಯುಗಾದಿ ಕಳೆದ ಹದಿನೈದು ದಿನಕ್ಕೆ ದೇವಿಯ ಜಾತ್ರೆಯು ನಡೆಯುತ್ತದೆ.

ಕಾರೇಮುಳ್ಳಿನ ಮೇಲೆ ಭಕ್ತರ ನಡಿಗೆ !

ದೇವರಿಗಾಗಿ ಭಕ್ತರು ಎಂತಹ ಸಾಹಸಗಳಿಗೂ ಸಹ ಎದೆಗುಂದುವುದಿಲ್ಲ. ಕೆಂಡದ ಮೇಲೆ ನಡೆಯುವುದು, ಎಣ್ಣೆಯ ಮೇಲೆ ಹತ್ತುವುದು ಮುಂತಾದ ಆಚರೆಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ ಇಲ್ಲಿನ ಜನರು ರಾಶಿ ಹಾಕಿರುವ ಕಾರೇಮುಳ್ಳಿನ ಮೇಲೆ ಯಾವುದೇ ಭಯವಿಲ್ಲದೆ ನಡೆಯುತ್ತಾರೆ.

ಇಂತಹ ವಿಶೇಷ ಆಚರಣೆಯನ್ನು ನೋಡಬೇಕೆಂದರೆ ನೀವು  ದಸರೀಘಟ್ಟಕ್ಕೆ ಬರಬೇಕು. ಈ ಗ್ರಾಮದಲ್ಲಿ ಪ್ರತಿ ವರ್ಷ ವಿಜಯದಶಮಿಯ ದಿನದಂದು ಚೌಡೇಶ್ವರಿಯ  ಮುಳ್ಳು ಗದ್ದಿಗೆ  ಎಂಬ ಆಚರಣೆ ನಡೆಯುತ್ತದೆ.

ರಾಶಿ ಹಾಕಿದ ಕಾರೇಮುಳ್ಳುಗಳ ಮೇಲೆ ದೇವರು ಹೊತ್ತವರು ಮೊದಲು ನಡೆಯುತ್ತಾರೆ. ಆನಂತರ ಇಲ್ಲಿ ಸೇರುವ ನೂರಾರು ಭಕ್ತರು ನಡೆದು ಹೋಗಿ ಸಂಭ್ರಮ ಪಡುತ್ತಾರೆ.

ಆ ದಿನ ಈ ಗ್ರಾಮದ ಜನರು ಕಾಡಿಗೆ ತೆರಳಿ ಕಾರೇ ಮುಳ್ಳುಗಳನ್ನು ಕಡಿದು ನಾಲ್ಕು ಟ್ರಾಕ್ತ$rರ… (ಮಿನಿ ಲಾರಿ ) ತುಂಬಾ ಮುಳ್ಳುಗಳನ್ನು ತಂದು ದೇವಾಲಯದ ಆವರಣದಲ್ಲಿ ರಾಶಿ ಹಾಕುತ್ತಾರೆ. ಅನಂತರ ಈ ಮುಳ್ಳಿನ ರಾಶಿಗೆ ಅರ್ಚಕರು ಬಂದು ಪೂಜೆ ಮಾಡುತ್ತಾರೆ.

ಮುಳ್ಳಿನ ರಾಶಿಯ ನಾಲ್ಕು ದಿಕ್ಕುಗಳಿಗೆ ಪೂಜೆ ಮುಗಿದ ಬಳಿಕ ನಾಲ್ಕು ಜನ ಭಕ್ತರು ಚೌಡೇಶ್ವರಿಯ ಉತ್ಸವ ಮೂರ್ತಿಯನ್ನು ತಮ್ಮ ಹೆಗಲ ಮೇಲೆ ಹೊತ್ತು, ಆವೇಶಭರಿತವಾಗಿ ಮುಳ್ಳಿನ ರಾಶಿಯ ಮೇಲೆ ಹತ್ತಿ ನಡೆದು ಬರುತ್ತಾರೆ. ಹಾಗೇ ಬಂದ ದೇವಿಗೆ ಸ್ವಾಮೀಜಿಗಳು ಹಾರ ಹಾಕುತ್ತಾರೆ. ಆರೇಳು ಬಾರಿ ಈ ರೀತಿಯ ಸಂಪ್ರದಾಯ ಮುಂದುವರೆಯುತ್ತದೆ. ಇಲ್ಲಿನ ಮತ್ತೂಂದು ವಿಶೇಷವೆಂದರೆ ಈ ಆಚರಣೆ ಆದಿಚುಂಚನಗಿರಿ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆಯುತ್ತದೆ. ಇದನ್ನು ನೋಡಲು ಸಾವಿರಾರು ಜನರು ಅಂದು ಸೇರುತ್ತಾರೆ.

ದೇವಿಯನ್ನು ಹೊತ್ತವರು ಮುಳ್ಳು ತುಳಿದ ನಂತರ ಇಲ್ಲಿನ ನೂರಾರು ಭಕ್ತರು ಕಾರೇ ಮುಳ್ಳುಗಳನ್ನು ತುಳಿಯುತ್ತಾರೆ.

ಇಲ್ಲಿ ಮುಳ್ಳುಗಳ ರಾಶಿ ತುಳಿಯುವ ಜನರಿಗೆ ಇದುವರೆಗೂ ಸಹ ಯಾವುದೇ ತೊಂದರೆಯಾಗಿಲ್ಲವಂತೆ. 

 ತಲುಪುವ ಹಾದಿ.  ತಿಪಟೂರು ತಾಲೂಕು ಕೇಂದ್ರದಿಂದ ದಕ್ಷಿಣಕ್ಕೆ ಕೇವಲ ಹತ್ತು ಕಿಲೋಮೀಟರ… ದೂರದಲ್ಲಿದೆ ದಸರೀಘಟ್ಟ. ಬೆಂಗಳೂರಿನಿಂದ ಸುಮಾರು 150 ಕಿ.ಮೀ. ದೂರವಿದ್ದು, ತಿಪಟೂರಿಗೆ ಬಸ್‌ ಮತ್ತು ರೈಲುಗಳ ಸೌಲಭ್ಯವಿದೆ. ಈ ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಕೂಡ ಇದೆ. 

– ದಂಡಿನಶಿವರ ಮಂಜುನಾಥ್‌

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.